ಸಾಕ್ಷಿ



ನಾನು ನಿನಗೆ ಮೊದಲ ಪತ್ರ ಬರೆದ ದಿನ ನೆನೆಪಿಲ್ಲದೇ ಇರಬೊಹುದು, ಆದರೆ ಆ ಸ್ಥಿತಿ ನೆನೆಪಿದೆ. ಆಗ ನಡೆದ ಯಾವುದೋ ಕಾರಣಕ್ಕೆ, ಯಾಕೋ ಎಲ್ಲವನ್ನೂ ತೊರೆಯಲು ಸಿದ್ದನಾಗಿ, ಹಾಗೆ ತೊರೆಯಲು ತೊಡಗಿದಾಗ ಹಲವರನ್ನು ತೊರೆದು ನಿನ್ನ ಸಂಗಡ ಬಯಸಿ ನಿನ್ನನ್ನ ಅಪ್ಪಿಕೊಂಡೆ. ಆಗ ನಿನಗೆ ನನ್ನ ಮೊದಲ ಪತ್ರ ಬರೆದಿದ್ದೆ. ನಿನ್ನಿಂದ ಯಾವ ಉತ್ತರವೂ ಬರುವುದಿಲ್ಲ ಅಂತ ಸ್ಪಷ್ಟವಾಗಿ ತಿಳಿದಿದ್ದರೂ ಬರೆದೆ. ನಿನ್ನ ಉತ್ತರಕ್ಕಿಂತ ಹೆಚ್ಚಾಗಿ ನೀನು ನನ್ನ ಮಾತನ್ನ ಕೇಳೆಬೇಕಿತ್ತು ಅಷ್ಟೆ. ಹೀಗೇ ಬರೆಯುತ್ತಾ ಹೋದೆ. ಕಂಡದ್ದನ್ನ, ಕಣ್ಣಿಗೆ ಕಂಡ ಪ್ರತಿಯೊಂದನ್ನ. ಕಂಡು ಅದನ್ನ ಅನುಭವಿಸಿ, ನಿನಗೆ ತಿಳಿಸುತ್ತಾ ಹೋದೆ. ಯಾವುದೋ ಕ್ಷಣ ನಿಂತುಬಿಟ್ಟೆ. ನಿನ್ನನ್ನು ಬಿಟ್ಟು ಹೊರಟು ಬಿಡುವ ಸಂದರ್ಭ ಒದಗಿತು, ಅಲ್ಲ ನಾನೇ ನಿರ್ಮಿಸಿಕೊಂಡೆ. ಹೊರಟು ಬಿಟ್ಟೆ. ಕಡೆಗೆ ನೀನೂ ನನಗೆ ಬೇಸರವಾಗಿ ಹೋಗಿದ್ದೆ. ನಿಜಕ್ಕೂ ಅದು ಬೇಸರವ! ಮತ್ತೇ ಮತ್ತೇ ಪ್ರಶ್ನಿಸಿಕೊಳ್ಳುತ್ತಲೇ ಇದ್ದೇನೆ.

ನಿನ್ನನ್ನೂ ನಿನ್ನ ಜೊತೆಗಿನ ಮಾತನ್ನೂ ಬಿಟ್ಟಾಗ ನಾನು ಎಲ್ಲರೊಡನೆಯೂ ಮಾತಾಡತೊಡಗಿದೆ. ಏನೋ ಮಾಡಬೇಕು. ಸಾದಿಸಬೇಕು. ಕಡಿದು ಕಟ್ಟೆ ಹಾಕಿಬಿಡಬೇಕು. ನನ್ನದು ಎಂದು ಏನನ್ನಾದರೂ ಸ್ಥಾಪಿಸಿಬಿಡಬೇಕು. ಎಲ್ಲರೊಳೊಗೊಂದಾಗಿ ಸೇರಲು ತೊಡಗಿದೆ. ಜಗತ್ತು ವಿಶಾಲವಾಗಿತ್ತು. ಎಲ್ಲರಿಗೂ ನಾನು ಬೇಕಿತ್ತು. ಅಥವಾ ನಾನು ಹಾಗೆ ಬಾವಿಸಿದೆ. ಈಗ ಅನ್ನಿಸುತ್ತೇ, ಅವರಿಗೆಲ್ಲರಿಗೂ ನಾನು ಬೇಕಿತ್ತು ಎಂಬೋದು ಮಾತ್ರ ಸತ್ಯವಲ್ಲ. ನನಗೆ ಎಲ್ಲರೂ ಬೇಕಿತ್ತು, ಅದು ಪರಮ ಸತ್ಯ. ಆಗಾಗ ಅನ್ನಿಸುತ್ತಿತ್ತು, ಮೌನವಾಗಿ ಇದ್ದು ಬಿಡಬೇಕು ಅಂತ. ಆದರೆ ಅಗಲಿಲ್ಲ. ಅಸ್ಥಿತ್ವದ ಬಯಕೆ ಮಾತನಾಡಲು ಪ್ರೇರೇಪಿಸುತ್ತೆ. ಮಾತು ಅಸ್ಥಿತ್ವದ ಮೂಲ ಬೇರು. ಬಿಡೋದು ಹೇಗೆ. ಬಿಡಬೇಕೇಕೆ ಅನ್ನೋ ಅಹಂ. ಹಾಗಾಗಿ ಮಾತಿಗೆ ತೊಡಗೋದು, ಮಾತು ಮುಗಿದ ಮೇಲೆ ಅಲ್ಲೊಂದು ಸಂಬಂಧ ನಿರ್ಮಾಣವಾಗುತ್ತೆ. ಎಲ್ಲೋ ಚುಚ್ಚುತ್ತೆ ಅದು ನಂದಲ್ಲ ಅಂತ. ವಾಸ್ತವ ಹೇಳುತ್ತೆ, ಸುಮ್ಮನೆ ಹೆಗಲಿಗೇರಿಸಿಕೊಂಡು ನಡೆ ಅಂತ. ಬರಿಗಾಲಲ್ಲಿ ಹೆಗೆಲಿಗೇರಿಸಿಕೊಂಡು ಬಿಸಿಲ ದಾರಿಗಳಲ್ಲಿ ಹೊತ್ತ ಕಳೆಯಲು ತೊಡಗುತ್ತೆ. ಮಾತುಗಳನ್ನ ಹುಡುಕಿ ಹೊರಟೆ. ಬೇರೆಯವರ ಮಾತುಗಳನ್ನ ಕೇಳುವ ಸಲುವಾಗಿ ಅಥವಾ ನನ್ನ ಮಾತನ್ನು ಬೇರೆಯವರು ಕೇಳಬೇಕು ಎಂಬೋ ತೆವಲಿಗಾಗಿ. ನಿನ್ನನ್ನು ಬಿಟ್ಟು ಬಂದು ಹೀಗೆ ಸಿಕ್ಕವರ ಬಳಿ ಮಾತಿಗಿಳಿದೆ, ಎಲ್ಲೆಲ್ಲೋ ಸುತ್ತಿದೆ, ಮತ್ತೇ ನಿನ್ನ ಬಳಿಗೆ ಬಂದಿದ್ದೀನಿ. ಈಗ ಮೊದಲಿನಂತಲ್ಲ ಎಂದು ನಿನ್ನ ಬಳಿ ಹೇಳಬಲ್ಲೆ. ಅದರ ಸತ್ಯಾಸತ್ಯತೆಯ ತೀರ್ಪು ನಿನಗೇ ಸೇರಿದ್ದು.
ಬದಲಾವಣೆ ನಿರಂತರವಾಗಿ ಜರುಗುತ್ತಿದ್ದರೂ ಬದಲಾವಣೆಯ ಅರಿವು ಮಾತ್ರ ಒಂದು ಕ್ಷಣದಲ್ಲಿ ಸಂಬವಿಸಿಬಿಡುತ್ತೆ. ಒಂದೇ ಕ್ಷಣ. ಹಿಂದೆ ನೋಡಿ ಮತ್ತೆ ಆ ಕ್ಷಣಕ್ಕೆ ಹೋಗಲಾರೆ, ಆ ಕ್ಷಣ ಜರುಗಿಬಿಟ್ಟಿದೆ. ಮುಗಿಯಿತು. ಆದರೆ ಆ ಕ್ಷಣದ ನೆನಪು ಉಳಿದಿದೆ. ಆ ನೆನೆಪಿನಿಂದಲೇ ಬದುಕು ಮುಂದೆ ಸಾಗುತ್ತೆ.


ಹುಡುಕುತ್ತಾ ಮುಂದೇನೋ ದೊಡ್ಡದೊಂದನ್ನ ಇಟ್ಟುಕೊಂಡು ನಡೆಯುತ್ತಾ ಇರೋದು. ನೇರವಾಗಿ ನಡೆಯುತ್ತಾ ಸಾಗೋವಾಗ ಇದ್ದಕ್ಕಿದ್ದಂತೆ ಪಕ್ಕನೆ, ಮತ್ತೊಂದೇನೋ ದಾರಿ ಬದಿ ಕೂತು ಎಳೆದು ಬಿಡುತ್ತೆ. ನನ್ನೆಲ್ಲಾ ನಿಯಂತ್ರಣ ತಪ್ಪಿ ನಾನು ಅದರೊಟ್ಟಿಗೆ ಹೊರಟು ಬಿಡುತ್ತೇನೆ. ಹೊರಡಲೇ ಬೇಕಿತ್ತು ಎಂಬೋ ರೀತಿಯಲ್ಲಿ. ಹೀಗೆ ಪ್ರತೀ ಕ್ಷಣವೂ ಜರುಗುತ್ತಲೇ ಇರುತ್ತೆ ನಮ್ಮ ಗಮನಕ್ಕೆ ಬಂದೂ ಬಾರದ ರೀತಿಯಲ್ಲಿ. ಹಲವು ಬಾರಿ ಏನನ್ನೋ ಬರೆಯಲು ತೊಡಗುತ್ತೇನೆ, ಆದರೆ ಅದು ಮತ್ತೇನನ್ನೋ ಬರೆಸಿಬಿಡುತ್ತದೆ. ನಾನು ಮೊದಲ ಪದವನ್ನ ಬರೆದಾಗ ಚಿಂತಿಸಿದ್ದು ಇದನ್ನಲ್ಲ. ಆದರೆ ಬರೆಯಲು ತೊಡಗಿದಾಗ ಬರಹವೇ ನನ್ನನ್ನ ನಡೆಸಿಬಿಟ್ಟಿದೆ. ನನ್ನ ನಿಯಂತ್ರಣ ತಪ್ಪಿ ಹೋದದದ್ದನ್ನ ನಾನು ಮತ್ತೇ ತಂದು ನಿಲ್ಲಿಸಲಾರೆ. ನಾನು ಬರೆಯಬೇಕು ಅಂತ ಅಂದುಕೊಂಡದ್ದು ನನ್ನ ಎದುರಿಗೇ ಕೈ ಚೆಲ್ಲಿ ಕೂತಿದೆ. ನಾ ಅದನ್ನ ಎತ್ತಿಕೊಳ್ಳಲಾರೆ. ಕೃತಿ ತನ್ನ ತಾನೆ ಬರೆದುಕೊಳ್ಳುತ್ತದೆ, ಅಲ್ಲಿಯೇ ಪಾತ್ರಗಳು, ಅಲ್ಲಿಯೇ ಸನ್ನಿವೇಶಗಳು ಹೀಗೆ ಎಲ್ಲವನ್ನೂ ಅಲ್ಲೇ ನಿರ್ಮಿಸುತ್ತಾ ತನ್ನ ತಾನೆ ನಿರ್ಮಿಸಿಕೊಳ್ಳೋಕೆ ಹೊರಟುಬಿಡುತ್ತೆ. ನನ್ನದನ್ನ ನಾ ಬರೆಯೋದು ಯಾವಾಗ ಅಂತ ಪ್ರಶ್ನಿಸಿಕೊಳ್ಳುತ್ತೇನೆ.

ಮಧ್ಯ ರಾತ್ರಿಯಲ್ಲಿ ಪ್ರತೀ ಅಕ್ಷರವನ್ನೂ ಕಾಯುತ್ತಾ ಕಟ್ಟುತ್ತಾ ಕೂತಿರುತ್ತೇನೆ. ಹಾಗೆ ಕೂತಿರಲೇ ಬೇಕು. ಇನ್ನೇನೂ ಮಾಡಲೂ ಆಗದಂತೆ ಅಕ್ಷರಗಳು ನನ್ನನ್ನ ಬಂದಿಸಿಟ್ಟುಬಿಡುತ್ತದೆ. ಕತ್ತಲ ರಾತ್ರಿಯ ರಸ್ತೆಗಳು. ಒಂದು ನರಪಿಳ್ಳೆಯೂ ಇಲ್ಲ. ಒಂದು ಚೂರೂ ಬೆಳಕಿಲ್ಲ. ಅಲ್ಲೆಲ್ಲೂ ಹತ್ತಿರದಲ್ಲೆಲ್ಲೂ ಮನೆಗಳೂ ಕಾಣುತ್ತಿಲ್ಲ. ನನ್ನದು ಒಂದು ಒಂಟಿಮನೆ ಹಾಗು ಕೊನೆಯ ಮನೆ. ಆ ಕೊನೆ ಮನೆಯಲ್ಲಿ ಮಧ್ಯ ರಾತ್ರಿಯ ನಿಶ್ಯಬ್ದ ಮೌನದಲ್ಲಿ ಬರೆಯುತ್ತಾ ಕೂತು ಏನೋ ನೆನಪಾದವನಂತೆ ಉರಿಯುತ್ತಿದ್ದ ಲೈಟನ್ನ ಆರಿಸಿ ಆ ರಸ್ತೆಗಳಲ್ಲಿ ಹುಚ್ಚನಂತೆ ಅಲೆಯುತ್ತೇನೆ. ಗೀ ಅನ್ನೋ ಶಬ್ದದ ಬೆನ್ನು ಹತ್ತಿ ಕತ್ತಲನ್ನ ತಟ್ಟಿ ಎಬ್ಬಿಸಿ ಕೇಳಲು ತೊಡಗುತ್ತೇನೆ. ನಾಯಿ ಬೊಗಳಬೊಹುದು, ಆ ಶಬ್ದ ಕೇಳಬೊಹುದು. ಎಷ್ಟೇ ಕಾದರೂ ಏನೇ ಮಾಡಿದರೂ ಯಾವ ಶಬ್ದವೂ ಕೇಳುವುದಿಲ್ಲ. ಏನೋ ಕಳದುಕೊಂಡ ಭಾವದಲ್ಲಿ ಕತ್ತಲನ್ನ ಶಪಿಸುತ್ತಾ ರಾತ್ರಿಯ ಆ ದಾರಿಯಲ್ಲಿ ಮುಖ ಕೆಳಗೆ ಮಾಡಿ ನಡೆಯುತ್ತಾ ಇರುತ್ತೇನೆ. ಯಾವುದೋ ಅನಾಥ ಶವವೊಂದು ಹಾಗು ಆ ಕತ್ತಲಿಗಾಗೇ ಕಾಯುತ್ತಿದ್ದ ಪ್ರೇತಾತ್ಮವೊಂದು ಕೂಗಿ ಕರೆಯುತ್ತೆ. ಕತ್ತಲು ಭಯವಾಗುವುದಿಲ್ಲ. ರಸ್ತೆಗಳು ಯಾರೂ ಇಲ್ಲ ಅಂತ ಅನ್ನಿಸುವುದಿಲ್ಲ. ಅಲ್ಲೇ ಅದೇ ಕತ್ತಲಲ್ಲೆ, ಅದೇ ಸ್ಥಳದಲ್ಲೇ ಕೂತುಬಿಡುತ್ತೇನೆ. ಒಮ್ಮೆ ಕಣ್ಣುಮುಚ್ಚುತ್ತೇನೆ. ಶವಕ್ಕೆ ಜೀವ ಬಂದು ತನ್ನ ಕತೆಗೆ ನನ್ನನ್ನ ನಾಯಕನನ್ನಾಗಿಸಿ ಕರೆದೊಯ್ಯುತ್ತೆ. ಪ್ರೇತಾತ್ಮ ಜೀವಾತ್ಮವಾಗುತ್ತೆ. ಕತ್ತಲಿನೊಳಗಿಂದ ಒಂದೊಂದೇ ಹೆಜ್ಜೆಯಿಡುತ್ತಾ ಏನೋ ಸಂಭ್ರಮದಲ್ಲಿ ಶವವನ್ನ ಜೀವವನ್ನಾಗಿಸಿದ ಸಂಭ್ರಮದಲ್ಲಿ ರೂಮಿಗೆ ನಡೆಯುತ್ತೇನೆ. ತಕ್ಷಣಕ್ಕೆ ಪೆನ್ನು ದೊರಕುವುದಿಲ್ಲ. ತಬ್ಬಿಬ್ಬಾಗುತ್ತೇನೆ. ಎಲ್ಲೋ ಒಂದು ಕಾಗದದ ಚೂರು ಹಾರುತ್ತಿರುತ್ತದೆ. ಒಂದು ಶವಕ್ಕೆ ಜೀವ ನೀಡಿದ ಸಂಭ್ರಮದಲ್ಲಿ ಸೃಷ್ಟಿಕರ್ಥನಾಗಿ ಬರೆಯಲು ತೊಡಗುತ್ತೇನೆ. ಅಕ್ಷರಗಳು ನಿಲ್ಲುತ್ತವೆ. ಒಮ್ಮೆಗೆ ಅಲ್ಲೇ ಇದ್ದ ಪದಗಳು ಎದುರಿಗೆ ಬಂದು ಹೇಳುತ್ತವೆ, ನಾನು ಸತ್ತ ಶವವನ್ನ ಜೀವಂತಗೊಳಿಸಿದ್ದಲ್ಲ, ನಾನು ಸಾವನ್ನ ನೋಡಿ ಬಂದದ್ದು ಅಂತ. ಹಾಗೆ ಸಾವಿನಲ್ಲಿ ಅಕ್ಷರಗಳು ಮೂಡುತ್ತವೆ. ಎಲ್ಲಾ ಬರೆದಾದಮೇಲೆ ನನ್ನದನ್ನ ನಾನು ಯಾವಾಗ ಬರೆಯುವುದು ಎಂದು ಗಾಬರಿಯಿಂದ ಕೇಳಿಕೊಂಡಾಗ, ನನ್ನ ಸಾವನ್ನ ನಾನು ಕಂಡಾಗ ನಾನು ನನ್ನದನ್ನ ಬರೆಯಬಲ್ಲೆ ಅಂತ ಅನ್ನಿಸುತ್ತೆ. ಹಾಗೆ ಕಡೆಗೆ ನನ್ನ ಸಾವನ್ನ ಹುಡುಕಿ ಹೊರಡುತ್ತೇನೆ.

ಸ್ಮಾಶಾಣದಲ್ಲಿ ಗೋರಿಯ ಪಕ್ಕದಲ್ಲೇ ತೊಟ್ಟಿಲನ್ನಿಟ್ಟು ಆಟವಾಡುವ ಸಮಯಕ್ಕೆ ಬದುಕಿನ ಎಲ್ಲಾ ಕ್ಷಣಗಳನ್ನೂ ಮೀಸಲಿಟ್ಟೆ. ವರ್ಥಮಾನದ ಕ್ಷಣಗಳು ಒಂದಾ ಬೂತದೊಂದಿಗೆ ಅಥವಾ ಭವಿಷ್ಯದೊಂದಿಗೆ ಕೂಡಿಯೇ ಬರುತ್ತದೆ. ಕತೆಕಟ್ಟಲು ಹೊರಟ್ಟಿಲ್ಲ ಅದರ ಅವಷ್ಯಕತೆಯೂ ಇಲ್ಲ. ಸಂಬಂಧಗಳ ನಿಗೂಢತೆಯನ್ನ ಬೇದಿಸಬಲ್ಲೆ ಎಂಬೋ ವಿಶ್ವಾಸವನ್ನೇ ಕಳೆದುಕೊಂಡಿದ್ದೇನೆ.
ಎದುರಿಗಿದ್ದ ಹುಡುಗಿ ಕೇಳುತ್ತಾಳೆ,
"ನನ್ನನ್ನ ಮದುವೆಯಾಗುತ್ತೀಯ?"
ಬೀಚಿನಲ್ಲಿ ನಡೆಯುತ್ತಿದ್ದೆ. ಇಡೀ ಸಮುದ್ರವೇ ನನ್ನನ್ನ ಎಳೆದುಕೊಂಡಂತೆ ಒಂದು ಕ್ಷಣ ಅನ್ನಿಸಿತು. ಮರಳಿನಲ್ಲಿ ಹೂತುಹೋಗಲು ತೊಡಗಿದೆ. ಭಯವಾಯಿತು. ಅವಳೇ ಕೈ ನೀಡಿದಳು. ಹಿಡಿದುಕೊಂಡೆ, ಬಿಟ್ಟರೇ ನನ್ನ ಸಾವು. ಅವಳು ದೊಡ್ಡವಳು, ಮೇಲೆತ್ತಿದಳು. ಮತ್ತೇ ಮುಖ ನೋಡಲಿಲ್ಲ. ಸಮುದ್ರ ವಿಶಾಲವಾಗಿತ್ತು. ಮೇಲೆ ಹಲವು ಬಣ್ಣ. ಕಾಲಿಗೊಂದು ಬಾಟಲಿ ಕಂಡಿತು. ಆಚೆ ದಡದಲ್ಲಿ ಯಾರೋ ಅನಾಮಿಕನೊಬ್ಬ ಕುಡಿದು ಬಿಸಾಕಿದ ಬಾಟಲಿ. ಅದರೊಳಗೆ ಹೆಸರು ತಿಳಿಯದ ಒಂದಿಷ್ಟು ಜೀವಿಗಳು ಆಗತಾನೆ ಕಣ್ಣು ಬಿಡುತ್ತಿದ್ದವು. ಅವುಗಳ ಉಸಿರ ಹಬೆಯನ್ನ ಹೀರಿಸೋ ಇಚ್ಚೆ ನನಗೆ. ಕಡೆಯ ಬಾರಿಗೆ ಹಿಂದೆ ತಿರುಗಿ ನೋಡುವ ಅಂತ ಅನ್ನಿಸಿತು, ಬದುಕು ದೈರ್ಯ ಕೊಡಲಿಲ್ಲ. ಅನಾಮಿಕವಾಗಿ ದಾರಿಯಲ್ಲಿ ಈ ಬಾಟಲಿಯಲ್ಲಿ ಸಿಕ್ಕ ಜೀವಿಯೊಂದಿಗೆ ಉಸಿರ ಹಂಚಿಕೊಂಡು ಸಮುದ್ರಕ್ಕೆಸೆದು ನಡೆದುಬಿಟ್ಟೆ.

.............................


()
ಮಧ್ಯ ರಾತ್ರೀಲಿ
ಯಾವುದೋ ಕನಸ ಕಂಡು ಎದ್ದು
ತಬ್ಬಿಬ್ಬಾಗಿ ಹೆದರಿ ಕತ್ತಲನ್ನ ಮುಟ್ಟಿ ಮುಟ್ಟಿ ನೋಡುತ್ತ
ದೀಪವಾಕಿದಾಗ
ಕನ್ನಡಿಯಲ್ಲಿ ನನ್ನದೊಂದು ಬಿಂಬವ
ಕಂಡು
ಯಾರೋ ಎಂದು ಗಾಬರಿಗೊಂಡು
ಮೈ ಮುಟ್ಟಿ ಮುಟ್ಟಿ ಗಿಚ್ಚಿ ನೋವನ್ನನುಭವಿಸಿ
"ನಿಜಕ್ಕೂ ನಾನೇನ ಅದು?"

ನಿಜದ ರಾತ್ರಿಗಳು ವಾಸ್ತವದ ಬಿಂಬದಲ್ಲಿ ಕೊನೆಗೊಂಡಿತು.

()

ಬದುಕು ನನ್ನನ್ನ
ಕವನದ ಸಾಲಿನ ರೂಪಕವನ್ನಾಗಿಸಿಬಿಟ್ಟಿತು.

ಮೊದಲ ರಾತ್ರಿ ಕಳೆದ ಆ ಹುಡುಗಿ
ರಾತ್ರಿ ನಿದ್ರೆಯಿಲ್ಲದ ಆ ಕೆಂಪು ಕಣ್ಣುಗಳಿಂದಲೇ
ನೇರ ನನ್ನ ಮುಂದೆ ನಿಂತು
"ಬಾ ಹೋಗುವ"
ಎಂದಾಗ
ಕವನ ಬರೆಯಲು ಹೊರಟುಬಿಟ್ಟೆ.

ಹೀಗೆ ಹೊರಟವನ ದಾರಿಯಲ್ಲಿ
ಯಾವುದೋ ಶವಯಾತ್ರೆ ಬಂದು ಸೇರಿ
ಶವಕ್ಕೆ ಬುರುಗೆಸೆಯುತ್ತಿದ್ದವನೊಬ್ಬ
ಯಾವುದೋ ಅನಿಮಿತ್ತ ಕಾರ್ಯಕ್ಕೆ ಹೋಗುತ್ತ
ನಾ ನಿಮಿತ್ತವಾಗಿ ಇದೇ ಕಾರ್ಯಕ್ಕೆ ಬಂದವನೇನೋ ಎಂಬಂತೆ
ನನ್ನ ಕೈಲಿ ಬುರುಗಿನ ಚೀಲವನ್ನ ಕೊಟ್ಟು
ಚಲ್ಲಲೇಳಿ ಹೊರಟುಬಿಟ್ಟ.

ನನಗೆ ರೂಪಕಗಳಾಗುವುದು ಕಂಡೀತ ಬೇಕಿಲ್ಲ
ಅದಕ್ಕಾಗಿ

()
ಚಿಟ್ಟೆಯ ಮೊಟ್ಟೆಗಳನ್ನುಡುಕಿ ಹೊರಟೆ
ಕಂಡಿತು
ಕೂತೆ
ಮೊಟ್ಟೆಯೊಡೆದು ಮರಿ ಹೊರಬರುವ ತನಕ
ಹೊರಬಂದ ಮರಿಹುಳು ತಿನ್ನಲು ಕೂತಿತು
ತಾ ಪೂರ್ಣ ಬೆಳೆವರೆಗು
ನಾ ನೋಡುತ್ತಾ ಕೂತೆ
ವಿಕಾಸದೊಳಗಿನ ಪ್ರತೀ ಹಂತವನ್ನ ಪ್ರತೀ ಕ್ಷಣವನ್ನ
ಯಾವುದೋ ರೆಂಬೆಗೆ ಕಚ್ಚಿ ಕೂತಿತು
ಒಂದು ಕ್ಷಣ ಹಿಂತಿರುಗಿ ನೋಡುವಷ್ಟರಲ್ಲಿ
ಮರಿಹುಳು ಕಾಣೆ
ಮರಿಹುಳು ಪೊರೆಹುಳುವಾಗಿಹೋಗಿತ್ತು.

ನಾ ಚಿಟ್ಟೆಯನ್ನ ಕಾಣಲೇ ಬೇಕಿತ್ತು
ಬದುಕಿನ ಪರಮೋದ್ದೇಶವೇನೋ ಎಂಬಂತೆ
ಪೊರೆಹುಳುವನ್ನೇ ನೋಡುತ್ತಾ ಕೂತೆ
ಕೂತೆ ನೋಡುತ್ತಾ ನೋಡುತ್ತಾ
ಎಲ್ಲವನ್ನೂ ಮರೆತುಬಿಟ್ಟೆ
ಚಿಟ್ಟೆಯನ್ನ ಕಾಣಬೇಕೆಂಬೋದನ್ನೂ ಸಹ
ಒಂದು ಕ್ಷಣ ಆ ಒಂದು ಕ್ಷಣ
ಪೊರೆಹುಳುವಿನಿಂದ ಚಿಟ್ಟೆ ತಾ ಹೊರಬಂದು
ರೆಕ್ಕೆ ಪಟ ಪಟ ಪಟ
ಹೊಡೆಯತೊಡಗಿತು
ನಾ ಕುಣಿಯತೊಡಗಿದೆ ಕಿರುಚಿದೆ ಅರಚಿದೆ
ಧ್ವನಿ ನಿಂತಿತು ದೇಹ ತಣ್ಣಗಾಯಿತು

ಚಿಟ್ಟೆ
ಹಾರಿಹೋಯಿತು
ನನ್ನೆದುರಿಗೆ

__


ನಾನು
       ಕೇವಲ
              ಸಾಕ್ಷಿ
                     ಮಾತ್ರ

ಸುಮ್ಮನೆ ನಡೀತಿದ್ದೆ
ಕಾಲ ಕೆಳಗೆ  ಒಂದು ಹುಳ ಸಿಕ್ಕು ಸತ್ತೋಯ್ತು.
ಒಮ್ಮೆ ಹಾಗೇ ದಿಟ್ಟಿಸಿ ನೋಡ್ದೆ
ಮತ್ತೇ ಮತ್ತೇ ನೋಡ್ದೆ
ಯಾಕೋ ಅನ್ನಿಸ್ತು
ನಾನು ಪರಮ ಪಾಪಿ, ಚಾಂಡಾಲ.    

ಹುಟ್ಟು ಹಬ್ಬದ್ದಿನ
ಸತ್ಮೇಲೆ ದೇಹಾನ  ದಾನ ಮಾಡೋ
ಒಪ್ಪಂದಕ್ಕೆ
ಸಹಿ ಹಾಕೋಣ ಅಂತಂದುಕೊಂಡು ಹೋದೆ,
ತೀರ ಹತ್ತಿರದ ಸಂಬಂಧಿಕರ ಅಪ್ಪಣೆ ಬೇಕು ಅಂದುಬಿಟ್ಟರು.

ನಾನು
       ಕೇವಲ
              ಸಾಕ್ಷಿ
                     ಮಾತ್ರ

ಆದರೆ.........

ಮುಖಾಮುಖಿ


                                                                               

"ಬೆಳಗಾಯ್ತು ಏಳೋ, ಇಗೋ ಏಳಲಿಲ್ಲ ಅಂದ್ರೆ ನೀರು ತಗೊಂಡು ಬಂದು ಸುರೀತೀನಿ"
ಅಂತ ಅಣ್ಣ(ಅಪ್ಪ) ಎಷ್ಟೇ ಹೇಳ್ತಾ ಇದ್ದರೂನೂ ಕಾಲ ಬಳಿ ಇದ್ದ ಹೊದಿಕೆಯೊಳಗೆ ಮುಖ ಅಡಗಿಸಿಟ್ಟು ಮಲಗಿಬಿಡೋನು. ಅಪ್ಪ ಬೇರೆ ಕಡೆ ಹೋದರೆ ಅಜ್ಜಿ ತನ್ನದೂ ಹೊದಿಕೆ ಹೊದ್ದಿಸಿ ಮುದ್ದಿಸೋಳು. ಆ ಚಳೀಲಿ ಬೆಚ್ಚಗೆ ಹೊದಿಕೆ ಹೊದ್ದು ಮಲಗಿರ್ಬೇಕಾದ್ರೆ ಅದೆಷ್ಟು ಕನಸುಗಳೋ, ಕಬ್ಬಡಿ ಆಡೋವಾಗ ನಾಲ್ಕು ಜನನ್ನ ಒಬ್ಬನೆ ಎತ್ತಿ ಕೆಡವಿದ ಹಾಗೆ, ಕೈಗಳನ್ನ ಪಟ ಪಟ ಅಂತ ಹಕ್ಕಿತರ ಹೊಡೀತ ಹೊಡೀತ ಮೇಲೆ ಹಾರ್ತ ಇರೋ ಹಾಗೆ, ಮಾಯಬಜಾರ್ ಸಿನಿಮಾದಲ್ಲಿ ಆಯಪ್ಪನ  ಬಾಯೊಳಗಡೆಗೆ ಅಷ್ಟೊಂದು ತಿಂಡಿ ಅದರಷ್ಟಕ್ಕೆ ಅದೇ ಹೋಗ್ತಿತ್ತಲ್ಲ ಆ ರೀತಿ, ಅಜ್ಜಿ ಅಮ್ಮ ತಿಂಡೀನ ತಂದಿಡ್ತಾ ಇದ್ದರೆ ಬಾಯೊಳಗೆ ನೇರವಾಗಿ ಹೋಗ್ತ ಇರೋ ರೀತಿ, ನಾಲ್ಕು ಏರೋಪ್ಲೇನ್ ಚಿಟ್ಟೆಗಳನ್ನ ಹಿಡ್ಕೊಂಡು ಆಡಿಸ್ತಾ ಇರೋ ರೀತಿ,  ಕನಸು ಕಾಣ್ತನೇ ಕನಸಿನಲ್ಲಿ ಕನವರಿಸ್ತಾ, ಏಡಿ ಅಂತಾನೋ, ಕಂಬಾಲಪ್ಪನ್ ಗುಡ್ಡ ಅಂತಾನೋ ಅಂದು ಬಿಡೋನು. ಅಮ್ಮಂಗೆ ಕೇಳಿಸಿದ್ರೆ
" ಯಾಕೋ ನೆನ್ನೆ ಏಡಿ ಹಿಡೀಲಿಕ್ಕೆ ಹೋಗಿದ್ಯ, ಇಲ್ಲ ಕಂಬಾಲಪ್ಪನ್ನ ಗುಡ್ಡಕ್ಕೆ ಹೋಗಿದ್ಯ, ನಿಮಣ್ಣಂಗೆ ಹೇಳ್ತೀನಿ, ಕಾಲು ಮುರೀತಾರೆ"
ಅಂತ ಬೆಳೆಗ್ಗೇನೆ ಶುರುಮಾಡಿಬಿಡುತ್ತಿದ್ದಳು. ಹೀಗೆ ಕನಸಿನ ಲೋಕಕ್ಕೂ ವಾಸ್ತವದ ಲೋಕಕ್ಕೂ ವ್ಯತ್ಯಾಸ ಅರಿಯದೆ, ಆ ಕನಸಿನಲ್ಲೆ ಇರಬೇಕಾದರೆ, "ವೆಂಕಟರಮಣ ಗೋವಿಂದಾ ಗೋssವಿಂದ" ಅಂತ ಜೋರು ಜಾಗಟೆ ಬಾರಿಸ್ತಾ ಶಂಖ ಊದುತ್ತ ಎದುರಿಗೆ ದಾಸಯ್ಯ ನಿಂತಿರುತ್ತಿದ್ದ. ನನ್ನ ಕನಸನ್ನ ಭಗ್ನ ಮಾಡಿದ ದಾಸಯ್ಯನ ಮೇಲೆ ಭಯಂಕರ ಕೋಪಗೋಡು ಎದ್ದು ಬಿಟ್ಟಾಗ
"ಬಲಗಡೇ ಏಳೋ ಅಂತ ಎಷ್ಟ ಸರೀನೋ ನಿಂಗೆ ಹೇಳೋದು"
ಅಂತ ಅಮ್ಮ ಆಗಲೇ ಎದ್ದಿದ್ದ ನನ್ನನ್ನ ಮತ್ತೇ ಮಲಗಿಸಿ ಬಲಗಡೆ ಏಳಿಸಿದ್ದಕ್ಕೆ,
"ಅಮ್ಮ ನಾನು ದೊಡ್ಡೋನಾಗಿದ್ದೀನಿ, ನೀ ಹೀಗೆಲ್ಲ ಎಲ್ಲರ ಮುಂದೇನು ಬೈಬೇಡ"
ಅಂತ ಅಂದ್ರೆ ಈ ದಾಸಯ್ಯ ಅಮ್ಮ ಇಬ್ಬರೂ ನಕ್ಕುಬಿಡೋರು. ಆಮೇಲೆ ಅಮ್ಮ ಎತ್ತಿ ಮುದ್ದಿಸಿದಾಗ ನಾನು ದೊಡ್ಡವನಾಗಿದ್ದ ಸಂಗತಿ ಮರೆತು, ಅಮ್ಮನ ಸೊಂಟ ಹತ್ತಿ ಅಲ್ಲೂ ಮಲಗಿದಾಗ, "ನನ್ನ ಮುದ್ದಿನ ಕೂಸು" ಅಂತ ಹೇಳ್ತಾನೆ ಬಚ್ಚಲಿಗೆ ಕರ್ದುಕೊಂಡು ಹೋಗೋಳು. ಹೀಗೆ ಪ್ರತಿ ಶನಿವಾರ ನಾನು ದಾಸಯ್ಯನ್ನ ನೋಡ್ತಾ ಇದ್ದೆ.

ಬಿಳಿ ಪಂಚೆ. ಅದ್ರ ಮೇಲೆ ಬಿಳಿ ಪೈಜಾಮ. ಬಿಳಿ ಅಂತ ನಾವು ಅನ್ನಬೇಕು ಅಷ್ಟೆ. ಅದು ಪೂರ ಬಿಳಿ ಅಲ್ಲ. ಮಾಸಿದ ಬಿಳಿ. ಅದಕ್ಕೆ ಸರಿ ಹೊಂದುವಂತೆ ಬಿಳಿ ಪೇಟ. ಹಣೆ ಮೇಲೆ ಒಪ್ಪಿ ತಿದ್ದಿದ ಎರೆಡು ಬಿಳಿ ನಾಮಗಳ ಮದ್ಯ ಒಂದು ಕೆಂಪು ನಾಮ. ಕೊರಳೊಳಗೊಂದಿಷ್ಟು ಮಾಲೆ. ಕೈಯಲ್ಲಿ ಗರುಡಗಂಬ ಅದರಲ್ಲಿ ಉರಿಯೋ ದೀಪ, ಅದಕ್ಕೆ ಮೆತ್ತಿಕೊಂಡಿರೋ ಕಪ್ಪು ಕಾಟಿಗೆ, ಬುಜಕ್ಕೆ ಜೋಳಿಗೆ, ಒಂದು ನವಿಲು ಗರಿ.
ನಾನಾಗ ಆರು ವರ್ಷದವನಿರಬೇಕು. ಮನೆಯಲ್ಲಿ ಒಬ್ಬನೇ, ಆದ್ದರಿಂದ ನಾನೇ ರಾಜ. ನೋಡೋಕೆ ಗುಂಡಾಗಿ ಮುದ್ದು ಮುದ್ದಾಗಿ(ಕೆಲವೊಮ್ಮೆ ಮೊದ್ದಾಗಿ) ಇದ್ದೆ. ಕಾಫಿ ಬಣ್ಣದ ಮೇಲೆ ಬಿಳಿ ಅಡ್ಡ ಪಟ್ಟಿಗಳಿದ್ದ ಚಡ್ಡಿ ಹಾಕಿ ಮೇಲೊಂದು ಬಿಳೀ ಬನಿಯಾನ್ ತೊಟ್ಟು, ಸೊಂಟದಮೇಲೆ ಕೈಯಿಟ್ಟುಕೊಂಡು ದಾಸಯ್ಯನ ಪ್ರತಿ ಚಹರೆಯನ್ನ ನೋಡುತ್ತಿರುವಾಗ, ನನ್ನನ್ನ ನೋಡಿ ನಗುತ್ತ, ಆ ನಗುವಿಗೆ ನಾ ಮತ್ತೆ ನಕ್ಕರೆ, ಮುಖವನ್ನ ಚಿತ್ರ ವಿಚಿತ್ರದ ಭಂಗಿಗೆ ತಂದು ನಗಿಸಲಿಕ್ಕೆ ಪ್ರಯತ್ನಿಸ್ತಾ ಇರೋ ವೇಳೆ ಅಮ್ಮ ಒಳಗಿನಿಂದ ಅಕ್ಕಿ ತಂದು ದಾಸಯ್ಯನ ಜೋಳಿಗೇಗೆ ಹಾಕೋಳು. "ಒಳ್ಳೇದಾಗ್ಲೀ ತಾಯಿ" ಅಂತ ಹೇಳ್ತಾ ಶುಭ್ರವಾದ ನಗುವೊಂದನ್ನ ನಕ್ಕು ಶಂಖ ಊದಿ ಜಾಗಟೆ ಬಾರಿಸಿ ಹೊರಟು ಬಿಡೋನು. ಹೀಗೆ ಹಿಂತಿರುಗಿ ಹೋಗುತ್ತಿದ್ದ  ದಾಸಯ್ಯನ್ನ ನೋಡುತ್ತಾ ಅಂದಿನ ನನ್ನ ಜಗತ್ತು ತೆರೆದುಕೊಳ್ಳೋದು. ಪಕ್ಕನೆ ಏನೋ ಹೊಳೆದು ಅಮ್ಮನ ಬಳಿ ಓಡಿ ಏನೋ ಕೆಲಸದಲ್ಲಿ ಇರ್ತಿದ್ದ ಅಮ್ಮನ ಸೆರಗನ್ನ ಕಿತ್ತು ಹಟ ಮಾಡಿದ್ರೆ,
" ಏನೋ ನಿನ್ನ ಗಲಾಟೆ"
"ಅಮ್ಮ, ದಾಸಯ್ಯ ಯಾಕೆ ಶಂಖ ಊತ್ತಾನೆ..? ಅಮ್ಮ ಅವ್ನ ಶಂಖದಲ್ಲಿ ಅದೆಂಗೆ ಶಬ್ದ ಬರುತ್ತಮ್ಮ, ಅದೂ ಪೂ ಪೂ ಅಂತ ಊದಿದ್ರೆ..?"
ಅಂದರೆ ನಿಮ್ಮ ಅಜ್ಜಿಯನ್ನ ಕೇಳು ಅಂತಲೋ, ಆಡ್ಕೋ ಹೋಗು ಅಂತಲೋ ಕಳ್ಸಿ ಬಿಡೋಳು. ಸ್ವಲ್ಪ ಹಟ ಹಿಡಿದ್ರೆ, ಅಡುಗೆ ಮನೇಲಿ ಸಾಲಾಗಿ ಜೋಡಿಸಿಟ್ಟಿರುತ್ತಿದ್ದ ಯಾವುದೋ ಡಬ್ಬಿಯಿಂದ ಏನಾದ್ರೂ ತಿಂಡಿ ಕೊಟ್ಟು ತಿನ್ನೋಗು ಅನ್ನೋಳು. ಹಾಗೆ ತಿನ್ನೋ ಹಂಬಲದಲ್ಲಿ, ಆ ರುಚಿಯಲ್ಲಿ ಕೇಳಿದ ಪ್ರಶ್ನೆಯನ್ನ ಮರೆತೇ ಬಿಡುತ್ತಿದ್ದೆ.

ದಾಸಯ್ಯನ ಬಳಿ ಒಂದು ನವಿಲುಗರಿ ಇತ್ತು. ನನಗೆ ಆ ನವಿಲು ಗರೀನ ನೋಡಿದಾಗೆಲ್ಲ ಆ ನವಿಲುಗರಿಯನ್ನ ನಾ ಇಟ್ಟುಕೋಬೇಕು ಅಂತ ಆಸೆ ಆಗ್ತಾ ಇತ್ತು. ನನ್ನ ಜೊತೆ ಆಡ್ತಾ ಇದ್ದ ಯಾರ ಬಳೀನೂ ಅಂತ ನವಿಲುಗರಿ ಇರಲಿಲ್ಲ. ಅದೂ ಅಷ್ಟು ದೊಡ್ಡದು ಇರಲಿಲ್ಲ. ಅದೆ ನಾನು ಇಟ್ಟುಕೊಂಡರೆ ಎಲ್ಲರೂ ನನ್ನ ಹತ್ತಿರಕ್ಕೆ ಬರ್ತಾರೆ, ಆಗ ನಾನು ಅವ್ರನ್ನ ಯಾವ ಆಟಕ್ಕೆ ಸೇರಿಸ್ಕೋ ಬೇಕು ಅಂದರೆ ಆ ಆಟಕ್ಕೆ ಸೇರಿಸ್ಕೋತಾರೆ ಅನ್ನೋ ಆಸೆ. ಅಷ್ಟೇ ಅಲ್ಲ. ಅದು ಎಷ್ಟು ಚೆನ್ನಾಗಿತ್ತು ಅಂದರೆ ಅದ್ರ ಬಣ್ಣ ಬಹ್ಳಾನೇ ಆಕರ್ಷಿಸೋದು. ದಾಸಯ್ಯನ ಬಳಿಯಿಂದ ಹೇಗಾದ್ರೂ ಮಾಡಿ ಆ ಗರೀನ ಪಡಿಬೇಕು ಅಂತ ಬಹ್ಳ ಆಸೆ ಪಟ್ಟೆ. ಒಂದು ದಿನ
"ದಾಸಯ್ಯ, ಆ ನವಿಲು ಗರಿ ಕೊಡೋ"
"ಯಾಕೆ ಸಾಮಿ"
"ನಂಗೆ ಬೇಕು. ಅದ್ರ ಜೊತೆ ನಾ ಆಟ ಆಡ್ತೀನಿ. ನಿಂಗೇತಕ್ಕೆ ಹೇಳು, ನೀನು ದೋಡ್ಡವ್ನಾಗಿ ಹೋಗಿದ್ದೀಯ. ನಾನು ಚಿಕ್ಕೋನು, ನಂಗೆ ಕೊಡೋ"
"ಇಲ್ಲ ಸಾಮಿ, ನಾನು ಅದನ್ನ ಅಂಗೆಲ್ಲ ಕೊಡ್ಲಿಕ್ಕಿಲ್ಲ. ಅದು ದೇವ್ರ ಪರ್ಸಾದ ಸಾಮಿ"
"ಅಯ್ಯೋ, ದಾಸಯ್ಯ ಒಂದು ಕೆಲ್ಸ ಮಾಡುವ, ನಂಗೆ ಇವತ್ತು ನೀನು ಆ ನವಿಲು ಗರಿ ಕೊಡು. ನಾನು ಅದನ್ನ ನಮ್ಮನೆ ಪುಸ್ತಕದಲ್ಲಿ ಇಟ್ಟು ಮರಿ ಮಾಡ್ಕೋತೀನಿ. ಮರೀನ ನಾನಿಟ್ಟುಕೋತೀನಿ. ಅದರ ಅಮ್ಮನ್ನ ನಾನೇ ನಿಂಗೆ ಕೊಡ್ತೀನಿ. ಈಗ ಕೊಡ್ತೀಯ"
"ಅಂಗೆಲ್ಲ ನವ್ಲುಗರಿ ಮರಿ ಆಕ್ಲಿಕ್ಕಿಲ್ಲ ಸಾಮಿ"
"ಓಗೋ ದಾಸಯ್ಯ ನಿಂಗೇನೂ ಗೊತ್ತೇ ಇಲ್ಲ. ನಂಗೊಮ್ಮೆ ಕೊಟ್ಟು ನೋಡು, ನಾ ಮರಿ ಹಾಕ್ಸಿ ತೋರಿಸ್ತೀನಿ"
"ಇಲ್ಲ ಸಾಮಿ ಅಂಗೆಲ್ಲ ಕೊಡ್ಲಿಕ್ಕಿಲ್ಲ"
"ಹೋಗೋ ದಾಸಯ್ಯ. ನಮ್ಮನೆಗೆ ಬರ್ಬೇಡ"
ಅಂತ ಗದುರಿಸಿ ಕಳಿಸಿಬಿಟ್ಟಿದ್ದೆ. ಸ್ವಲ್ಪ ದಿನ ಆದ್ಮೇಲೆ ಯಾರೋ ನಂಗೆ ನವಿಲು ಗರೀನ ತಂದು ಕೊಟ್ಟಿದ್ದರು. ನಾನು ದಾಸಯ್ಯನ್ನ ಕೇಳೋದನ್ನ ಬಿಟ್ಟು ಬಿಟ್ಟಿದ್ದೆ. ಆದ್ರೆ ನಾನು ನಮ್ಮನೇಗೆ ಬರ್ಬೇಡ ಅಂತ ಹೇಳಿದ್ರೂನು, ದಾಸಯ್ಯ ಪ್ರತೀ ಶನಿವಾರ ಬರ್ತಾ ಇದ್ದ. ಅಕ್ಕಿ ತಗೊಂಡು ಹೋಗ್ತಾ ಇದ್ದ. ಯಾವಾಗಾದ್ರು ಅಮ್ಮ ಹೊರ್ಗೆ ಹೋದ್ರೆ ದಾಸಯ್ಯ ಬಂದರೆ ಅಕ್ಕಿ ಹಾಕು ಅಂತ ನಂಗೆ ಹೇಳಿ ಹೋಗೋಳು.

ಹಬ್ಬ ಅಂದ್ರೆ  ಸಂಭ್ರಮ ನಂಗೆ. ಅದೂ ದೀಪಾವಳಿ. ಹೊಸ ಬಟ್ಟೆ ಹಾಕ್ಕೊಂಡು ಪಟಾಕಿ ಹೊಡೀಬೋದು. ಆಮೇಲೆ ನನ್ನ ಹತ್ರ ಇರೋ ಪಟಾಕಿನೆಲ್ಲ ಎಲ್ಲಾರ್ಗೂ ತೋರಿಸ್ಬೋದು. ಅದ್ರ ಸಂಭ್ರಮಾನೇ ಬೇರೆ. ನನ್ನಪ್ಪಂಗೆ ವ್ಯರ್ಥವಾಗಿ ಪಟಾಕಿಗೆಲ್ಲಾ ಹಣ ಹಾಕೋದು ಸ್ವಲ್ಪಾನೂ ಇಷ್ಟ ಇರ್ಲಿಲ್ಲ. ಆದ್ರೆ ನಾನು ಹಟ ಮಾಡಿದ್ದಕ್ಕೆ, ತಾತ ಸ್ವಲ್ಪ ಪಟಾಕಿ ತಂದು ಕೊಟ್ಟಿದ್ರು. ತಾತ ಹೊಸ ಪಟಾಕಿ ಹೊಡ್ಯೋ ಪಿಸ್ತೂಲು ತಂದು ಕೊಟ್ಟಿದ್ರು. ಅದನ್ನ ತಾತ ಹಿಂದಿನ ದಿನ ಪೇಟೇಗೆ ಹೋದಾಗ ತಂದಿದ್ರಿಂದ ಅದು ನಮ್ಮೂರಲ್ಲಿ ಸಿಗೋ ಪಿಸ್ತೂಲಿಗಿಂತ ದೊಡ್ಡದಾಗಿ ಇತ್ತು. ಅದಕ್ಕಿ ಪಟಾಕಿ ಮದ್ದು ಇಟ್ಟು ಡಬ ಡಬ ಅಂತ ಶಬ್ದ ಮಾಡ್ತ ಊರೆಲ್ಲ ಸುತ್ತೋಕೆ ಹೊರ್ಡುತ್ತಿದ್ದೆ.

ನನ್ನ ತಾತಂಗೂ ಹಬ್ಬದ ಸಂಭ್ರಮ . ತಾತ ಅವರ ಗೆಳೆಯರನ್ನೆಲ್ಲಾ ಸೇರಿಸಿ ಪಕ್ಕದ ಮನೇಲಿ ಇಸ್ಪೀಟಾಟ ಆಡೋರು. ತಾತಂಗೆ ಬೀಡಿ ಸೇದೋ ಹವ್ಯಾಸ ಇದ್ದದ್ರಿಂದ ಮನೇಲಿ ಅಜ್ಜಿ ಬಯ್ತಾರೆ ಅಂತ ಪಕ್ಕದ ಮನೇಲಿ ಆಟ ಆಡ್ತಾ ಬೀಡೀ ಸೇದುತ್ತ ಇರೋರು. ನಾನು ಮನೇ ಹತ್ತಿರ ಪಿಸ್ತೂಲಿನೊಟ್ಟಿಗೆ ಆಟ ಆಡ್ತ ಇರ್ಬೇಕಾದ್ರೆ ಅಪ್ಪ ಯಾಕೋ ತಾತನ್ನ ಕರ್ದು ಬಿಟ್ಟು ಬಾ ಅಂತ ಅಂದ್ರು. ನಾನು ಪಟಾಕಿ ಶಬ್ದ ಮಾಡ್ತಾನೇ ಹೋದೆ. ಪಟಾಕಿ ಹೊಡೀತ ಹೋಗಿ, ತಾತನ ಬಳಿ ಅಪ್ಪ ಕರೀತೀದ್ದಾರೆ ಬರ್ಬೇಕಂತೆ ಅಂತ ಹೇಳಿದ್ರೂನು, ತಾತ ತನ್ನ ಆಟದಲ್ಲಿ ತಲ್ಲೀನನಾಗಿ ಹೋಗಿದ್ದ. ವಾಪಸ್ಸು ಒಬ್ಬನೇ ಹೋದ್ರೆ ಮತ್ತೆ ಅಣ್ಣ ವಾಪಸ್ಸು ಕಳಿಸ್ತಾರೆ ಅಂತ ತಾತನ್ನ ಹಟ ಮಾಡಿ ಕೈ ಹಿಡಿದು ಎಳೆದುಕೊಂಡು ಹೊರಟೆ. ಮೆಟ್ಟಿಲಿಳುವುವ ವೇಳೆ ಅದೇನಾಯಿತೋ ತಾತ ಒಂದು ಮೆಟ್ಟಿಲಲ್ಲಿ ನನ್ನ ಪುಟ್ಟ ಕೈಗಳನ್ನ ಗಟ್ಟಯಾಗಿ ಹಿಡಿದು ಕುಸಿದು ಬಿದ್ದರು. ಜೋರು ಹಿಡಿದದ್ದರಿಂದ ಕೈ ನೋಯುತ್ತಿತ್ತು .ತಾತ ತಾತ ಅಂತ ಕರೆದೆ. ಏನೂ ಕೇಳದವರಂತೆ ಸುಮ್ಮನಾಗಿಹೋಗಿದ್ದರು. ನನಗೆ ಭಯ ಆಯ್ತು. ತಾತ ನನ್ನ ಕೈಗಳನ್ನ ಜೋರಾಗಿ ಹಿಡಿದಿದ್ರು. ನಾನು ಜೋರಾಗಿ ಕರೆದಿದ್ದಕ್ಕೆ, ತಾತನ ಗೆಳೆಯರು ಬಂದರು, ಅಣ್ಣಾನೂ ಓಡಿ ಬಂದ. ನನ್ನ ಕೈಯೊಳಗೆ ಇದ್ದ ತಾತನ್ನ ಅವರು ಬಿಡಿಸಿ, ನನ್ನನ್ನ ಪಕ್ಕಕ್ಕೆ ಸರಿಸಿ ನಾನು ನೋಡುತ್ತಾ ಇರೊ ಹಾಗೆ ತಾತನ್ನ ಐದಾರು ಜನ ಎತ್ತಿಕೊಂಡು ಹೊರಟರು. ನನಗೆ ಗಾಬರಿ. ಆಶ್ಚರ್ಯ. ಏನು ನಡೀತಿದೆ ಅಂತಾ ತಿಳೀತಿಲ್ಲ. ಎಲ್ಲರೂ ಜೋರು ಜೋರಾಗಿ ಓಡಾಡುತ್ತಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಮನೆಯ ಮುಂದೆ ಹಲವು ಜನ ಸೇರಿಬಿಟ್ಟರು. ಎಲ್ಲರ ಮುಖಗಳು ನಾನು ಹಿಂದೆ ನೋಡಿದ ಮುಖದಂತೆ ಕಾಣುತ್ತಲೇ ಇಲ್ಲ. ನಾನು ಸೀದ ಅಮ್ಮನ್ನ ಹುಡುಕಿ ಹೊರಟು ಅಮ್ಮನ್ನ ತಬ್ಬಿಕೊಂಡು ವಾರೆ ನೋಟದಲ್ಲಿ ಮಂಚದ ಮೇಲೆ ಮಲಗಿದ್ದ ತಾತನ್ನ, ಸುತ್ತ ನೆರೆದಿದ್ದ ಜನಗಳನ್ನ ನೋಡುತ್ತಿದ್ದೆ. ಕೆಲವೇ ಕ್ಷಣಗಳಲ್ಲಿ ಚಿತ್ರಗಳೆಲ್ಲಾ ಬದಲಾಗಿ ಹೋಯಿತು. ಜನಗಳೆಲ್ಲಾ ಸೇರಿದರು. ಎಲ್ಲರೂ ಅಳುತ್ತಿದ್ದಾರೆ. ಅದ್ಯಾಕೆ ಎಲ್ಲರೂ ಅಳುತ್ತಾ ಇದ್ದಾರೆ, ಎಲ್ಲರಿಗೂ ಒಮ್ಮೆಗೇ ಯಾರು ಪೆಟ್ಟು ಕೊಟ್ಟರೋ ಪಾಪ ಅಂತ ಒಮ್ಮೆ ಅನ್ನಿಸಿ, ಮತ್ತೊಮ್ಮೆ ಎಲ್ಲರೂ ಒಮ್ಮೆಗೇ ಏನಕ್ಕೋ ಹಟ ಹಿಡಿದಿದ್ದಾರೆ ಅಂತ ಅಂದುಕೊಂಡೆ. ತಕ್ಷಣ ನನ್ನ ಜೇಬಿನಲ್ಲಿದ್ದ ಪಟಾಕಿ ಪಿಸ್ತೂಲನ್ನ ಮುಟ್ಟಿ ನೋಡಿಕೊಂಡು ಒಳಗಡೆಯಿಟ್ಟಿದ್ದ ಪಟಾಕಿಯನ್ನ ಬಚ್ಚಿಟ್ಟು ಬಂದೆ. ಕಡೆಗೆ ಅಮ್ಮನೂ ಅಳಲಿಕ್ಕೆ ಶುರು ಮಾಡಿದಾಗ
"ಅಮ್ಮ ಯಾಕಮ್ಮ ಎಲ್ಲರೂ ಅಳ್ತಾ ಇದ್ದಾರೆ"
"ನಿಮ್ಮ ತಾತ ದೇವರ ಹತ್ತಿರಕ್ಕೆ ಹೋದರು ಕಣೋ"
"ಹಾಗಾದ್ರೆ ಮತ್ತೆ ತಾತ ಬರೋಲ್ವ ಅಮ್ಮ"
"ಇಲ್ಲಪ್ಪ"
ಅಂದಾಗ ನನಗೂ ಅಳು ಬಂತು.
ಅಯ್ಯೋ ತಾತ ದಿನಾ ನನ್ನ ರಂಗ ಬಾರೋ ರಂಗ ಬಾರೋ ಅಂತ ಆಟ ಆಡಿಸ್ತಾ ಇದ್ದ. ಇನ್ನೂ ಆಡಿಸೋರೇ ಇಲ್ಲ. ತಾತಂದು ನಾರದನ ವೇಷ ಹಾಕಿ ನಾಟಕದಲ್ಲಿರೋ ಫೋಟೋನೂ ಇತ್ತು. ತಾತ ನಂಗೂ ಬಣ್ಣ ಹಚ್ಚಿ ವೇಷ ಹಾಕ್ತೀನಿ ಅಂತ ಹೇಳಿದ್ದ, ಅದೂ ಇಲ್ದೆ ಹೋಯ್ತು. ತಾತ ಇನ್ನು ಬರ್ದೇ ಹೋದ್ರೆ ಮುಂದಿನ ದೀಪಾವಳಿ ಹಬ್ಬಕ್ಕೆ ಹೊಸ ಪಿಸ್ತೂಲು ಸಿಗೋಲ್ಲ. ಛೆ ಅಂತ ಚಿಂತೆಗೀಡಾಗಿದ್ದೆ. ತುಂಬಾ ಜನ ಸೇರಿದ್ದರಿಂದ ನಮ್ಮನೇಲಿ ಇನ್ನೊಂದು ಹಬ್ಬ ಮಾಡ್ತಾ ಇದ್ದಾರೆ ಅಂತ ಅಂದ್ಕೊಂಡೆ. ಈ ಬಾರಿ ಇನ್ನೂ ದೊಡ್ಡ ಹಬ್ಬ ಅಂತಾ ಖುಶಿ ಆಗಿ ಆಡೋಕ್ಕೆ ಹೊರಟೆ.

ಆಗ ಮನೆ ಮುಂದೆ ಮತ್ತೆ ದಾಸಯ್ಯ ಬಂದ. ಅದೇ ಬಟ್ಟೆ, ಅದೇ ಶಂಖ, ಅದೇ ಜಾಗಟೆ, ಅದೇ ಮುಖ. ಹಿಂದೆ ಶನಿವಾರದ ದಿನ ಕಂಡ ಮುಖವೇ ಮತ್ತೆ. ದಾಸಯ್ಯ ಅಳುತ್ತಾ ಇರಲಿಲ್ಲ. ಒಳಗೋಗಿ ಅಮ್ಮಂಗೆ "ಅಮ್ಮ ದಾಸಯ್ಯ ಬಂದೀದಾನೆ" ಅಂತ ಕರೆದೆ. ಅಮ್ಮ ಕೇಳಿಸ್ಕೊಳ್ಳಲೇ ಇಲ್ಲ. ಅಮ್ಮ ಬಹಳ ಕೆಲಸ ಮಾಡ್ತಾ ಇದ್ದಳು. ಸರಿ ಅಂತ ನಾನೇ ಸೇರು ತೆಗೆದುಕೊಂಡು ಹೋಗಿ ಅಕ್ಕಿ ತುಂಬಿಸಿಕೊಂಡು ದಾಸಯ್ಯಂಗೆ ಹಾಕಲಿಕ್ಕೆ ಕೊಂಡೊಯ್ಯೊವಾಗ ಅಮ್ಮ ಬಂದು ಸೇರನ್ನ ಕಿತ್ತುಕೊಂಡು ಬಯ್ದು, ನಾಲ್ಕು ಏಟು ಕೊಟ್ಟು ಅತ್ತೆ ಬಳಿ ಕಳೀಸಿದ್ಲು. ಸ್ವಲ್ಪ ಹೊತ್ತಾದ ಮೇಲೆ, ಸ್ವಲ್ಪ ಜನ ತಾತನ್ನ ಹೊತ್ತುಕೊಂಡು ಎಲ್ಲಿಗೋ ಕರೆದುಕೊಂಡು ಹೋಗುತ್ತಾ ಇದ್ದರು. ಮುಂದೆ ಇದೇ ದಾಸಯ್ಯ ಜಾಗಟೆ ಹೊಡೀತ, ಶಂಖ ಊದುತ್ತಾ ಹೋಗುತ್ತಾ ಇದ್ದ. ದಾಸಯ್ಯನ ಹಿಂದೆ ನಾಲ್ಕು ಜನ ತಾತನ್ನ ಹೊತ್ತು ಕೊಂಡು ಹೋಗ್ತಾ ಇದ್ರು. ಅವರ ಹಿಂದೆ ಅದೆಷ್ಟೋ ಜನ ಸಾಲಾಗಿ ಹೋಗ್ತಾ ಇದ್ದರು. ಪಕ್ಕದಲ್ಲೇ ಇದ್ದ ಅಮ್ಮಂಗೆ "ಅಮ್ಮ ತಾತ ಯಾಕೆ ದಾಸಯ್ಯನ ಹಿಂದೆ ಹೋಗ್ತಾ ಇದ್ದಾರೆ" ಅಂತ ಕೇಳಿದಾಗ, ಅಮ್ಮನ ಕಣ್ಣುಗಳಲ್ಲಿ ನೀರಿತ್ತು. ಅಮ್ಮ ಉತ್ತರಿಸಲಿಲ್ಲ. ದೂರದಲ್ಲಿ ಹೊತ್ತೊಯ್ಯುತ್ತಿದ್ದ ತಾತನನ್ನ, ಅವರ ಹಿಂದೆ ಹೋಗುತ್ತಿದ್ದ ಜನಗಳನ್ನ ನೋಡುತ್ತಾ ಕಣ್ಣೊರಸಿಕೊಂಡಳು. ನಾನು ಮತ್ತೆ ಪ್ರಶ್ನೆಯನ್ನ ಕೇಳಲಿಲ್ಲ. ತಾತನ್ನ ದಾಸಯ್ಯನೇ ಕರೆದುಕೊಂಡು ಹೋದದ್ದು ಅಂತ ತೀರ್ಮಾನಿಸಿ ಬಿಟ್ಟೆ. ಮುಂದೆಂದೂ ದಾಸಯ್ಯನ್ನ ನಾನು ನೋಡಲೇ ಇಲ್ಲ.

ಎಲ್ಲಾ ನೆನೆಸಿಕೊಳ್ಳೋಕು ಕಾರಣ ಇತ್ತು. ಮೊನ್ನೆ ಹಳ್ಳೀಗೆ ಹೋಗಿದ್ದಾಗ ಹಳೇ ಫೋಟೋಗಳನ್ನ ನೋಡುತ್ತಾ ಇದ್ದೆ. ಅದರಲ್ಲಿ ನನ್ನ ಬಾಲ್ಯದ ಫೋಟೋ ಒಂದನ್ನ ನೋಡಿದೆ. ಅಂದು ಆ ಫೋಟೋ ಯಾಕೋ ಬಹಳ ಆಕರ್ಷಿಸಿತು. ತುಂಬಾ ಹೊತ್ತು ಅದನ್ನೇ ನೋಡುತ್ತಾ ಇದ್ದೆ. ಅವತ್ತು ರಾತ್ರಿ ನಂಗೊಂದು ಕನಸು ಬಿತ್ತು. ಕನಸಿನಲ್ಲಿ, ದೊಡ್ಡ ಅರವಿಂದ ಚಿಕ್ಕ ಅರವಿಂದ ಇಬ್ಬರೂ ಒಟ್ಟಿಗೆ ಬೇಟಿಯಾಗುತ್ತಾರೆ. ಊರು, ಕುಲ, ಗೋತ್ರ ಎಲ್ಲಾ ಪರಿಚೆಯಿಸಿಕೊಳ್ಳುತ್ತಾ, ನಾನು ಅರವಿಂದ ಎಂದು ಚಿಕ್ಕ ಅರವಿಂದನೂ ನಾನು ಅರವಿಂದ ಅಂತ ದೊಡ್ಡ ಅರವಿಂದನು ಹಟಕ್ಕೆ ಬೀಳುತ್ತಾರೆ. ಹಟ ಜಗಳವಾಗುವ ಹಂತಕ್ಕೆ ತಲುಪಿದಾಗ ದಾರೀಲಿ ಇದೇ ದಾಸಯ್ಯ ಶಂಖ ಊದುತ್ತಾ, ಜಾಗಟೆ ಬಾರಿಸ್ತಾ ಯಾರಿಗೋ ಕಾದಿರ್ತಾನೆ. ಇಬ್ಬರೂ ದಾಸಯ್ಯನನ್ನ ಬೇಟಿಯಾಗಿ ತಮ್ಮ ಸಮಸ್ಯೆ ಹೇಳಿ, ಯಾರು ಇದರಲ್ಲಿ ನಿಜವಾದ ಅರವಿಂದ ಅಂತ ಹೇಳಿ ಅಂದಾಗ, ಆತ ಒಂದು ದೊಡ್ಡ ಕನ್ನಡೀನ ತಂದು ಇದರಲ್ಲಿ ನೋಡಿಕೊಂಡು ನೀವೇ ತೀರ್ಮಾನಿಸಿ ಅಂದು ಯಾರೋ ಕರೀತಿದ್ದಾರೆ ಅಂತ ಹೊರಟು ಹೋಗುತ್ತಾನೆ. ಹೀಗೆ ಕೊಟ್ಟ ಕನ್ನಡಿಯಲ್ಲಿ ಚಿಕ್ಕ ಅರವಿಂದ ನೋಡಿಕೊಂಡಾಗ ದೊಡ್ಡ ಅರವಿಂದ ಕಾಣುತ್ತಾನೆ. ದೊಡ್ಡ ಅರವಿಂದ ನೋಡಿಕೊಂಡಾಗ ಚಿಕ್ಕ ಅರವಿಂದ ಕಾಣುತ್ತಾನೆ. ಅಷ್ಟು ಹೊತ್ತಿಗೆ ಎಚ್ಚರವಾಗಿ ಹೋಯಿತು. ಈ ಕನಸಿನ ತಳ ಬುಡ ಎರೆಡೂ ತಿಳೀಲಿಲ್ಲ.  ಆದರೆ ಅದರ ನೆನಪಲ್ಲಿ ನಂಗೆ ದಾಸಯ್ಯ ನೆನಪಾದ.  

ಕವಿ, ಕವಿತೆ, ಮನುಷ್ಯ


ನೋಡೀ,
ಇದು ಕವಿತೆ ಅಲ್ಲ.

ಮನುಷ್ಯ ಕವಿತೇನ ಬರೀತಾನೆ
ಕವಿತೆ ಮನುಷ್ಯನ್ನ ಬರಿಯುತ್ತೆ
ಎರ್ಡೂ ತಪ್ಪು.
ಕವಿಯಾದ ದುರಂತದ ಪರಿಹಾರಕ್ಕೆ ನಾ ಕವಿತೆ ಬರೀತೀನಿ.

ಕವಿತೇನ ಹುಡುಕಿ ಹೋಗ್ಬೇಕಂತೆ,
ಮಧ್ಯರಾತ್ರೀಲಿ ಸ್ಮಶಾನಕ್ಕೆ ದಾಳಿ ಇಡೋ ಪ್ರೇತಾತ್ಮಗಳಂತೆ,
ಮೈ ಮೇಲೆ ಬರೋ ದೆವ್ವದಂತೆ,
ಸಾಯುವ ಮಗುವಿನ ಮಾಂಸಕ್ಕೆ ಕಾಯ್ವ ರಣಹದ್ದುವಿನಂತೆ,
ಹಾಗಂತೆ, ಹೀಗಂತೆ,
ಅದೇ
ಕವ್ನಾನಂತೆ.

ಮೈ ನಡುಗುತ್ತೆ. ಎದೆಯಲ್ಲೆಲ್ಲೋ ಜೋರು ನೋವಾಗುತ್ತೆ.
ಸತ್ತು ಹೋಗುತ್ತಿದ್ದೀನಿ ಅಂತನ್ನಿಸುತ್ತೆ.
ಪದದ ಪಕ್ಕ ಪದವಿಟ್ಟದ್ದು ಕವಿತೆಯಾದದ್ದಕ್ಕೆ
ಕಂಗಾಲಾಗುತ್ತೇನೆ.
ಯಾಕೆ ಹೀಗೆ?
ಪ್ರಶ್ನಿಸಿಕೊಳ್ಳುವವನ ಸರದಿಯಲ್ಲಿ ನಿಂತು ತಬ್ಬಿಬ್ಬಾದದ್ದರ  
ಕಾರಣಕ್ಕ?

ಗೊತ್ತಿಲ್ಲ.

ಎಲ್ಲಾ ಮುಗಿದುಬಿಟ್ಟಿದೆಯೆಂಬ ತೀರ್ಮಾನಕ್ಕೆ ಬರಲಿಕ್ಕಾಗುವುದಿಲ್ಲ.

ಅದಕ್ಕೇ ಇರಬೊಹುದು
"ಕ್ಷಮಿಸು ಹುಡುಗಿ,
ನಾ ಸೋತುಬಿಟ್ಟೆ, ಕಾರಣ
ನಾ ಕವಿಯಾಗಿಬಿಟ್ಟೆ"



[ಮೇಲಿನ ಚಿತ್ರದ ಆಕರ http://www.passonapoem.com/re_learningpoetry.htm]

.......

ಮಳೆಗೆ ಮುಖವೊಡ್ಡಬೇಕು,
ಎದುರಿಗೆ ನದಿ ಹರಿಯುತ್ತಿರಬೇಕು, ಇಲ್ಲವ ಸಮುದ್ರವಿರಬೇಕು, ಅಥವಾ ದಟ್ಟ ಕಾಡಮಧ್ಯದಲ್ಲಿರಬೇಕು,
ನಿನ್ನೊಡಲಾಳದಲ್ಲಿ ಕಾವು ಪಡೆಯಲಿಕ್ಕೆ.
ಹುಡುಗೀ, ನಾನು ನೀನೇ ಇಟ್ಟ ಮೊಟ್ಟೆ
ಒಡೆಯಲಿ ಬಿಡು ಪ್ರಾಕೃತಿಕವಾಗಿ ನೀ ನೀಡ್ವ ಕಾವುಗೆ
ನೋಡು, ನೀನೇ ನೋಡು, ಮರಿಯಲ್ಲ,
ಸಹಸ್ರಾಕ್ಷ ಪುರುಷ ನಾನೇ ಅದು.
ಪ್ರಕೃತಿಯೆ ಸಾಕ್ಷಿ, ಅದುವೇ ಪ್ರಜ್ಞೆ

.......

ಬುದ್ಧ ಹಾಗೇ ಕೂತಿದ್ದ.
ಹೇ.., ತಥಾಗತ  ಹೇ.., ತಥಾಗತ
ಬುದ್ಧ ಹಾಗೇ ಕೂತಿದ್ದ.
ಮೃಣನ್ಮಯಿ, ಸಾಲಿನ ಅರ್ಥ ಕೇಳುತ್ತಾರೆ
ಬುದ್ಧನನ್ನ ಅಲ್ಲೇ ಬಿಟ್ಟು ನಾ ನೆಡೆದು ಬಿಟ್ಟೆ.

.......

ಅರ್ಥ ಎಂದರೆ?
ಕತ್ತಲ ರಾತ್ರಿಯಲ್ಲಿ,
ಎಲೆ ಉದುರಿದ ಮರದ ಕೆಳಗಲ್ಲಿ,
ನಿಂತು
ತಲೆಯಿತ್ತಿ ಕಂಡಾಗ
ನಕ್ಷತ್ರಗಳೆಲ್ಲಾ ಬಂದಿಸಲ್ಪಟ್ಟಂತೆ ಕಂಡವು

ಅನಂತ ಸ್ವಾತಂತ್ರ್ಯದೆಡೆಗೆ......


ನನ್ನ ಬದುಕಿನ ಅರ್ಥವೇನು? ಇಷ್ಟಕ್ಕೂ ಮನುಷ್ಯ ಬದುಕಿಗೆ ಅರ್ಥ ಎಂಬೋದು ಇದೆಯ? ಯಾವುದು ನನ್ನನ್ನು ಈ ಹುಟ್ಟಿನ ಸಾರ್ಥಕ್ಯವನ್ನ ನಿರೂಪಿಸುತ್ತದೆ? ಪ್ರತೀ ಬಾರಿಯೂ ನಾನು ಇಡುವ ಪ್ರತೀ ಹೆಜ್ಜೆಯ ದಿಕ್ಕನ್ನ ಈ ಪ್ರಶ್ನೆಗಳು ನಿಯಂತ್ರಿಸುತ್ತಿವೆ. ಬದುಕಿನ ಅರ್ಥವನ್ನ ಅರಿಯುವುದಲ್ಲದೆ ಈ ಬದುಕಿಗೆ ಉದ್ದೇಶವೇ ಇಲ್ಲ ಎಂದು ಒಂದು ದಿಕ್ಕಿನಲ್ಲಿ ಅನ್ನಿಸಿದರೆ, ಮತ್ತೊಂದು ದಿಕ್ಕಿನಲ್ಲಿ ಮನುಷ್ಯ ಬದುಕಿಗೆ ಅರ್ಥ ಎಂಬೋದು ಇದೆಯಾ ಅನ್ನೋ ಪ್ರಶ್ನೆಯೂ ಸೇರುತ್ತದೆ. ಒಟ್ಟಿನಲ್ಲಿ ಸದ್ಯ, ಬದುಕಿನ ಧ್ವನಿ ಗ್ರಹಿಕೆಯ ಮಾರ್ಗಗಳನ್ನ ಹುಡುಕಿ ಹೊರಟವನಿಗೆ ಧ್ವನಿ ಗ್ರಹಿಕೆಗೆ ಯಾವುದೇ ಮಾರ್ಗಗಳಿಲ್ಲ ಎಂಬೋ ಹಂತಕ್ಕೆ ಬಂದಿದ್ದೇನೆ. ಅದರೂ ಬದುಕು ಎಂಬೋದು ಅತ್ಯಂತ ನಿಗೂಢವೂ ಸಂಕೀರ್ಣವೂ ಆದ ಸಂರಚನೆಯಾಗಿದೆ. ಹೀಗೆ ಯಾವುದೋ ಧ್ವನಿಯ ಜಾಡನ್ನ ಹುಡುಕಿ ಹೊರಟವ ಹಲವು ಬಾರಿ ಒಂಟಿಯಾದೆ, ನನ್ನ ಮಾತು ಯಾರಿಗೂ ಕೇಳಲಿಲ್ಲ. ಹಲವು ಬಾರಿ ಹೇಳಲೂ ಕೂಡ ಆಗಲೇ ಇಲ್ಲ. ಆಗಲೇ ಬಹುಶಃ ನಾನು ಸಾಹಿತ್ಯ ಹಾಗು ಬರವಣಿಗೆಯನ್ನ ರೂಡಿಸಿಕೊಂಡೆ ಅಂತ ಅನ್ನಿಸುತ್ತೆ. ಏಕಾಂಗಿಯಾಗಿದ್ದೂ ಒಂಟಿತನವನ್ನ ಮೀರಲಿಕ್ಕೆ ನನಗೆ ಸಾಹಿತ್ಯ, ಬರವಣಿಗೆ ಬೇಕಾಯಿತು, ಆದ್ದರಿಂದ ಬರೆದೆ. ಈಗಲೂ ಬರೆಯುತ್ತಿದ್ದೇನೆ. ಅನುಭವ ನಿರೂಪಣೆ ಹಾಗು ಸಂವಹನದಿಂದ ಪಡೆವ ಅರಿವು ಮನುಷ್ಯನನ್ನ ಮನುಷ್ಯನನ್ನಾಗಿಸುತ್ತೆ. ನನ್ನ ಎಲ್ಲಾ ಅಹಂಕಾರವನ್ನ, ನಾನೆಂಬೋ ದರ್ಪವನ್ನ ಹೋಗಲಾಡಿಸಿ ಮೃಗಕ್ಕಿಂತಲೂ ಹೀನನಾಗುವ ಮನುಷ್ಯನ ಮನಸ್ಥಿತೆಗೆ ನಾನು ತಲುಪುವುದನ್ನ ತಡೆಯುವುದು, ನನ್ನ ಅನುಭವದಿಂದ ನಾನು ಪಡೆಯೊ ಅರಿವು ಮಾತ್ರ.

ಜೀವ ಹಿಂಸೆ ಎಂಬೋ ಪದವಿದೆ. ಜೀವವನ್ನು ನೇರವಾಗಿ ಹಿಂಸಿಸುವ ಪ್ರವೃತ್ತಿ ಎಂದು ಅದರ ಅರ್ಥ. ಆದರೆ ಇಂದು "ದೊಡ್ಡವರೂ" ಎಂದು ಕರೆಯಲ್ಪಡುವವರ, "ಓದಿಕೊಂಡವರೂ" ಎಂದು ಕರೆಯಲ್ಪಡುವವರ ನಡವಳಿಕೆಯಿಂದ ನನಗನ್ನಿಸೋದು ಜೀವಹಿಂಸೆ ಎಂದರೆ ಬಾಹ್ಯ ದೇಹಕ್ಕೆ ಮಾಡೋ ಆಘಾತವೊಂದೇ ಅಲ್ಲ. ಕ್ಷುದ್ರ ಆಸೆ, ಅಧಿಕಾರದ ಮೋಹ, ತಾನೊಬ್ಬನೇ ಬದುಕಬೇಕು ಎಂಬೋ ಅತೀ ಆಸೆ, ಹೆಣದಮೇಲೂ ಹಣ ಹೆಕ್ಕೋ ಬುದ್ದಿ, ಈ "ಬಲ್ಲವರನ್ನ", "ದೊಡ್ಡವರನ್ನ", "ಓದಿಕೊಂಡವರನ್ನ" ಯಾವ ಮಟ್ಟಕ್ಕೆ ಇಳಿಸಿದೆ ಎಂದು ಕೆಲವು ತಿಂಗಳುಗಳಿಂದ ನನ್ನ ನೇರ ಅನುಭವಕ್ಕೆ ಬಂದಿತು. ಓದು ನಮಗೆ ಬದುಕನ್ನ ಅರ್ಥೈಸಿಕೊಳ್ಳುವ ವಿವಿಧ ಆಯಾಮಗಳನ್ನ ನೀಡಬೇಕು, ಆ ಓದಿನ ಮುಖಾಂತರವಾಗಿ ಅರಿವ ಬದುಕಿನ ಅರ್ಥವಂತಿಕೆಯಲ್ಲಿ ಜೀವನ ಪ್ರೀತಿಯನ್ನ ಮನುಷ್ಯ ಪಡೆಯಬೇಕು. ಆದರೆ ಆ "ಓದಿದ" ಮಂದಿಯ ಅತೀ ಕ್ಷುಲ್ಲಕ, ಮುಖ್ಯವಾಗಿ ಯಾವುದೇ ಮೌಲ್ಯಗಳಿಲ್ಲದೆ ಹಣಕ್ಕಾಗಿ ತಮ್ಮ ಹೆಣವನ್ನೂ ಮಾರಲು ಸಿದ್ದವಿರುವ ಜನರ ನೇರ ಸಂಪರ್ಕಕ್ಕೆ ಸಿಲುಕಿ ಅನುಭವಿಸಿದಾಗ ಮನುಷ್ಯ ಬದುಕಿನ ದುರಂತ, ಇಬ್ಬಂದಿತನ, ಕೇಡಿನ ಮೂಲ ಎಲ್ಲದರ ಸೂಕ್ಷ್ಮ ನೆಲೆಯು ಬದುಕಿನಷ್ಟೇ ಸಂಕೀರ್ಣವೂ ನಿಗೂಢವೂ ಆಗಿ ಕಂಡಿದೆ.  ಯಾಕೆ ಮನುಷ್ಯ ದ್ವೇಷಿಸುತ್ತಾನೆ? ಮನುಷ್ಯನಿಗ್ಯಾತಕ್ಕೆ ಜೀವನ ಪ್ರೀತಿಯೇ ಇಲ್ಲ? ಭಯವಾಗುತ್ತಿದೆ, ಮನುಷ್ಯರೆಲ್ಲಿದ್ದಾರೆ ಎಂದು ಕಂದೀಲು ಹಿಡಿದು ಹುಡುಕಬೇಕು ಎಂದು.

ಇರಲಿ, ಏಷ್ಟೇ ಕೇಡಿದ್ದರೂ ಒಳಿತು ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ಯಾಕೊ ನನ್ನ ಬದುಕಿನಲ್ಲಿ ನಡೆದ ಒಂದು ಘಟನೆ ನೆನಪಾಗುತ್ತಿದೆ. ಒಂದು ಹಂತದಲ್ಲಿ ನನ್ನ ಬದುಕಿನ ಅತ್ಯಂತ ಮುಖ್ಯ ಘಟ್ಟದಲ್ಲಿ ನನಗೆ ದಾರಿದೀಪವಾದ ಘಟನೆಯದು. ಇದು ಸಾಮಾನ್ಯ ಘಟನೆ, ಯಾವುದೇ ವಿಶೇಷಗಳು ಇರದೇ ಇರಬೊಹುದು, ಆದರೆ ಈ ಘಟನೆ ನನ್ನ ಬದುಕಿನ ಹಲವು ಪ್ರಶ್ನೆಗಳಿಗೆ ನೇರವಾಗಿ ಉತ್ತರ ಒದಗಿಸಿತ್ತು.

ನನ್ನ ನಿರ್ಧಾರಗಳ ಬಗೆಗೆ ಗೊಂದಲದಿಂದಿದ್ದ ಸಂದರ್ಭ. ನಾನು B Sc ಮಾಡುವಾಗ ಮುಂದೇನು ಅನ್ನೋ ಪ್ರಶ್ನೆಗೆ ಉತ್ತರ ಸಿದ್ದವಿತ್ತು, ಯಾಕೆಂದರೆ ಮುಂದೆ M Sc ಮಾಡಬೇಕು ಎಂಬೋದು. ಆದರೆ M Sc ನಂತರ ಏನು ಎಂಬೋ ಪ್ರಶ್ನೆ M Sc ಆದ ನಂತರ ಕಾಡಲಿಕ್ಕೆ ಆರಂಬಿವಾಯಿತು. ಈ ಸಂದರ್ಭದಲ್ಲಿ ನಾನು ಆರ್ಥಿಕವಾಗಿ ಸ್ವಾತಂತ್ರ್ಯನಾಗಬೇಕಿತ್ತು, ಆದ್ದರಿಂದ ನಾನು ಮಾಡುವ ಕೆಲಸದಲ್ಲೇ ನಾನು ಸಂತೃಪ್ತಿ ಹಾಗು ಅರ್ಥವನ್ನ ಕಾಣಬೇಕಿತ್ತು. ಅದೊಂದು ರೀತಿಯ ತೊಳಲಾಟದ ಪರಿಸ್ಥಿತಿ, ನನ್ನ ಬದುಕಿನ ಅಸ್ತಿತ್ವವನ್ನ ಹುಡುಕಿಕೊಳ್ಳಬೇಕು, ನನ್ನನ್ನ ನಾನು ಹುಡುಕಿ ಕೊಳ್ಳೋ ಕ್ರಿಯೆ, ಆದ್ದರಿಂದಲೇ ಮಹಾನ್ ಗೊಂದಲದಲ್ಲಿದ್ದೆ.

ಹಾಗೆ ಗೊಂದಲದಲ್ಲಿರಲು ಕಾರಣವೂ ಇತ್ತು, ನಾನು M Sc ಮಾಡಿದ ವಿದ್ಯಾ ಸಂಸ್ಥೆಯಲ್ಲಿ ತೀವ್ರ ಮಾನಸಿಕ ಗುಲಾಮಗಿರಿಗೆ ಒಳಗಾಗಿ ರೋಸಿ ಹೋಗಿದ್ದೆ. ನಮ್ಮ ಶಿಕ್ಷಣ ಪದ್ದತಿ ಮನುಷ್ಯನನ್ನ ಸ್ವತಂತ್ರ್ಯನನ್ನಾಗಿ ಮಾಡಬೇಕು, ಆದರೆ ನನ್ನ ಅನುಭವದಲ್ಲಿ ನನ್ನನ್ನು ನಾನು ಓದಿದ ಸಂಸ್ಥೆ ಯಾವ ರೀತಿಯಲ್ಲಿ ಬೌದ್ಧಿಕ ಗುಲಾಮನನ್ನಾಗಿ ಮಾಡುವುದು ಅನ್ನುವುದರಲ್ಲಿಯೆ ತಲ್ಲೀನವಾಗಿತ್ತು. ನಾನೋ ಮಾಹಾನ್ ಸ್ವಾತಂತ್ರ್ಯವನ್ನ ಬಯಸುವವ, ಆದರೆ ಆ ಸಂಸ್ಥೆಗೆ ಸಿಕ್ಕಿ ಹಾಕಿಕೊಂಡಿದ್ದೆ. ನನ್ನದೂ ತಪ್ಪಿದೆ, ನನಗೆ ಪದವಿ ಬೇಕಿತ್ತು. ಆದ್ದರಿಂದ ಎಷ್ಟೇ ಹಿಂಸೆಗೆ ತುತ್ತಾದರೂ ಬಾಯಿ ಮುಚ್ಚಿಕೊಂಡಿದ್ದೆ. ಕಂಡಿತವಾಗಿಯು ನನ್ನ ತಪ್ಪಿತ್ತು ಅದು ಪದವಿಗೆ ಆಸೆ ಪಡುವುದು. ಆದರೆ ಏನು ಮಾಡುವುದು ನಾನು ಆರ್ಥಿಕವಾಗಿ ಸ್ವಾತಂತ್ರ್ಯನಾಗಬೇಕಿದ್ದರೆ ನಾನು ಆ ಪದವಿಯನ್ನ ಪಡೆಯಲೇ ಬೇಕಿತ್ತು. ಆದ್ದರಿಂದ ಕಷ್ಟಪಟ್ಟು ಬದುಕಿದೆ, ಪ್ರತೀ ಕ್ಷಣವೂ ನನ್ನ ಸ್ವತಂತ್ರ್ಯವನ್ನ ಕೊಂದುಕೊಂಡು ಬದುಕಿಬಿಟ್ಟೆ. ಆ ಕ್ಷಣಗಳಲ್ಲಿ ತೀವ್ರ ಖಿನ್ನತೆಗೆ ಒಳಗಾಗುತ್ತಿದ್ದೆ. ಅದನ್ನ ಹೇಳಲೂ ಯಾರು ನನ್ನ ಜೊತೆಗೆ ಇಲ್ಲ, ನನ್ನ ಮಾತೂ ಯಾರಿಗೂ ಅರ್ಥವಾಗುವುದಿಲ್ಲ. ನೋಡಿ ನಗುತ್ತಿದ್ದರು, ಕಾರಣ ಅವರೆಲ್ಲರೂ ಗುಲಾಮಗಿರಿಗೆ ಒಗ್ಗಿಹೋಗಿದ್ದರು. ಅವರು ಸದಾ ಗುಲಾಮರೇ ಆಗಿ ಹೋಗಿದ್ದರಿಂದ ಸ್ವಾತಂತ್ರ್ಯದ ಅನುಭವ ಅವರಿಗೆ ಬೇಕಿರಲಿಲ್ಲ. ನನಗೋ ಸ್ವತಂತ್ರ್ಯ ಬೇಕು,  ಆದರೆ ಆ ಸಂಸ್ಥೆ ನನ್ನನ್ನು ತೀವ್ರ ಗುಲಾಮಗಿರಿಗೆ ಒಳಪಡಿಸಿತ್ತು. ರೋಸಿಹೋಗಿದ್ದೆ. ಹೀಗೆ ಸ್ವಾತಂತ್ರ್ಯ ಹಾಗು ಗುಲಾಮಗಿರಿಗಳ ನಡುವೆ ತೊಳಲಾಡುತ್ತಿದ್ದೆ. ಯಾವಾಗ ನನ್ನ M Sc ಮುಗಿಯಿತೋ ತಕ್ಷಣ ಆ ಸಂಸ್ಥೆಯನ್ನ ಬಿಟ್ಟು ಬಂದೆ.

ಬದುಕಿನ ಅರ್ಥದ ಸಂಶೋದನೆಯನ್ನ ಬೌತಶಾಸ್ತ್ರದ ಸಂಶೋದನೆಯ ಜೊತೆಗೆ ಕ್ರೋಡೀಕರಿಸಿದೆ. ಬೌತಶಾಸ್ತ್ರ ನನ್ನ ಬದುಕಿನ ಮಾರ್ಗವಾಯಿತು. ಭಾರತದ ಪ್ರಖ್ಯಾತ ಸಂಶೋದನಾ ಸಂಸ್ಥೆಯಲ್ಲಿ ಸಂಶೋದನಾ ವಿದ್ಯಾರ್ಥಿಯಾಗಿ ಸೇರಿಕೊಂಡೆ. ಮಹತ್ವಾಕಾಂಕ್ಷೆಯಿತ್ತು ಸಾದಿಸಬೇಕೆಂಬೋ ಮನಸಿತ್ತು. ಹುಚ್ಚಿಗೆ ಬಿದ್ದವನಂತೆ ಓದಲು ತೊಡಗಿದೆ, ಬೆಳಗ್ಗೆ ೮ ಗಂಟೆಯಿಂದ ರಾತ್ರಿ ೧೨ರ ವರೆಗೆ ಓದುತ್ತಿದ್ದೆ. ಎಲ್ಲರಿಂದ ಬೇರ್ಪಟ್ಟ., ಸಾದಿಸುವುದರಲ್ಲಿ ಅರಿಯಬೊಹುದು ಎಂಬೋ ಆಶಯ. ವಿಜ್ಞಾನದಲ್ಲಿನ ಸಂಶೋದನೆಯಿಂದ ಪ್ರಕೃತಿಯ ಬಗೆಗಿನ ಸತ್ಯವನ್ನ ಅರಿಯುತ್ತೀನಿ ಎಂಬೋ ನಂಬಿಕೆ ಇತ್ತು. ಸ್ವಲ್ಪ ದಿನ ಕಳೆದಂತೆ ನಾನು ಅಲ್ಲಿಯೂ ಗುಲಾಮನಾಗುತ್ತಿದ್ದೀನಿ ಎಂಬುದು ಅರಿವಾಗುತ್ತಾ ಹೋಯಿತು. ಸಂಶೋದನೆ ಎಂದರೆ ನನ್ನ ಮನಸ್ಸಲ್ಲಿ ಹುಟ್ಟಿದ ಪ್ರಶ್ನೆಗೆ ಉತ್ತರವನ್ನ ಕಂಡುಕೊಳ್ಳುವುದೇ ವಿನಃ ಯಾರೋ ಕೊಟ್ಟ ಪ್ರಶ್ನೆಗೆ ಉತ್ತರವನ್ನ ಕಂಡುಕೊಳ್ಳುವುದಲ್ಲ ಅಂತ ಅನ್ನಿಸಿತು. ಅದು ಸತ್ಯವೂ ಆಗಿತ್ತು. ನನ್ನ ಪ್ರಕಾರ, ನಾನು ಪ್ರಕೃತಿಯನ್ನ ಕಾಣುತ್ತೇನೆ ಹಾಗೆ ಕಂಡಾಗ ಅದು ನನಗೆ ಏನೋ ಪ್ರಶ್ನೆಯನ್ನ ನೀಡುತ್ತದೆ ಅದಕ್ಕೆ ಉತ್ತರವನ್ನ ಕಂಡುಕೊಳ್ಳಬೇಕಿತ್ತು, ಆದರೆ ಆ ಸಂಶೋದನಾ ಸಂಸ್ಥೆಯಲ್ಲಿ ನನ್ನ ಗೈಡ್ ನ ಯಾವುದೋ ಪ್ರಾಜೆಕ್ಟಿಗೆ ನಾನು ದುಡಿಯುತ್ತಿದ್ದೆ, ಅಂದರೆ ಅಲ್ಲಿ ನಿಜವಾಗಿಯೂ ನಾನು ಯಾವುದೇ ಸಂಶೋದನೆ ಮಾಡುತ್ತಿಲ್ಲ ಅಂತ ಅನ್ನಿಸಿತು. ಬದುಕು ಇಲ್ಲಿ ನನ್ನ ಅರ್ಥಕ್ಕೆ ದಕ್ಕುವುದಿಲ್ಲ ಅಂತ ಅನ್ನಿಸಲು ಆರಂಬಿಸಿತು.ವಿಜ್ಞಾನ ಎಂಬೋದು ಅನುಭವವನ್ನ ಮೀರಿದ ಸತ್ಯವನ್ನ ಹುಡುಕೋದು ಎಂಬುದು ಕೇವಲ ಮಾತಾಗಿ ಉಳಿದಿತ್ತು. ಆ ಸಂಶೋದನಾ ಸಂಸ್ಥೆಯಲ್ಲಿ, ಸಂಶೋದನೆ ಎಂದರೆ ಒಂದು ವ್ಯಾಪಾರವಾಗಿತ್ತು. ನಾವು ಎಷ್ಟು ಸಂಶೋದನಾ ಪ್ರಬಂದವನ್ನ ಪ್ರಕಟಿಸಿದ್ದೇವೆ ಎಂಬುದು ಮಾತ್ರ ಮುಖ್ಯವಾಗಿ ಹೋಗಿತ್ತು. ಅದು ಬೇರೆಯವರಿಗೆ ಸರಿಯಿರಬೊಹುದೋ ಏನೋ, ಆದರೆ ಅದೇ ನನಗೆ ಒಂದು ರೀತಿಯ ಹಿಂಸೇಯೂ ಆಗ ತೊಡಗಿತು. ಹಲವು ತಾತ್ವಿಕ ಅರ್ಥಕ್ಕೂ ಅದು ಹೊಂದಿಕೆಯಾಗುತ್ತಿರಲಿಲ್ಲ. ಒಮ್ಮೆ ಸೋಮವಾರ ಬೆಳಗ್ಗೆ ೮ ಗಂಟೆಗೆ ಆ ಸಂಸ್ಥೆಗೆ ಹೋದವ ಶನಿವಾರ ಮದ್ಯಾಹ್ನ ೨ ಗಂಟೆಗೆ ಹೊರಗೆ ಬಂದಿದ್ದೆ. ಅಷ್ಟೂ ದಿನ ಒಂದು ವಾರಗಳ ಕಾಲ ಯಾರೊಂದಿಗೂ ಮಾತೂ ಇರಲಿಲ್ಲ. ಹೊರಗೆ ಬಂದಾಗ ಇಡೀ ಪ್ರಪಂಚ ನನಗೆ ವಿಚಿತ್ರವಾಗಿ ಕಾಣಲು ಆರಂಭವಾಯಿತು. ಅಂದರೆ ಪ್ರಪಂಚದಲ್ಲಿ ನಾನು ಪ್ರತ್ಯೇಕಕೊಂಡಿದ್ದೆ. ಎಷ್ಟೆಂದರೆ ನನ್ನನ್ನೇ ನಾನು ಗುರುತಿಸಿಕೊಳ್ಳಲಾರದಷ್ಟು. ಆಗ ಅನ್ನಿಸಿತು ಎಲ್ಲೋ ನಾನು ತಪ್ಪುತ್ತಿದ್ದೇನೆ ಎಂದು. ಅಂದರೆ ನಾನು ಕಾಣುವ ಈ ಮಾರ್ಗದಲ್ಲಿ ಬದುಕಿನ ಅರ್ಥವನ್ನ ನಾನು ಕಾಣಲಾರೆ ಎಂದು, ಅತಿ ಮುಖ್ಯವಾಗಿ ತೀರ ಸಂಕುಚಿತವಾಗಿ ನಾನು ಮತ್ತೊಮ್ಮೆ ಅಲ್ಲಿ ಬಂದಿಯಾಗಿ ಗುಲಾಮನಾಗಿದ್ದೆ.  ಯಾವ ಭಯವೂ ಇಲ್ಲದೆ ಲೋಕವನ್ನ ಕಾಣುವುದೂ, ಕಂಡದ್ದನ್ನ ಮತ್ತೇ ಯಾವ ಭಯವೂ ಇಲ್ಲದೆ  ವ್ಯಕ್ತಪಡಿಸುವುದು ಇದನ್ನೇ ಸ್ವಾತಂತ್ರ್ಯ ಎಂದು ಕರೆಯುತ್ತಾರೆ. ಈ ಸ್ವಾತಂತ್ರ್ಯವೇ ನನಗೆ ನನ್ನ ಬದುಕಿನ ಧ್ವನಿಯನ್ನ ಕೇಳಿಸುವುದು. ಅರಿಯುವುದಕ್ಕೇ ಸ್ವಾತಂತ್ರ್ಯವಿಲ್ಲ ಎಂದಾದರೆ ಕಾಣೂವುದೇನನ್ನ. ಒಟ್ಟಿನಲ್ಲಿ ಸಂಶೋದನೆಯನ್ನೆ ಬಿಟ್ಟುಬಿಡಬೇಕೆಂದುಕೊಂಡೆ. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ, ನಾನು ಆ ಸಂಶೊದನಾ ಸಂಸ್ಥೆಯನ್ನ ತೊರೆದರೆ ನಾನು PhD ಮಾಡಲಿಕ್ಕೆ ಸಾದ್ಯವಿಲ್ಲ. ಈಗಲಂತೂ ಆ PhD ಮಾಡುವುದೇ ಬೇಡೆ ಎಂದಾಗಿತ್ತು. PhD ಇಲ್ಲದೆ ಹೋದರೆ ನನಗೆ ಒಳ್ಳೆಯ ಉದ್ಯೋಗ ಸಿಗುವುದಿಲ್ಲ. ನಾನು ನೆಲೆ ನಿಲ್ಲುವುದಕ್ಕೆ ಆಗುವುದಿಲ್ಲ. ಆದರೆ ನಾನು ಈ ಸಂಶೋದನೆ ಎಂಬೋ ವ್ಯಾಪರದಲ್ಲೂ ಮುಂದುವರೆಯಲು ಸಿದ್ಧನಿರಲಿಲ್ಲ. ನನಗೆ ಹಲವು ತಾತ್ವಿಕ ಸಮಸ್ಯೆಗಳೂ ಎದುರಾದವು. ಅತಿ ಮುಖ್ಯವಾಗಿ ಪ್ರಕೃತಿಯನ್ನ ಅರಿಯುವುದೂ, ಸತ್ಯವನ್ನ ಕಾಣಿವುದು ಉದ್ದೇಶರಹಿತವಾಗಿರಬೇಕು ಎಂಬುದು. ಅಂದರೆ ಈಗ ನಾನು ಪ್ರಕೃತಿಯನ್ನ, ಆಕೆಯನ್ನ ಅರಿಯಬೇಕು ಅನ್ನೋ ಉದ್ದೇಶವೇ ಅಕೆಯನ್ನ ಅರಿಯಲು ಸಾದ್ಯವಾಗುವುದಿಲ್ಲ ಎಂಬೋ ಪ್ರಜ್ಞೆ, ಅಂತಹುದರಲ್ಲಿ ಪದವಿಗಾಗಿ, PhD ಗಾಗಿಯೆಲ್ಲಾ ನಾನು ಸಂಶೋದನೆ ಮಾಡಿದರೆ ಸತ್ಯ ಕಾಣುವುದಿಲ್ಲ ಎಂಬುದು. ಆಕೆಯ ಮುಂದೆ ಸುಮ್ಮನೆ ಕಾಲಿ ಕೈಗಳಲ್ಲಿ ನಾನು ನಿಲ್ಲಬೇಕು, ಆಗ ಆಕೆ ಆಕೆಯ ಎಲ್ಲಾ ರಹಸ್ಯಗಳನ್ನೂ ಬಿಚ್ಚಿಡುತ್ತಾಳೆ. ನಾನು ಅರಿಯಬೇಕು ಅಂತ ಹೋದಾಗ ಆಕೆ ಏನನ್ನು ತಿಳಿಸುವುದಿಲ್ಲ. ಅದರಲ್ಲೂ ನಾನು ಪ್ರಕೃತಿಯ ಒಂದು ಅಂಗ, ನನ್ನಲ್ಲಿ ಪದವಿಗಾಗಿಯೋ, ಹಣಕ್ಕಾಗಿಯೋ, ಆಕೆಯನ್ನ ಅರಿಯಲು ಹೋದರೆ ಸ್ವಲ್ಪವೂ ಅರಿಯಲಾಗುವುದಿಲ್ಲ. ಒಂದು ಕಥೆ ನೆನಪಾಗುತ್ತದೆ. ನಾನು ಚಿಕ್ಕವನಾಗಿದ್ದಾಗ ನನಗೆ ಯಾರೋ ಹೇಳಿದ್ದದ್ದು. ಒಂದು ಕಾಡು, ಆ ಕಾಡಿನಲ್ಲಿ ಒಬ್ಬ ಹುಡುಗ ಇರುತ್ತಾನೆ. ಆ ಹುಡುಗನಿಗೆ ಎಲ್ಲಾ ಪ್ರಾಣಿ, ಪಕ್ಷಿಗಳ ಭಾಷೆ ಅರ್ಥವಾಗುತ್ತಿರುತ್ತದೆ. ಅವನು ಮರ ಗಿಡಗಳೊಂದಿಗೆ ಮಾತನಾಡುತ್ತಿರುತ್ತಾನೆ. ಅವನ ಪ್ರತಿಯೊಂದು ಪ್ರಶ್ನೆಗಳಿಗೆ ಪ್ರಕೃತಿ ಉತ್ತರಿಸುತ್ತಿರುತ್ತದೆ. ಒಮ್ಮೆ ಅವನಗೆ ನಗರದ ಒಬ್ಬ ವ್ಯಕ್ತಿ ಪರಿಚಿತನಾಗುತ್ತಾನೆ. ಆ ಕಾಡ ಹುಡುಗನನ್ನು ಕರೆದು, ಹೇಗೆ ತಾನು ನಾಗರೀಕನಾಗಬೇಕು ಎಂದು ತಿಳಿಸಿ, ನಿನ್ನ ಕಾಡಿನಲ್ಲಿ ಚಿನ್ನದ ಮೊಟ್ಟೆ ಇಡೋ ಹಕ್ಕಿ ಇದೆ, ಆ ಹಕ್ಕಿ ನಿನ್ನ ಮಾತು ಕೇಳುತ್ತೆ, ಒಂದು ಮೊಟ್ಟೆ ತೆಗೆದುಕೊಂಡು ಬಾ, ನಿನಗೆ ಬೇಕಿದ್ದದ್ದು ಕೊಡುತ್ತೇನೆ ಎಂದು ಹೇಳುತ್ತಾನೆ. ಅದರಂತೆ ಈ ಕಾಡ ಹುಡುಗ ಆ ಹಕ್ಕಿಯನ್ನ ಕರೆಯುತ್ತಾನೆ, ಯಾವ ಹಕ್ಕಿಯೂ ಬರುವುದಿಲ್ಲ. ಅವನ ಮಾತಿಗೆ ಯಾವುದೂ ಪ್ರತಿಕ್ರಿಯಿಸುವುದಿಲ್ಲ. ಹೀಗೆ ನಮ್ಮದೊಂದು ಉದ್ದೇಶವನ್ನ ಇಟ್ಟುಕೊಂಡು ಆಕೆಯನ್ನ ಅರಿಯುತ್ತೀನಿ ಎಂದು ಹೋದರೆ ಆಕೆ ಒಲಿಯುವುದಿಲ್ಲ ಎಂಬೋದು ನನಗೆ ಗೊತ್ತಾಯಿತು.ಆದ್ದರಿಂದ ಸಂಶೋದನಾ ಸಂಸ್ಥೆಯನ್ನ ಬಿಡೋಣ ಎಂದು ಒಂದು ಕಡೆ, ಆದರೆ ಬಿಟ್ಟರೆ ಮುಂದೇ ಏನು ಎಂಬೋದು ಮತ್ತೊಂದು ಕಡೆ ಹೀಗೆ ತೊಳಲಾಟಕ್ಕೆ ಬಿದ್ದೆ. ಸುಮ್ಮನೆ ಕಾಲಿ ಕೈಗಳಲ್ಲಿ ನಿಲ್ಲುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ.

ನಮ್ಮ ಸಾಕ್ಷಿಪ್ರಜ್ಞೆಯ ಧ್ವನಿಯಂತೆ ನಡೆಯುವುದು ಅಷ್ಟು ಸುಲಭವಲ್ಲ, ಅದೂ ಹೀಗೆ ಸುಮ್ಮನೆ ಕಾಲಿ ಕೈಗಳಲ್ಲಿ ನಿಲ್ಲುವುದಂತು ಸಾದನೆಯೇ ಸರಿ. ನಿಜ ನಮ್ಮ ಇಚ್ಚೆಯಂತೆ ಬದುಕುವುದು ಬದುಕಿನ ಮಹಾನ್ ಸಾದನೆ. ಹೊರಗಿನ ಎಲ್ಲಾ ಆಸಕ್ತಿಗಳು, ಆಕಾಂಕ್ಷೆಗಳು ನನ್ನನ್ನು ನನ್ನ ಒಳಧ್ವನಿಯನ್ನ ಕೇಳಲಿಕ್ಕೆ ಬಿಡುತ್ತಿರಲಿಲ್ಲ. ಅಧಿಕಾರ, ಪದವಿ ,ಸಮಾಜದಲ್ಲಿ ಸ್ಥಾನಬಲದಿಂದ ಪಡೆಯಬೊಹುದಾದ ಗೌರವ ಎಲ್ಲಾ ಒಂದು ದಿಕ್ಕಿನಲ್ಲಿ ನನ್ನನ್ನ ಆಕರ್ಷಿಸುತ್ತಿತ್ತು, ಮತ್ತೊಂದು ಕಡೆ ಮನಸ್ಸಿಗೆ ನೆಚ್ಚಿದಂತೆ ಬದುಕುವುದು, ಸತ್ಯವನ್ನ ಕಾಣುವುದು, ಸುಂದರವಾಗಿ ಬದುಕುವುದು ನನ್ನನ್ನು ಆಕರ್ಷಿಸುತ್ತಿತ್ತು.  ಅಲ್ಲಿ ನಾನು ದ್ವಂದ್ವಕ್ಕೆ ಬಿದ್ದಿದ್ದೆ. ಹಾಗು ತೀವ್ರ ಒತ್ತಡದಲ್ಲಿದ್ದೆ. ಈ ಒಂದು ನಿರ್ಧಾರದಿಂದ ನನ್ನ ಬದುಕೇ ಪರಿವರ್ತನೆಗೆ ಸಿಲುಕುತ್ತದೆಂಬ ಅರಿವು ನನ್ನಲ್ಲಿತ್ತು. ನನ್ನ ಮುಂದಿನ ಇಡೀ ಜೀವನ ಈ ನಿರ್ಧಾರದ ಮೇಲೆ ಬಹುವಾಗಿ ಕೇಂದ್ರೀಕೃತವಾಗಿತ್ತು. ನಿರ್ಧಾರ ಅಷ್ಟು ಸುಲಭವಾಗಿರಲಿಲ್ಲ. ಎಷ್ಟು ಒತ್ತಡಕ್ಕೆ ಸಿಲುಕಿದ್ದೆ ಎಂದರೆ ಒಮ್ಮೆ ಬೆಂಗಳೂರಿನ ರಸ್ತೆಯ ಮದ್ಯದಲ್ಲಿ ತಲೆತಿರುಗಿ ಕೂತುಬಿಟ್ಟೆ.

ಯಾರು ಈ ನನ್ನ ಸಮಸ್ಯೆಯನ್ನ ಪರಿಹರಿಸುವವರು? ನನಗೊಂದು ನಂಬಿಕೆ ಇತ್ತು, ಅದು ನನ್ನ ಅನುಭವದಿಂದ ಬಂದದ್ದು,ನಾವು ಶುದ್ದ ಮನಸ್ಸಿನಿಂದ ಏನನ್ನಾದರೂ ಸಂಕಲ್ಪಿಸಿದರೆ ಆ ಪ್ರಕೃತಿಯೇ ದಾರಿ ತೋರತ್ತೆ ಎಂಬುದು. ನಾವು ಸಂಕಲ್ಪಿಸಬೇಕು ಅಷ್ಟೆ. ಆಗ ನಾನು ರಾಮಕೃಷ್ಣ ಮಠಕ್ಕೆ ಹೋಗಿ ಸಲಹೆಯನ್ನ ಪಡೆಯೋಣ ಎಂದುಕೊಂಡೆ. ಮೊದಲಿನಿಂದಲೂ ರಾಮಕೃಷ್ಣ, ವಿವೇಕಾನಂದರು ನನ್ನನ್ನ ಪ್ರಬಾವಿಸಿದ್ದರು. ಆದ್ದರಿಂದ ಮಠದ ಸ್ವಾಮೀಜಿಯವರನ್ನ ಸಂಪರ್ಕಿಸಿ ಅವರಲ್ಲಿ ನನ್ನ ದ್ವಂದ್ವವನ್ನ ಇಟ್ಟರೆ ಪರಿಹಾರ ದೊರಕಬೊಹುದು ಎಂಬ ನಂಬಿಕೆಯಿಂದ ರಾಮಕೃಷ್ಣ ಮಠಕ್ಕೆ ಹೊರಟೆ.  ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ರಾಮಕೃಷ್ಣ ಮಠಕ್ಕೆ ಬೇಟಿಯಿತ್ತೆ.

ಧ್ಯಾನ ಮಂದಿರ ನಿಶ್ಯಬ್ದವಾಗಿತ್ತು. ಕೂತೆ. ನಿರಂತರವಾಗಿ ಹರಿವ ಜೀವದ್ರವ್ಯವೊಂದರ ಸಮೀಪ ಸಾಂಗತ್ಯಕ್ಕೆ ಒಳಪಟ್ಟೆ. ಜಗತ್ತಿಗೆ ಮಾನವ ಪ್ರೇಮವನ್ನೂ, ಜೀವನ ಪ್ರೀತಿಯನ್ನೂ ನೀಡಿದ ಮಹೋನ್ನತ ವ್ಯಕ್ತಿ ರಾಮಕೃಷ್ಣರು. ಗುರುವೇ ತಲೆಬಾಗಿ ನಿಂತಿದ್ದೀನಿ ನಿನ್ನ ಬಳಿ. ಜಗತ್ತನ್ನ ಪ್ರೀತಿಸಬೇಕು, ಆ ಪ್ರೀತಿಸುವ ಮನಸ್ಸು ತಪ್ಪ ಮತ್ತೇನು ಬೇಡ. ಹಾಗೆ ಪ್ರೀತಿಸುವ ಮನಸ್ಸನ್ನ ನೀಡೋ, ಕೇಳಿಕೊಂಡೆ. ಮನುಷ್ಯ ಮನುಷ್ಯನಾಗೋದು ಅಷ್ಟು ಸುಲಭವಾಗಿರಲಿಲ್ಲ. ಬಾಹ್ಯ ಆಕಾಂಕ್ಷೆಗಳು, ಅಪೇಕ್ಷೆಗಳು ಮನುಷ್ಯನನ್ನ ಮೃಗವನ್ನಾಗಿಸುತ್ತೆ. ನಾನು ಮನುಷ್ಯನಾಗೇ ಇರಬೇಕಿತ್ತು. ಆಶ್ರಮದಲ್ಲಿ ಸ್ವಾಮೀಜಿಗಳನ್ನ ಕಾಣಲಿಕ್ಕೆ ಕಚೇರಿಯಲ್ಲಿ ಅನುಮತಿಯನ್ನ ಪಡೆಯಬೇಕಿತ್ತು. ಕಚೇರಿಯಲ್ಲಿ ಅನುಮತಿಯನ್ನ ನೀಡಬೇಕಿದ್ದ ಮತ್ತೊಬ್ಬ ಸ್ವಾಮೀಜಿಯವರು ಎಲ್ಲಿಗೋ ತೆರೆಳಿದ್ದ ಕಾರಣ ನಾನು ಅವರಿಗಾಗಿ ಕಾಯುತ್ತಾ ಕೂತೆ. ಆಗ ಒಂದು ಘಟನೆ ನಡೆಯಿತು.

ಆಗ ಅಲ್ಲಿ ಒಬ್ಬ ವ್ಯಕ್ತಿ ಕಂಡರು. ಕಚ್ಚೆ ಪಂಚೆ ಉಟ್ಟುಕೊಂಡು, ಮೇಲೆ ಕೆಂಪು ಶಾಲನ್ನ ಹೊದ್ದುಕೊಂಡು ಹಣೆಯಲ್ಲಿ ನಾಮವನ್ನ ದರಿಸಿ ಸಾಂಪ್ರದಾಯಿಕ ಉಡುಪಿನಲ್ಲಿದ್ದರು.ನನ್ನ ಪಕ್ಕಕ್ಕೆ ಬಂದಾಗ ಗೌರವಿಸಿ ಎದ್ದು ನಿಂತೆ. ನನ್ನ ಪಕ್ಕದಲ್ಲೆ ಕುಳಿತಿದ್ದರು. ಆಗ ಅವರಿಗೆ ಒಂದು ದೂರವಾಣಿ ಕರೆ ಬಂದಿತು. ಆ ಕರೆಯಿಂದ, ಇಷ್ಟು ಹೊತ್ತು ಶಾಂತವಾಗಿ ಕಂಡಂತಹ ವ್ಯಕ್ತಿ ಸ್ವಲ್ಪ ಉದ್ವಿಘ್ನರಾದಂತೆ ಕಂಡರು. ದೂರವಾಣಿಯಲ್ಲಿ ಜೋರಾಗಿ ಕೋಪಗೊಂಡು ಮಾತಾಡುತ್ತಿದ್ದರು. ಜೋರಾಗಿ ಮಾತಾಡುತ್ತಿದ್ದುದರಿಂದ ಅವರ ಮಾತುಗಳು ನನಗೂ ಕೇಳುತ್ತಿತ್ತಾದ್ದರಿಂದ ಅವರ ಮಾತುಗಳಿಂದ ನಾನಿಷ್ಟನ್ನ ಗ್ರಹಿಸಿದೆ. ಆ ವ್ಯಕ್ತಿ ದೊಡ್ಡ ಸಂಸ್ಕೃತ ಪಂಡಿತರೂ, ರಾಷ್ಟ್ರಪತಿಗಳಿಂದ ಬಂಗಾರದ ಪದಕವನ್ನ ಪಡೆದವರೂ ಆಗಿದ್ದರು. ಯಾವುದೋ ವ್ಯಾವಹಾರಿಕ ಸಮಸ್ಯೆಯೋ ಏನೋ ಅವರ ಮಗ ತಂದೆಯ ವಿರುದ್ದವಾಗಿದ್ದ. ಸಂಸ್ಕೃತ ಪಂಡಿತರ ಮಗ ತನ್ನ ತಂದೆಯನ್ನ ಆಸ್ತಿಗಾಗಿ ಬೆದರಿಸುತ್ತಿದ್ದ. ಕಡೆಗೆ ಆ ಮಗ ತಂದೆಯನ್ನ ಕೊಲ್ಲುತ್ತೀನೆಂದು ಬೆದರಿಸಿದ್ದ. ಈ ಸಂಸ್ಕೃತ ಪಂಡಿತರು ಆಸ್ತಿಯನ್ನ ನೀಡಲಾರದೆ, ಮಗನ ಬಾಧೆಯನ್ನ ತಾಳಲಾರದೆ ಅವನ ವಿರುದ್ದ ಪೋಲೀಸಿನವರಿಗೆ ದೂರು ನೀಡಿದ್ದರು. ಈಗ ಪೋಲೀಸರೆ  ಕರೆ ಮಾಡಿದ್ದರು. ಅವರ ಮಾತುಗಳನ್ನ ಸಂಗ್ರಹ ರೂಪದಲ್ಲಿ ಈ ರೀತಿ ನೀಡುತ್ತೇನೆ.
"ಸ್ವಾಮೀ ಏನು ಪ್ರಾರಬ್ದವೋ ಏನೋ ನೋಡಿ. ನಾನು ನನ್ನ ಮಗನ ವಿರುದ್ದವೇ ದೂರು ನೀಡಬೇಕಾಗಿ ಬಂದಿದೆ. ನಾನು ಬಹು ದೊಡ್ಡ ಸಂಸ್ಕೃತ ಪಂಡಿತ, ರಾಷ್ಟ್ರಪತಿಗಳಿಂದ ಬಂಗಾರದ ಪದಕ ಪಡೆದವನು, ಹತ್ತು ವರ್ಷಗಳಿಂದ ಭಾಗವತವನ್ನ ಪ್ರವಚನ ಮಾಡುತ್ತಿದ್ದೇನೆ. ಆದರೆ ಏನು ಮಾಡೋದು, ನನ್ನ ಮಗ ಇವತ್ತು ನನ್ನ ಇರುವ ಒಂದೇ ಒಂದು ಸ್ವಂತ ಮನೆಯನ್ನ ಕೊಡು ಅಂತ ಕೇಳ್ತಾ ಇದ್ದಾನೆ. ಕೊಡದೇ ಹೋದರೆ ಕೊಲ್ಲುತ್ತೀನಿ ಅಂತ ಬೆದರಿಸುತ್ತಿದ್ದಾನೆ. ಮೂವತ್ತು ವರ್ಷ ಸ್ವಾಮಿ ಅವನಿಗೆ. ಏನೂ ಕೆಲಸ ಮಾಡೋಲ್ಲ. ನಾನೇ ನನ್ನ ಪಿಂಚಣಿ ಹಣ ನೀಡ್ತಾ ಇದ್ದೀನಿ. ಈಗ ನೋಡಿದ್ರೆ ಮದುವೆ ಮಾಡು ಅಂತ ಹೇಳ್ತಾನೆ, ಏನು ಸ್ವಾಮಿ ಮಾಡೋದು. ಇರೋ ಒಂದು ಮನೆಯನ್ನ ಅವನಿಗೆ ಕೊಟ್ಟು ಬಿಟ್ಟರೆ ಮುಂದೆ ನಾನೇನು ಮಾಡಲಿ. ಕೊಲ್ಲುತ್ತೀನಿ ಅಂತ ಬೆದರಿಸುತ್ತಿದ್ದಾನೆ, ಅದಕ್ಕೆ ದೂರು ನೀಡಿದೆ. ದೂರು ನೊಂದಾಯಿಸಬೇಡಿ. ಸ್ವಲ್ಪ ಹೆದರಿಸಿ ಸಾಕು. ದಯವಿಟ್ಟು ಈ ಒಂದು ಸಹಾಯ ಮಾಡಿ. ನಾನು ಸಂಸ್ಕೃತ ಪಂಡಿತ, ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪಡೆದವ. ಹತ್ತು ವರ್ಷಗಳಿಂದ ಭಾಗವತವನ್ನ ಪ್ರವಚನ ಮಾಡುತ್ತಿದ್ದೇನೆ." ಅಂತ ಕೋಪದಲ್ಲಿದ್ದರು. ನನಗೆ ಏನೂ ತಿಳಿಯಲಿಲ್ಲ. ಯಾಕೆ ಈ ಮನುಷ್ಯ ಅಷ್ಟು ಕ್ಷೋಭೆಯಲ್ಲಿದ್ದಾನೆ ಎಂಬುದು. ಭಾಗವತ, ವ್ಯಾಸರ ಕಥೆಯದು, ಶುಕನ ಕಥೆಯದು, ಸಾವು ಬದುಕಿನ ಕಥೆಯದು. ಒಬ್ಬ ಸಾವನ್ನ ಮೀರಿದಾತ ಸಾವಿನ ಸನಿಹಕ್ಕೆ ಕೂತವನಿಗೆ ಹೇಳುವ ಕಥೆಯದು ಭಾಗವತ. ಕೃಷ್ಣನ ಕಥೆಯಾಗಿ, ಗೋಪಿಯರ ಕಥೆಯಾಗಿ, ಜೀವ ಬದುಕು ಸಾವಿನ ರೂಪಕವಾಗಿ ಹರಿದದ್ದು ಭಾಗವತ. ಆ ಭಾಗವತದಿಂದ ಇವರು ಏನನ್ನೂ ಪಡೆಯಲಿಲ್ಲವೆ? ನಾನು ಆ ಘಟನೆಯನ್ನಾಗಲೀ, ಆ ವ್ಯಕ್ತಿಯನ್ನಾಗಲೀ ವಿಶ್ಲೇಷಿಸುತ್ತಿಲ್ಲ. ಅವಲೋಕಿಸುತ್ತಲೂ ಇಲ್ಲ. ಕೇವಲ ಅಲ್ಲಿ ಕಂಡದ್ದನ್ನು ಮಾತ್ರ ಹೇಳುತ್ತಿದ್ದೇನೆ. ಹಾಗು ಈ ಘಟನೆ ನನಗೇಕೆ ಅಷ್ಟು ಪ್ರಮುಖವಾಯಿತು ಎಂದರೆ ಅದೂ ನಾನು ಹೇಳಲಾರೆ. ಕೆಲವು ಘಟನೆಗಳು ಬದುಕನ್ನು ನೋಡುವ ಹಾಗು ಸ್ವೀಕರಿಸುವ ಬಗೆಯನ್ನ ಬದಲಾಯಿಸುತ್ತವೆ.

ಅಂದು ಸ್ವಾಮೀಜಿಯವರು ಬೇರಾವುದೋ ಕೆಲಸದಿಂದ ಹೊರ ಹೋಗಿರುವುದಾಗಿ ತಿಳಿದು ಬಂದಿತು. ಆದ್ದರಿಂದ ಮತ್ತೊಂದು ದಿನ ಬರುವುದೆಂದೂ ರೂಮಿಗೆ ಹಿಂದಿರುಗುವುದೆಂದೂ ತೀರ್ಮಾನಿಸಿದೆ.

ಹೊರಗೆ ಬರುವಾಗ ಗೇಟಿನ ಬಳಿ ಒಬ್ಬ ವ್ಯಕ್ತಿ, ಕಣ್ಣು ಕಾಣದ ಕುರುಡನೊಬ್ಬ ನಿಂತಿದ್ದ. ಆತ ಬಟ್ಟೆಯ ಚೀಲಗಳನ್ನು ಮಾರುತ್ತಿದ್ದ. ನನಗೆ ಆಕರ್ಷಕವೆನಿಸಿತು. ಹತ್ತಿರ ಹೋದೆ. ಆ ರೀತಿಯ ಚೀಲವನ್ನ ನಾನು ಉಪಯೋಗಿಸುತ್ತೇನೆ. ಆದ್ದರಿಂದ ಕೊಳ್ಳುವುದೆಂದು ತೀರ್ಮಾನಿಸಿದೆ.
"ಎಷ್ಟು ರೂಪಾಯಿಗಳು, ಒಂದು ಚೀಲಕ್ಕೆ?"
"ಜಿಪ್ ಇರೋದಕ್ಕೆ ಅರವತ್ತು ರೂಪಾಯಿ, ಜಿಪ್ ಇಲ್ಲದ್ದಕ್ಕೆ ಐವತ್ತು ರೂಪಾಯಿ"
"ಕಡಿಮೇ ಇಲ್ಲವ?"
"ಇಲ್ಲ ಸಾರ್"
"ತಮ್ಮದು ಇದೇ ಉದ್ಯೋಗವ"
"ಹೌದು ಸಾರ್ ನನಗೆ ಕಣ್ಣು ಕಾಣುವುದಿಲ್ಲ. ಹುಟ್ಟು ಕುರುಡು. ನಮ್ಮದೊಂದು ಸಂಘಟನೆಯಿದೆ. ಎಲ್ಲರೂ ವಿಕಲಾಂಗರೆ ಅಲ್ಲಿ. ಕಾಲು ಇಲ್ಲದವರೂ, ಮಾತು ಬಾರದವರು, ಕಿವುಡರೂ ಎಲ್ಲರೂ ಸೇರಿ ಚೀಲ ಹೊಲಿಯುತ್ತಾರೆ, ನಾವು ಕುರುಡರು ಆ ಚೀಲವನ್ನ ಮಾರುತ್ತೇವೆ. ನಮಗೆ ಒಂದು ಚೀಲ ಮಾರಿದರೆ ಹತ್ತು ರೂಪಾಯಿಗಳನ್ನ ಕೊಡುತ್ತಾರೆ. ಅದರಲ್ಲಿ ಜೀವನ ಸಾಗುತ್ತದೆ. "
ಕಣ್ಣು ಕಾಣದವನ ಕಣ್ಣುಗಳಲ್ಲಿ ದಿವ್ಯ ಬೆಳಕೊಂದು ಕಂಡಿತು. ಒಂದು ಚೀಲವನ್ನ ತೆಗೆದುಕೊಂಡು ಬಂದುಬಿಟ್ಟೆ. ಆ ಕುರುಡ ನನಗೆ ದಿವ್ಯ ಬೆಳಕಿನ ಪಥವೊಂದನ್ನ ತೋರಿ ಹೋಗಿದ್ದ. ಅಂದು ನಿರ್ಧರಿಸಿದೆ. ಈ ಬದುಕಿನ ಉದ್ದೇಶ ಹಾಗು ಸಾರ್ಥಕ್ಯ ಇರುವುದು ಬದುಕನ್ನ ಅರಿಯುವುದರಲ್ಲಿ. ಬದುಕನ್ನ ಅರಿಯುವುದು ಸಾದ್ಯವಾಗುವುದು, ಪ್ರಾಮಾಣಿಕವಾಗಿ ಮೌಲ್ಯಯುತವಾಗಿ, ತೀವ್ರ ಜೀವನ ಪ್ರೀತಿಯಿಂದ ಬದುಕುವುದರಿಂದ ಅಂತ ಅನ್ನಿಸಿತು. ಸಾಕ್ಷಿಪ್ರಜ್ಞೆಗೆ ಸಹಮತನಾಗಿ ಜೀವನ ನಡೆಸುವುದೇ ಪ್ರಾಮಾಣಿಕತೆಯೆಂದುಕೊಂಡೆ. ಗಟ್ಟಿ ನಿರ್ದಾರ ಮಾಡಿದ್ದೆ. ತೀವ್ರ ಜೀವನ ಪ್ರೀತಿಯಿಂದ ಬದುಕುವುದರಿಂದ ಮಾತ್ರ ನಾನು ಬದುಕನ್ನ ಅರಿಯಬಲ್ಲೆ. ಇಡೀ ಬದುಕನ್ನ ನನಗೆ ಒಂದೇ ದಿನಕ್ಕೆ ಸೀಮಿತಗೊಳಿಸಿದರೆ ಬದುಕುವಷ್ಟು ತೀವ್ರವಾಗಿ ಪ್ರತಿ ದಿನವನ್ನೂ ಜೀವಿಸಬೇಕೆಂದುಕೊಂಡೆ. ಈಗಲೂ ಸದ್ಯ ಹಾಗೆ ಬದುಕುತ್ತಿದ್ದೇನೆ. ಅಂದು ಆ ಸಂಶೋದನಾ ಸಂಸ್ಥೆಯನ್ನ ಬಿಟ್ಟೆ. ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡೆ. ಸದ್ಯ ಶಿಕ್ಷಕನಾಗಿ ಮಕ್ಕಳಿಗೆ ನನಗೆ ಗೊತ್ತಿರುವುದನ್ನು ಕಲಿಸುತ್ತ, ಅವರಿಂದ ಹಲವನ್ನ ಪಡೆಯುತ್ತ, ಅನಂತ ಸ್ವಾತಂತ್ರ್ಯದೆಡೆಗೆ ಹೆಜ್ಜೆಯಿಡುತ್ತಿದ್ದೇನೆ.  

ಕಥೆ ಸಂಖ್ಯೆ ೧



[ಮೇಲಿನ ಕಥೆಯ ಹೆಸರಿಗೆ ಯಾವುದೇ ನಿಗೂಢ ಅರ್ಥಗಳಾಗಲಿ, ಧ್ವನ್ಯಾರ್ಥಗಳಾಗಲಿ ಇರುವುದಿಲ್ಲ. ಈ ಕಥೆಗೆ ಹೆಸರಿನ ಅವಶ್ಯಕತೆಯಿಲ್ಲ. ಆದರೆ ಮುಂದೆ ಈ ಕಥೆಯನ್ನ ಗುರುತಿಸಬೇಕಾದರೆ ಇರಲಿ ಎಂದು, ಇದಕ್ಕ ಕಥೆ ಸಂಖ್ಯೆ ೧ ಎಂದು ಹೆಸರಿಸಿರುತ್ತೇನೆ]

ಬಸುರೀನ?
(ನಾನು ಅವಳ ಹೊಟ್ಟೆಯ ಕಡೆಗೆ ನೋಡುತ್ತಿದ್ದೆ)
ಇರಲಾರದು, ಇಲ್ಲವ ಇರಬೊಹುದು,
ನನಗೇನಂತೆ?

ಅವಳ ಮುಖದಲ್ಲಿ, ನನ್ನ ಮುಖದಲ್ಲಿ, ಇಬ್ಬರ ಮುಖದಲ್ಲೂ ಯಾವ ಕ್ರಿಯೆಯೂ ಇಲ್ಲದ, ಪರಿಚಿತರ? ಅಪರಿಚಿತರ? ಎಂಬೋ ಪ್ರಶ್ನೆಯೂ ಇಲ್ಲದ,  ನೋಟಗಳ ಮುಖಾಮುಖಿಗೆ ನಾನು ಸಾಕ್ಷಿಯಾದೆ. ಅವಳು ಸಾಕ್ಷಿಯಾದಳ?  

ಸ್ವಲ್ಪ ಹೊತ್ತಾದಮೇಲೆ ಅವಳು ಹೊರಟು ಹೋದಳು.
..............................................................................................
..............................................................................................
..............................................................................................

ಹುಟ್ಟು, ಹಸಿವು, ಎರಡರ  ಕೇಂದ್ರವಾದ ಹೊಟ್ಟೆ ನನ್ನನ್ನ ಸುಮ್ಮನೆ ಆಕರ್ಷಿಸಿರಲಿಲ್ಲವೇನೋ!!

ನಾನೇಕೆ ಅವಳ ಹೊಟ್ಟೆಯೆಡೆಗೆ ಆಕರ್ಷಿತನಾದೆ?
ಸಂಬಂಧಗಳ ಬಲೆ ಹರಡುವಾಗ ಅದರೊಳಗಿದ್ದು, ಅದರ ಹರಡುವಿಕೆಗೆ ಕೇವಲ ಪ್ರೇಕ್ಷಕನಾಗಿ ಇರಬೇಕೆ?.
ಆ ಬಗ್ಗೆ ಚಿಂತಿಸಿದೆ, ತಲ್ಲಣನಾಗಿದ್ದೆ. ಯಾಕೆ ತಲ್ಲಣ ಎಂಬುದರ ಕಾರಣ ತಿಳಿಯಲಿಲ್ಲ.  ಕಾರಣ ತಿಳಿಯಲಿಲ್ಲವಲ್ಲ, ಅದೇ ಅತಿ ದೊಡ್ಡ ಸಮಸ್ಯೆಯಾಯಿತು.
ಏನೂ ಅಲ್ಲದ್ದಕ್ಕೆ ತಲ್ಲಣನಾಗಿದ್ದೀನ? ಏನೂ ಅಲ್ಲದ್ದಕ್ಕೆ ತಲ್ಲಣನಾಗೋದಾದರೂ ಹೇಗೆ? ಹಾಗಾದರೆ ಏನದು,  ಅವಳೆಡೆಗೆ, ಅವಳ ಹೊಟ್ಟೆಯೆಡೆಗೆ ನನ್ನನ್ನ, ನನ್ನ ದೃಷ್ಠಿಯನ್ನ ಕೊಂಡೊಯ್ದದ್ದು.

ಆ ತಲ್ಲಣಕ್ಕೆ ಹೆದರಿದ್ದೆನ?

ಹುಡುಕಿ ಹೊರಟೆ,

ಏನದು ನನಗೂ ಅವಳಿಗೂ ಇದ್ದ ಸಂಬಂಧ? ಅಥವಾ ಈಗ ಇರುವ ಸಂಬಂಧ?
ಯಾವ ಸಂಬಂಧಾನ ಅರೀಬೇಕು ಅಂತ ಹೋಗುತ್ತಿದ್ದೀನಿ ?  ಸಂಬಂಧಗಳನ್ನ ಅರಿಯೋಕ್ಕೆ ಆಗುತ್ತೆ ಅನ್ನೋದು, ಕೇವಲ ನಂಬಿಕೆ ಮಾತ್ರಾನ.?
ಅವಳೊಡನೆ ನನಗಿದ್ದದ್ದು, ನನ್ನ ಪ್ರಜ್ಞೆಯ ವಿಸ್ತಾರವನ್ನ ಮೀರಿ ಬೆಳದು ಬಿಟ್ಟಿದೆ. ಅದು ಅಷ್ಟು ಸಲೀಸಾಗಿರಲಿಲ್ಲ, ಅವಳ ಜೊತೆ ಎಷ್ಟೋ ದಿನಗಳ ಕಾಲ ಸಮ್ಮನೆ ನಡೆದದ್ದು ಆಗಿರಲಿಲ್ಲ.
ಅವಳು ಹೆಣ್ಣು, ನಾನು ಗಂಡು ಇಷ್ಟು ಮಾತ್ರ ಆಗಬೇಕು ಅಂತ ಅಂದುಕೊಂಡದ್ದು.  ನಾನೂ ಅವಳು ಒಂದೇ ಊರಿನಲ್ಲಿ ಸುಮಾರು ವರ್ಷಗಳಿದ್ದೆವು. ಆ ದಿನಗಳಲ್ಲಿ ನಡೆದ ಕೆಲವು ಘಟನೆಗಳು.

ಘಟನೆ ೧:: ಮೊದಲ ಬಾರಿ ನಾನು ಅವಳನ್ನ ನೋಡಿದೆ, ಮಾತಾನಾಡಿಸಿದೆ. ನಾನು ಅವಳ ಜಾತಿ ಯಾವುದು ಅಂತ ತಿಳಿಯಲಿಕ್ಕೆ ಪ್ರಯತ್ನಿಸಿದೆ.

ಘಟನೆ ೨:: ಒಂದು ದಿನ ಮಳೆಯಲ್ಲಿ ಅಳುತ್ತ ಬಂದಾಗ ಸಮಾಧಾನ ಪಡಿಸಿದೆ. ಒಂದು ಲೋಟ ಕಾಫಿ ಕೊಡಿಸಿದೆ. ಜೊತೆಯಲ್ಲಿ  ನಾನೂ ಕಾಫಿ ಕುಡಿದೆ.

ಘಟನೆ ೩::ನಾನು ಒಂದು ದಿನ ಕಾಫೀಗೆ ಕರೆದಾಗ, ಗಂಡುಡುಗರ ಜೊತೆ ಕಾಫೀಗೆ ಬರೋಲ್ಲ ಅಂದಳು.

ಘಟನೆ ೪::ಒಂದು ದಿನ  ನಡೆದು ಹೋಗುತ್ತಿರಬೇಕಾದರೆ, ಕೇಳಿದಳು.
 "ನಾನು ಒಬ್ಬನನ್ನ ಪ್ರೀತಿಸಿದೆ, ಅವನು ಪ್ರೀತಿಸಿದ. ಆಮೇಲೆ ನಾನು ಬೇಡ ಅಂದ.
ಅವನ್ಯಾಕೆ ಬಿಟ್ಟುಹೋದ?"
ನಂಗೆ ಗೊತ್ತಿಲ್ಲ
ಅಂದೆ.

ಘಟನೆ ೫:: "ನಾನು ಸತ್ತು ಹೋಗ್ತೀನ?" ಅಂತ ಕೇಳಿದ್ಲು.
"ಇಲ್ಲ"
ಅಂದೆ
ಅವತ್ತು ರಾತ್ರೀ ಪೂರ ನಾನು ಮಲಗ್ಲಿಲ್ಲ.

ಘಟನೆ ೬:: ಕಡೇ ದಿನ, ಮೊನ್ನೆ ಕಂಡಂತೆ, ಮುಖದಲ್ಲಿ ಯಾರೋ ಅಪರಿಚಿತರೋ, ಪರಿಚಿತರೋ ಎಂಬೋ ಭಾವ ಇಲ್ಲದೇನೆ ನನ್ನ ಜೊತೆಗೆ ಮಾತೂ ಆಡದೆ ಊರು ಬಿಟ್ಟು ಹೊರಟು ಹೋದಳು.

ನಿಜಕ್ಕಾದರೆ ಏನೂ ನಡೆದಿಲ್ಲವೆಂಬಂತೆ ಇದ್ದುಬಿಡಬೊಹುದಿತ್ತು, ನಿಜಕ್ಕೂ ಹೇಳುವುದಾದರೆ ಏನೂ ನಡೆದೂ ಇರಲಿಲ್ಲ. ಹಲವು ದಿನಗಳ ನಂತರ ನಾನು ಅವಳನ್ನ ಇಲ್ಲಿ ಕಂಡಿದ್ದೆ, ಅಷ್ಟೆ. ನಾನು ಅವಳನ್ನ ಪ್ರೀತಿಸಿರಲಿಲ್ಲ, ಅವಳನ್ನ ಮದುವೆಯಾಗಬೇಕು ಎಂದು ಅಂದುಕೊಂಡಿರಲಿಲ್ಲ, ಅವಳನ್ನ  ಬಯಸಿರಲಿಲ್ಲ. ಗೆಳತಿಯಾಗಿದ್ದಳ? ಅದೂ ಇನ್ನೂ ಪ್ರಶ್ನೆಯಾಗೆ ಉಳಿದಿದೆ. ಹೀಗೇ ಏನೂ ಅಲ್ಲದ ಸಂಬಂದಕ್ಕೆ ಏತಕ್ಕಾಗಿ ತಲ್ಲಣ, ಅಂತ ಅನ್ನಿಸೋದಕ್ಕೆ ಶುರು ಆದದ್ದಕ್ಕೆ ನಾನು ಭಯಪಟ್ಟಿದ್ದು.

ಹುಡುಕಿ ಹೊರಟೆ,
ಅವಳನ್ನ ಕಾಣಬೇಕು . ಯಾಕೆ ಅಂತ ಗೊತ್ತಿಲ್ಲ, ಆದರೆ ಅವಳನ್ನ ಕಾಣಬೇಕು, ಅದು ಮುಖ್ಯ ಅಷ್ಟೆ. ಅವಳಲ್ಲೆ  ನಾನ್ಯೇಕೆ ಹೀಗೆ ನಿನ್ನ ಬಸುರಿನ ಬಗ್ಗೆ ಖಿನ್ನನಾದೆ? ಕೇಳಬೇಕು ಅಂತ ಹೊರಟೆ,
ರಾತ್ರಿ ಬಸ್ಸು ಹತ್ತಿ ಬೆಳಗಾದಾಗ ಅವರ ಊರಿನಲ್ಲಿದ್ದೆ, ಒಂಟಿ ಮನೆ, ಸುತ್ತ ಕಾಡು ಬೆಟ್ಟ. ನೋಡಲು ನಿಜಕ್ಕೂ ಸುಂದರವಾದದ್ದು.
ಬಾಗಿಲು ತಟ್ಟಿದಾಗ ತಿಳಿಯಿತು ಮನೇಲಿ ಯಾರೂ ಇಲ್ಲ ಅಂತ.
ಸರಿ ಇನ್ನೇನು ಮಾಡೋದು, ಇಲ್ಲೆ ಯಾರನ್ನಾದರೂ ಮೊದಲು ಕೇಳಬೇಕು, ಅವಳೆಲ್ಲಿಗೆ ಹೋಗಿದಾಳೆ, ಯಾವಾಗ ಬರ್ತಾಳೆ, ಅಂತ ಅಂದು ಕೊಂಡರೆ ಅಲ್ಲೆಲ್ಲೂ ಮನೆಗಳೆ ಇರಲಿಲ್ಲ, ಕಡೆಗೆ ಯಾವುದಾದರು ಹತ್ತಿರದಲ್ಲಿ ಮನೆ ಕಾಣುತ್ತ ಅಂತ ಹೊರಟೆ. ಹತ್ತಿರದಲ್ಲಿ ಮನೆಯಿತ್ತು, ಹೋಗಿ ಕೇಳೋಣ ಅಂತ ಹೊರಟೆ. ಅವರದೂ ಇಂತದ್ದೆ ಒಂಟಿ ಮನೆ, ಹೋದೆ. ಬಾಗಿಲು ತೆರೆದಿತ್ತು. ವಿಚಾರಿಸಿದೆ.
"ನಮಸ್ಕಾರ, ನನ್ನ ಹೆಸರು ಅರವಿಂದ ಅಂತ, ಪ್ರವಳ್ಳಿಕ ಅವರ ಮನೇಲಿ ಯಾರೂ ಇಲ್ಲ, ಅವರನ್ನ ಕಾಣಬೇಕಿತ್ತು, ಅವರು ಯಾವಾಗ ಬರ್ತಾರೆ ಅಂತ ಹೇಳಿದ್ದರೆ, ಮತ್ತೆ ಬರಲಿಕ್ಕೆ ಸರಿಹೋಗುತ್ತೆ"
"ನಮಸ್ತೆ, ಮೊದಲು ಒಳಗೆ ಬನ್ನಿ, ಮತ್ತೆ ಮಾತಾಡುವ"
ಅಂತೇಳಿ ಒಳ ಕರೆದೊಯ್ದರು.
ಮನೆ ವಿಶಾಲವಾಗಿತ್ತು, ಹಲವು ಪುಸ್ತಕಗಳು, ಚಿತ್ರಗಳು, ಮತ್ತೆ ಹಲವು ಕಲಾತ್ಮಕ ವಸ್ತುಗಳಿದ್ದವು. ನನಗಂತೂ ಬಹಳ ಖುಶಿಯಾಗಿತ್ತು.
"ಬನ್ನಿ, ನಾವೂ ಪ್ರವಳ್ಳಿಕನ ಮನೆಯವರೂ ಹತ್ತಿರದ ಬಂಧುಗಳು, ಅವರು ಹೊರಗೆ ದೇವಸ್ಥಾನಕ್ಕೆ ಹೋಗಿದ್ದಾರೆ, ಬರುತ್ತಾರೆ. ನಾಳೆ ಅಥವ ನಾಡಿದ್ದು ಬರುತ್ತಾರೆ. ಕನಿಷ್ಠ ಫೋನ್ ಮಾಡೋಣ ಅಂದು ಕೊಂಡರೆ, ಅವರು ಹೋಗಿರೋ ಸ್ಥಳದಲ್ಲಿ ಸಿಗ್ನಲ್ ಇರೋಲ್ಲ. ಇರಲಿ, ಈಗ ಸದ್ಯ ಸುಧಾರಿಸಿಕೊಳ್ಳಿ. "
"ಬೇಡ, ಹಾಗಾದರೆ ನಾನು ನಾಡಿದ್ದು ಬರ್ತೇನೆ"
"ಎಲ್ಲಿರುತ್ತೀರಿ ನೀವು ಅಲ್ಲಿವರೆಗು"
"ಯಾವ್ದಾದರು ಹೋಟೇಲ್ ಮಾಡೋಣ ಅಂತ ಇದ್ದೀನಿ"
"ಅಯ್ಯೋ ಮಾರಾಯ್ರೆ, ಎಂತದ್ರೀ ನಿಮ್ಮದು? ಇಲ್ಲಿ ಮನೆ ಇಟ್ಟುಕೊಂಡು ಹೊರಗೆ ರೂಮು ಮಾಡುತ್ತೀನಿ ಅಂತೀರಲ್ಲ. ಯಾಕೆ?. ನೋಡಿ, ನೀವು ಪ್ರವಳಿಕ್ಕಳಿಗೆ ಬೇಕಾದವರು, ಹವ್ದೋ, ಹಾಗಾದರೆ ನಮಗೂ ಬೇಕಾದವರೇ ಮತ್ತೆ. ತಾವು ದಯವಿಟ್ಟು ಇಲ್ಲೇ ಇರಬೇಕು. "
ಅಂತ ತುಂಬಾ ಬಲವಂತ ಮಾಡಿದ್ರು. ಅವರ ಒತ್ತಾಯಕ್ಕೆ ಮಣಿದು ಅಲ್ಲೇ ಇರಲು ತೀರ್ಮಾನಿಸಿದೆ.
"ಸರಿ ತಮ್ಮ ಒತ್ತಾಯವನ್ನ ಬೇಡ ಅನ್ನಲಿಕ್ಕೆ ಆಗೋದಿಲ್ಲ, ಆದ್ದರಿಂದ ಇರ್ತೇನೆ. ಆದರೆ ತಾವು ಏನೂ ತೊಂದರೆ ತೆಗೆದುಕೊಳ್ಳಬಾರದು"
"ಕಂಡೀತವಾಗಿ,...
ನನ್ನ ಹೆಸರು ಗೌತಮ್ ಅಂತ, ಈ ತೋಟ ಎಲ್ಲವೂ ನಮ್ಮದೆ. ಈಗ ಇಲ್ಲಿ ಯಾರೂ ಇಲ್ಲ, ಅಪ್ಪ ಅಮ್ಮ ಅಣ್ಣನ ಜೊತೆ US  ಅಲ್ಲಿ ಇದ್ದಾರೆ. ನಾನು Software Proffesional ನಂದೇ ಸ್ವಂತ ಕಂಪೆನಿ ಕೂಡಾ ಇದೆ, ನಾನು IIM ಅಲ್ಲಿ MBA ಸಹ ಮಾಡೀದೀನಿ. ಅಲ್ಲಿ ಆ ಬಿಸಿನೆಸ್ಸು ಎಲ್ಲಾ ಸಾಕು ಎಂದಾಗ ಇಲ್ಲಿಗೆ ಬರ್ತೀನಿ.  ನಂಗೆ ಸಾಹಿತ್ಯ ಇಷ್ಟ, ಬರೀತೀನೀ ಕೂಡ"
"ತುಂಬಾ ಚೆನ್ನಾಗಿದೆ, ನನಗೂ ಸಾಹಿತ್ಯ ಇಷ್ಟ."
"Good"
ಹೀಗೇ ಮಾತಾಡುತ್ತ, ಮನೆ ತೋಟ ಎಲ್ಲಾ ತೋರಿಸ್ತಾ, ನಡೀತಾ ಇದ್ದೆವು.
"ಅರವಿಂದರೆ, ಮನುಷ್ಯಂಗೆ ಸಾಹಿತ್ಯ ಕಲೆ ಎಲ್ಲ ಯಾಕೆ ಬೇಕು? "
"ಕಂಡೀತವಾಗಿ ನನಗೆ ತಿಳಿದಿಲ್ಲ, ಒಂಥರಾ ನಂದು ಹುಡುಕಾಟ, ನಂಗೆ ಯಾವ್ದೂ ಸಿಕ್ಕಿದ ಹಾಗೆ ಕಾಣೋಲ್ಲ"
"ಅದೂ ಸರಿ ಬಿಡಿ"
"ಆದರೆ ನೋಡಿ, ನನಗೆ ಅನ್ನಿಸೋದು, ನಮ್ಮ ಮುಂದೆ ನಡೆಯೋದನ್ನೇ ಮತ್ತೆ ಕಥೆ, ಕಾದಂಬರಿ ಮಾಡಿ ನಮ್ಮೆದುರಿಗೆ ಇಡುತ್ತಾರೆ, ಅಥವ ಪುರಾಣದ ಪಾತ್ರಗಳು, ಹೀಗೆ ನಮ್ಮನ್ನೇ ನಾವು ಮತ್ತೆ ಯಾಕೆ ನೋಡಿಕೋ ಬೇಕು ಅಂತ....? ಅಲ್ಲವ"
"ಹೌದು"
ಅವರು ಮಾತಾಡುತ್ತಿದ್ದರು ನಾನು ಕೇಳುತ್ತಿದ್ದೆ ಅನ್ನುವುದು ಬಿಟ್ಟರೆ ಮತ್ತೇನು ನನಗೆ ಅರ್ಥವಾಗುತ್ತಿರಲ್ಲ. ಒಂದು ಚಿಕ್ಕ ಆಪ್ತ ಸಂಬಂಧದ ಎಳೆಯನ್ನ ಹುಡುಕಿ ಇಲ್ಲಿವರೆಗೂ ಬಂದದ್ದು. ನನ್ನ ಪ್ರಜ್ಞೆಯನ್ನ ಮೀರಿ ಬೆಳೆದಿರಬೊಹುದಾದ ಇದರ ಸೂಕ್ಷ್ಮತೆ ನನಗೆ ಅತಿ ದೊಡ್ಡ ಬೆರಗು. ಕಥೆ ಯಾತಕ್ಕೆ ಎಂಬೋದು? ಕವನ ಯಾತಕ್ಕೆ ಎಂಬೋದು? ನಂಗೆ ಬದುಕು ಯಾತಕ್ಕೆ ಎಂಬೋ ಅಷ್ಟೆ ಸಹಜವಾದ ಪ್ರಶ್ನೆ. ಉತ್ತರ ನನಗಂತೂ ಸಾಮಾನ್ಯವಾಗಿರಲಿಲ್ಲ. ಕಂಡುಕೊಳ್ಳುವು ಕ್ರಿಯೆಯಲ್ಲಿ ನಾನೇ ನಿರತನಾಗಿರುವಾಗ ಇನ್ನೊಬ್ಬರ ಪ್ರಶ್ನೆ ನನ್ನಲ್ಲಿ ಅಷ್ಟು ಸುಲುಭವಾಗಿ ಇಳಿಯುತ್ತಿರಲಿಲ್ಲ.
"ಮತ್ತೆ,ಅರವಿಂದರೆ, ಮದುವೆ ಯಾಗಿದೆಯ  ?"
"ಇನ್ನೂ ಇಲ್ಲ ಸ್ವಾಮಿ, ಹುಡುಗಿ ಸಿಕ್ಕಿಲ್ಲ. ಹುಡುಕ್ಕುತ್ತಾ ಇದ್ದೀನಿ, ತಮ್ಮದು"
"ನಮ್ಮದು ಮದುವೆಯಾಗಿಲ್ಲ, ಆದರೆ ನನಗೆ ಹೆಂಡತಿ ಇದ್ದಾಳೆ, ರಾತ್ರಿ ಬರ್ತಾಳೆ. ತೋರಿಸ್ತೀನಿ. ಮಾತಾಡುವಿರಂತೆ. ನನಗೆ ಮದುವೆ ಎನ್ನೋದರಲ್ಲಿ ನಂಬಿಕೆ ಇಲ್ಲ. ಸಂಬಂಧ ಅನ್ನೋದರಲ್ಲಿ ನಂಬಿಕೆ ಇಲ್ಲ, ಅದಕ್ಕೆ ನಾನು ಅವಳನ್ನ ಮೆಚ್ಚಿದ್ದೀನಿ ಅವಳು ನನ್ನನ್ನ ಮೆಚ್ಚಿದ್ದಾಳೆ ಒಟ್ಟಿಗೆ ಇರುತ್ತೀವಿ. ಒಟ್ಟಿಗೆ ಮಲಗುತ್ತೀವಿ"
"ಯಾಕೆ ಸಂಬಂಧದಲ್ಲಿ ನಂಬಿಕೆ ಇಲ್ಲ?"
"ಗೊತ್ತಿಲ್ಲ"
"ಹೌದು ಅರವಿಂದರೆ, ನೀವು ಹುಡುಕುತ್ತಿದ್ದೀನಿ ಅಂದಿರಲ್ಲ, ಯಾರನ್ನ ಅಂತ ಹುಡುಕುತ್ತೀರ?  ಹಾಗು ಹೇಗೆ ಗುರುತಿಸುತ್ತೀರ, ಇಷ್ಟಕ್ಕೂ ಒಂದು ಸಂಬಂಧಕ್ಕೇಕೆ ಹುಡುಕಾಟ?"
"ಒಬ್ಬಳನ್ನ ಹುಡುಕುತ್ತಿದ್ದೀನಿ, ಯಾವ ಅಪೇಕ್ಷೆಯೂ ಇಲ್ಲದೆ ನಾನೂ ಅವಳೂ ಸೇರಬಲ್ಲವಳಾಗುವಂತವಳು, "
"Bull Shit, ಗಂಡು ಹೆಣ್ಣು ಸೇರೋದೆ ಲೈಂಗಿಕ ಅಪೇಕ್ಷೆಯಿಂದ, ಅಥವಾ ಇನ್ನೂ ಹೀನರಿಗೆ, ಹಣ ಅಂತಸ್ಥಿನ ವ್ಯವಹಾರ ಅಷ್ಟೆ. ಮದುವೆ ಅನ್ನೋದು ಕಾನೂನು ಬದ್ದ ಲೈಂಗಿಕ ವ್ಯಾಪಾರ ಅಷ್ಟೆ"
"ನನಗಂತೂ ಹಾಗೆ ಅನ್ನಿಸೋಲ್ಲ,  ನೀವು ಹೇಳುವ ಪ್ರಕಾರ ಹೆಚ್ಚಿರಬೊಹುದು, ಆದರೆ ಎಲ್ಲಾ ಆಕರ್ಷಣೆಗಳನ್ನ ದಿಕ್ಕರಿಸಿ ಸೆಳೆಯಲ್ಪಡುವುದೂ ಉಂಟು.  ಬೆತ್ತಲೆಯಾಗಿ ಇಬ್ಬರೂ ನಿಂತರೂ ದೇಹವನ್ನ ಮೀರಿ ಮಾತನಾಡಬಲ್ಲೆವಾದರೆ ನಾನು, ಅವಳು ಸೇರಿದಂತೆಯೇ ಸರಿ, ಹುಡುಕಾಟ ಅಂದರೆ ಅದೇ ನನಗೆ"
"ಹಾಳು, ಬಿಡಿ ನಿಮ್ಮದು ನಿಮಗೆ, ರಾತ್ರಿ ನನ್ನವಳು ಬರುತ್ತಾಳೆ ತೋರಿಸ್ತೀನಿ, ಮಾತನಾಡಿ"
"ಕಂಡಿತ"
ಅವರು ಹೇಳಿದ್ದರಲ್ಲು ಸುಳ್ಳಿರಲಿಲ್ಲ, ಆದರೆ ನಾನು ಹೇಳಿದ್ದು ಸುಳ್ಳಲ್ಲ ಎಂಬೋ ನಂಬಿಕೆ ನನ್ನಲ್ಲಿತ್ತು. ದೈಹಿಕ ವಾಂಛೆಯನ್ನ ಮೀರಿ ಅವಳನ್ನ ಕಾಣುವುದು, ಹುಡುಕುವುದು, ಪಡೆಯುವುದು, ಇದೇ ಸದ್ಯ ಜೀವಿತೋದ್ದೇಶವೇಕಾಗಬಾರದು? ಈಗ ನಾನು ಪ್ರವಳ್ಳಿಕಳನ್ನ ಕಾಣಲು ಬಂದದ್ದು, ಕೇವಲ ನಾನು ಅವಳ ಹೊಟ್ಟೆಯನ್ನ ಯಾಕೆ ಕಾಣಲು ತೊಡಗಿದೆ ಎಂಬೋದು ಮಾತ್ರವಾಗಿರಲಿಲ್ಲ, ನನ್ನ ಹಲವು ಪ್ರಶ್ನೆಗಳಿಗೆ ಅವಳು ಉತ್ತರವಾಗ ಬಲ್ಲವಳಾಗಿದ್ದಳು. ನನ್ನ ದ್ವಂದ್ವಗಳಿಗೆ ಕಂಡಿತವಾಗಿಯು ಉತ್ತರವಾಗ ಬಲ್ಲವಳಾಗಿದ್ದಳು.
ಆಲೋಚಿಸುತ್ತ ಮಲಗಿಬಿಟ್ಟೆ, ಗೌತಮ್ ಹೇಳಿದ್ದು ನೆನಪೇ ಇರಲಿಲ್ಲ.

ಬೆಳಗ್ಗೆ ಬಿಸಿ ಬಿಸಿ ಕಾಫಿಯೊಂದಿಗೆ ಬಂದ ಗೌತಮ್ ರು
"ಏನ್ರೀ ಅರವಿಂದರೆ ಹೇಗಿದೆ ನನ್ನ ಆಯ್ಕೆ, ಹೇಗಿದ್ದಾಳೆ ನಮ್ಮ ಹುಡುಗಿ, ನೋಡಿ ನೆನ್ನೆ ಎಂತಾ ತಪ್ಪಾಗಿ ಹೋಗಿತ್ತು, ನಾನು ನಿಮಗೆ ಅವಳ ಹೆಸರನ್ನೇ ಹೇಳಿರಲಿಲ್ಲ, ನೀವು ಅವಳನ್ನೇ ನಿಮ್ಮ ಹೆಸರೇನು ಅಂತ ಕೇಳಿ ಬಿಡೋದೆ, ಅವ್ಳು ನೀವು ಹೋದ ಮೇಲೆ ಸುಮ್ಮನೆ ನನ್ನ ಬೈಯ್ಯೋದಕ್ಕೆ ಆರಂಬಿಸಿದಳು, ನನ್ನೆಸರನ್ನೂ ಹೇಳಿಲ್ಲವೆ ಅಂತ, ಹೋಗಲಿ ಬಿಡಿ ಈಗ ಏಳಿ."
ನಾನು ಒಂದು ರೀತಿಯ ಅಯೋಮಯಕ್ಕೆ ತಲುಪಿದೆ, ನಾನ್ಯಾವಾಗ ಅವರನ್ನ ಬೇಟಿಯಾದೆ,
"ಯಾರನ್ನ? ಏನು ಹೆಸರು?"
"ಅಯ್ಯೋ ನಿಮ್ಮ ಮರುವಿಗೆ, ಅದೆ ನಮ್ಮವಳು, ಪ್ರತೀಕ್ಷ,
ನೋಡಿದ್ರ, ಅವಳು ರಾತ್ರಿ ಅದೇ ಪ್ರಶ್ನೆ ಕೇಳಿದ್ಲು? ಯಾಕೆ ನಾವು ಕಥೆ ಎಂಬೋ ಕಲ್ಪನೆಯ ಪ್ರಪಂಚಕ್ಕೆ ಹೋಗಬೇಕು ಅಂತ ಭಾವಿಸ್ತೀವಿ. ನಮ್ಮ ಸುತ್ತ ಕಾಣೋ ವಾಸ್ತವ ಪ್ರಪಂಚದಿಂದ ಹೊರಗೋಗಿ, ಅದ್ಯಾಕೆ ಕಲ್ಪಿಸಿಕೊಳ್ತೀವಿ ಅಂತ,"
ಯಾವ ಕಲ್ಪನೆ, ಯಾವ ವಾಸ್ತವ, ಯಾವ ಕಥೆ, ಈ ಆಸಾಮಿ ಏನನ್ನ ಮಾತಾಡ್ತಾ ಇದ್ದಾನೆ, ಒಂದೂ ದೇವರಾಣೇಗೂ ಅರ್ಥ ಆಗಲಿಲ್ಲ. ಯಾಕೆ ಅಂದರೆ ರಾತ್ರಿ ಮಲಗಿದವನು ಎದ್ದದ್ದು ಈಗ ಮಾತ್ರ, ಇಂತ ಹೊತ್ತಲ್ಲಿ, ಅದೇನು ಹೇಳ್ತಾ ಇದ್ದಾನೆ ಅಂತ ನಿಜಕ್ಕೂ ಅಯೋಮಯಕ್ಕೆ ಬಿದ್ದೆ.
ಯಾರೋ ಕರೆದರು ಅಂತ ಗೌತಮ ಹೊರಗೆ ಹೋದ.
ಸ್ಪಷ್ಟವಾಗ ತೊಡಗಿತು. ಎಲ್ಲೋ ಏನೋ ತಪ್ಪಿದೆ. ಭ್ರಮೆ, ಕಲ್ಪನೆ, ಹಾಗು ವಾಸ್ತವ ಇವುಗಳ ನಡುವಿನ ಸೂಕ್ಷ್ಮ ತೆರೆಯು ವಾಸ್ತವವೋ, ಕಲ್ಪನೆಯೋ, ಭ್ರಮೆಯೋ ಎಂಬ ಗೊಂದಲಕ್ಕೆ ಬಿದ್ದೆ. ಕೆಲವು ನಿಗೂಢವಾಗಿಯೆ ಇದ್ದು ಬಿಡುತ್ತದೋ ಏನೋ ಅನ್ನಿಸುವಷ್ಟು. ನನಗೆ ಪ್ರವಳ್ಳಿಕ ಎಂದು ಬರುತ್ತಾಳೋ ಎಂದು ಕಾಯುವುದರಲ್ಲಿ, ಇಲ್ಲಿ ನಡೆದದ್ದಕ್ಕೆ ಹೆಚ್ಚು ಗಮನ ಕೊಡಲಿಲ್ಲ, ನಾಳೆ ಬರುತ್ತಾಳಲ್ಲ ಆಗ ಇಲ್ಲಿಂದ ಹೊರಟು ಬಿಟ್ಟರೆ ಆಯಿತು ಎಂದು ಸುಮ್ಮನಾದದ್ದು.
ಸಂಜೆಯಾಯಿತು.
ರಾತ್ರಿ ತುಂಬಾ ಹೊತ್ತಿನ ನಂತರ ಗೌತಮ ಮನೆಗೆ ಬಂದ. ಹೆಚ್ಚು ಹೊತ್ತಾದದ್ದರಿಂದ, ನನಗೆ ನಮಸ್ಕರಿಸಿ ಸೀದ ಆತನ ರೂಮಿಗೆ ಹೊರಟು ಬಿಟ್ಟ.
"ಅರವಿಂದರೆ, ನಮ್ಮವಳು ಕರೆಯುತ್ತಿದ್ದಾಳೆ,ನಾಳೆ ಬೆಳಗ್ಗೆ ಸಿಗುತ್ತೀನಿ."
ಮೊದಲ ಬಾರಿಗೆ ನನಗೆ ಕುತೂಹಲ ತಡೆಯಲಾಗಲಿಲ್ಲ. ಸತ್ಯವನ್ನ ಕಾಣಬೇಕು ಅಂತ ಹೋಗಬೇಕಾಗಿ ಹೋದರೂ, ಅವರ ವೈಯುಕ್ತಿಕ ಕೋಣೆಯ ಕಿಟಕಿಗಳನ್ನ ತೆರೆದು ನೋಡುವುದು ಎಷ್ಟು ಸರಿ ಎಂದು ಅನ್ನಿಸದೆ ಇರಲಿಲ್ಲ. ಅಲ್ಲಿ ಹೆಣ್ಣು ಇದ್ದಿದ್ದೇ ಆದರೆ, ಗಂಡು ಹೆಣ್ಣಿನ ಮಿಲನದ ಸಮಯದಲ್ಲಿ ನನ್ನ ಉಪಸ್ಥಿತಿ ಎಷ್ಟು ಅಸಮಂಜಸ ಕ್ರಿಯೆ. ಆದರೆ ಬೆಳಗ್ಗೆ ಆತ ಹೇಳಿದ್ದುದರಲ್ಲಿ ಏನೋ ತಪ್ಪಿದೆ ಅಂತ ಅನ್ನಿಸಿದ್ದಂತು ಸತ್ಯವಲ್ಲವೆ,...... ಹೀಗೆ ಸ್ವಲ್ಪ ಹೊತ್ತು ಚಿಂತಿಸಿ ನೋಡೇ ಬಿಡುವ, ಆಕೆ ಇದ್ದರೆ........ ಇಲ್ಲದೇ ಹೋದರೆ...... ಸತ್ಯ....... ಸಂಸ್ಕಾರ......
ಕಡೆಗೆ,
ಆತನ ರೂಮಿಗೋಗಿ ಕಿಟಕಿ ತೆರೆದು ನೋಡುತ್ತೇನೆ, ಆಶ್ಚರ್ಯ, ಆತ ಒಬ್ಬನೇ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದಾನೆ. ಆಕೆ ಇರಲಿಲ್ಲ.
ಅಂದರೆ?
ಅಂದರೆ?
.............................?


"ನೂತನ, ನೂತನ....."
ಶಬ್ದ ಕೇಳಿ ಗಾಬರಿಗೊಂಡು ಎದ್ದೆ,
ಗೌತಮ್ ಎಲ್ಲಾ ಕಡೆ ನೂತನ ನೂತನ ಅಂತ ಕೂಗುತ್ತಿದ್ದ, ಕಡೆಗೆ ನನ್ನ ರೂಮಿಗೆ ಬಂದವನೆ,
"ಹೇ ಏನೋ ಮಾಡಿದೆ ನನ್ನ ಮಗನ್ನ?"
"ನಾನಾ...? ಮಗಾನಾ....? "
"ಹೌದು, ರಾತ್ರಿ ನೀನು ನನ್ನ ರೂಮಿಗೆ ಬಂದದ್ದು ನನಗೆ ಗೊತ್ತಿದೆ. ರಾತ್ರಿ ನಾನು ನನ್ನ ಮಗನ್ನ ಕೆಳ್ಗೆ ಮಲಗಿಸಿದ್ದೆ, ಏನೋ ಮಾಡಿದೆ ನನ್ನ ಮಗನ್ನ? ಹೇಳೋ, ರಾತ್ರಿ ಮಲಗಿರ್ಬೇಕಾದ್ರೆ ಬಂದಿದ್ದೆಯಲ್ಲ, ಹೇಸಿಗೆ ಮನುಷ್ಯ ನೀನೂ,
ನೊಡು, ಹೇಳು, ಎಲ್ಲಿ ನನ್ನ ಮಗ? ಇಲ್ಲವೋ ನೋಡು,
ಏನು ಮಾಡಿದ್ಯೋ ನನ್ನ ಮಗಂಗೆ? ಹೇಳೋ...
ನೂತನ ನೂತನ....?"
ಚಿತ್ರ ವಿಚಿತ್ರದ ಈ ಪ್ರಪಂಚದಲ್ಲಿ ಗಾಬರಿಯೆದ್ದು ಹೋದೆ, ಮೊದಲು ಇದನ್ನು ತಪ್ಪಿಸಿಕೊಂಡರೆ ಸಾಕು ಅಂತ ಅನ್ನಿಸ್ತು.
"ಎಲ್ಲೋ ನನ್ನ ಮಗ?"
ಅಂತ ಅಟ್ಟಿಸಿಕೊಂಡು ಬರಲಿಕ್ಕೆ ಆರಂಬಿಸಿದ.
ಪ್ರವಳ್ಳಿಕ ಮರೆತಿದ್ದಳು. ಈಗ ಸದ್ಯ ತಪ್ಪಿಸಿಕೊಂಡರೆ ಸಾಕಿತ್ತು. ಗೌತಮನ ಕೈಯಲ್ಲಿ ಮಚ್ಚು ಬೇರೇ ಇತ್ತು, ಸಾವು ತೀರ ಸನಿಹದಲ್ಲಿ, ಆ ಕ್ಷಣದಲ್ಲಿ, ನನ್ನೆದುರಿಗೆ ಪ್ರತ್ಯಕ್ಷವಾಗಿತ್ತು. ಎಲ್ಲಿ ಹೋಗುತ್ತಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬೋ ಯಾವುದರ ಪರಿವೆಯೂ ಇಲ್ಲದೆ ಓಟ ಕಿತ್ತೆ. ಮೊದಲ ಬಾರಿಗೆ, ನಿಜಕ್ಕೂ ತುಂಬಾ ಭಯದಲ್ಲಿದ್ದೆ. ಆ ಭಯವೇ ನನ್ನ ಆ ಓಟಕ್ಕೆ ಹತ್ತಿಸಿತ್ತು. ನಾನು ಓಡಿದಷ್ಟು ಅವನು ಹಿಂದೆ ಹಿಂದೆ ಬರುತ್ತಲೇ ಇದ್ದ. ಓಡಿದೆ.
ಹೊಟ್ಟೆಯನ್ನ ಕಂಡು ಹುಟ್ಟು ಹಾಗು ಹಸಿವನ್ನ ಹುಡುಕಿ ಬಂದವನಿಗೆ ಸಾವು ಇಷ್ಟು ಸನಿಹದಲ್ಲಿ ಇರುತ್ತೆ ಅಂತ ಗೊತ್ತಿರಲಿಲ್ಲ. ಆತನಿಗೆ ಹೇಳುವುದಾದರೂ ಹೇಗೆ? ಕೇಳುವ ತಾಳ್ಮೆ ಕಂಡೀತವಾಗಿಯೂ ಆತನಿಗಿಲ್ಲ. ನನ್ನ ಜೀವನದಲ್ಲಿ ಎಂದೂ ಓಡಿರಲಿಲ್ಲ, ಅಷ್ಟು ಜೋರಾಗಿ ಓಡುತ್ತಿದ್ದೆ. ಇಲ್ಲದ ಮಗನನ್ನ ಹುಡುಕುತ್ತಿರುವವನ ಕೈಗೆ ನಾನು ಸಿಕ್ಕು ಸಾಯುವುದು ನನಗೆ ಬೇಕಿರಲಿಲ್ಲ. ಸಾವಿಗೂ ಘನತೆಯಿದೆಯೆಂದು ನಂಬಿದವನು ನಾನು. ಬದುಕು ನನಗೆ ಅದ್ಭುತ, ಬದುಕಬೇಕು ಅದೊಂದೇ ನನ್ನಲ್ಲಿ ಇದ್ದದ್ದು, ಓಡುತ್ತಿದ್ದದು ಅದಕ್ಕಾಗಿಯೆ.
ಕಡೆಗೆ ಓಡಲಿಕ್ಕೆ ಆಗಲಿಲ್ಲ. ಓಡುತ್ತಾ ಇದ್ದರೆ ಓಡುತ್ತಲೇ ಇರಬೇಕು ಎಂದನಿಸಿತು, ದೈರ್ಯ ಮಾಡಿದೆ, ಎರಡೆ ಆಯ್ಕೆ, ಒಂದೋ ಸಾವು, ಇಲ್ಲವ ಬದುಕು, ನಿಚ್ಚಳವಾಗಿ ನನ್ನೆದುರಿಗೆ ನಿಂತಿವೆ. ಎಂದಿಗೂ ನಾನು ಈ ಆಯ್ಕೆಯನ್ನ ಬಯಸಿದವನಲ್ಲ. ಆದರೆ ಬದುಕು ನನ್ನನ್ನ ಕೇಳಿ ಆಯ್ಕೆ ನೀಡೋದಿಲ್ಲ ಎಂಬೋದು ಮೊದಲಬಾರಿಗೆ ಕಂಡಿತು.
ಅವನು ಬಂದದ್ದೇ ತೆಗೆದು ನನಗೆ ಬಾರಿಸಿದ, ಬಿದ್ದೆ, ಮತ್ತೆ ಎದ್ದೆ, ಕೈಯಲ್ಲಿ ನನಗೂ ಏನೋ ಸಿಕ್ಕಿತು,
"ಎಲ್ಲೋ ನನ್ನ ಮಗ? ಪಾಪಿ, ಕೊಡೋ ನನ್ನ ಮಗನ್ನ"
"ನಿನ್ನ ಮಗ ಇಲ್ಲ ಕಣೋ"
"ಬೇವರ್ಸಿ, ಎಲ್ಲಿ ನನ್ನ ಮಗ"
ಆಗ ನಿಶ್ಚಯಿಸಿದೆ, ನನ್ನಲ್ಲಿದ್ದ ಬಲವನ್ನೆಲ್ಲ ಜೋಡಿಸಿ ಸಿಕ್ಕಿದ ಕಟ್ಟಿಗೆ ತೆಗೆದುಕೊಂಡು ಒಂದು ಏಟು ಬಾರಿಸಿದೆ.
ಕಾಡಿನ ಮದ್ಯಕ್ಕೆ ನಾವು ಬಂದಿದ್ದೆವು.
ಇಳಿಜಾರಿತ್ತು,
ಅದೇ ಸಮಯ,
ಹೊಡೆದೆ, ಉರುಳಿಕೊಂಡು ಬಿದ್ದುಬಿಟ್ಟ.
ಭಯವಾಯಿತು, ಪಾಪ ಅನ್ನಿಸಿತು.
ಕೆಳಗೆ ನೋಡಿದೆ, ಬದುಕಿದ್ದ. ಎದ್ದು ನಿಂತಿದ್ದ.
ಬದುಕಿದೆನ ಬಡ ಜೀವವೆ ಎಂದೇಳಿ, ಓಡಿ ಬಿಟ್ಟೆ.
ಹೇಗೋ ಅಲ್ಲಿಂದ ತಪ್ಪಿಸಿಕೊಂಡು, ಇನ್ನು ಈ ಸಹವಾಸವೇ ಬೇಡ ಅನ್ನಿಸಿ ಹೊರಡಲು ಸಿದ್ದನಾಗಿ, ಮರಳಿ ವಾಪಸ್ಸು ಹೋಗುವ ಬಸ್ಸು ಹತ್ತಿದ್ದೆ. ಪ್ರವಳ್ಳಿಕಳ ನೆನಪೂ ಸಹ ಮಾಸಿ ಹೋಗುತ್ತಿತ್ತು. ಸಾವಿಗೆ ಬಹಳ ಶಕ್ತಿಯಿದೆ. ಬಸ್ಸಿನಲ್ಲಿ ಕೂತವನೆ ಟಿಕೇಟಿನ ಹಿಂದೆ ಹೀಗೆ ಬರೆದೆ
"ರಾತ್ರಿ ಕನಸಲ್ಲಿ ಸುಂದ್ರಿ ಜೊತೆ
ಸಂಭೋಗ ಮಾಡಿ
ಹಗಲಲ್ಲಿ ಮಗನನ್ನ ಹುಡುಕಿದ
ಮನುಷ್ಯ ಅಂತ"

ಕತೆ ಮುಗಿಯುವುದೇ ಇಲ್ಲವೇನೋ...
ಅಷ್ಟೊತ್ತಿಗೆ ಫೋನ್ ರಿಂಗಾಯಿತು.
Kappe calling, Kappe calling ಅಂತಿತ್ತು. ನಾನು ಕರೆ ಸ್ವೀಕರಿಸುವಷ್ಟರಲ್ಲಿ ಕಟ್ ಆಯಿತು.
ಪಕ್ಕದ ಸೀಟಿನಲ್ಲಿ ಕೂತಿದ್ದ ಸಹ ಪ್ರಯಣಿಕನಿಗೆ ಆ kappe calling ಯಾಕೋ ಕುತುಹಲವಾಯಿತೋ ಏನೋ,
"ಸಾರ್ ಅದೇನ್ ಸಾರ್ kappe calling ಅಂತ ಬರ್ತಿದೆ"
"ಹ.... ಅದು ನನ್ನ ಗೆಳತಿಯ ಅಡ್ಡಹೆಸರು,"
"ಅವಳ ನಿಜ ಹೆಸರೇನು ಸಾರ್"
"ಇಂದ್ರಾಣಿ ಅಂತ"
"ಅದೇನ್ ಸರ್ ಅಷ್ಟು ಚಂದ ಹೆಸರಿದೆ ಅದು ಬಿಟ್ಟು ಪಾಪ ಕಪ್ಪೆ ಅಂತ ಕರೀತೀರಲ್ಲ ಸಾರ್,
ಸಾರ್ ನಿಮಗೆ ಗೊತ್ತ, ಇಂದ್ರಾಣಿ ಅಂದ್ರೆ ಇಂದ್ರನ ಹೆಂಡತಿ. ಇಡೀ ಜಗತ್ತನ್ನ ನಿಯಂತ್ರಿಸೋ ಇಂದ್ರನ ಹೆಂಡತಿ"
"ಹ ಹ ಗೊತ್ತು. ಆದರೆ ನಿಮಗೆ ಗೊತ್ತೋ ಇಲ್ಲವೋ, ಇಂದ್ರ ಅನ್ನೋದು ವ್ಯಕ್ತಿಯಲ್ಲ ಅದು ಪದವಿ, ಇಂದ್ರನ ಪದವಿಗಿ ಯಾರೇ ಬಂದರೂ ಇಂದ್ರಾಣಿ, ಅದೇ ಶಚೀದೇವಿ ಅವರಿಗೆಲ್ಲರಿಗೂ ಹೆಂಡತಿಯಾಗಿರುತ್ತಾಳೆ"
"ಹೌದು, ಕಪ್ಪೆ ಅಂತ ಯಾಕೆ ಸಾರ್"
"ಅದಾ.... ಹೇಳ್ತೀನಿ ಕೇಳಿ, ಅವಳಿಗೆ ಚಿಕ್ಕ ವಯಸಲ್ಲಿ ಕಪ್ಪೆಗಳು ಅಂದರೆ ಇಷ್ಟವಂತೆ, ಈಗಲು ಕಪ್ಪೆಗಳನ್ನ ಅವಳು ಇಷ್ಟ ಪಡ್ತಾಳೆ. ಆದ್ರೆ ಆಗ ಅವ್ಳು ಒಂದು ಕಪ್ಪ ಸಾಕಿದ್ಲಂತೆ, ಆ ಕಪ್ಪೆ ಅವಳು ಹೇಳಿದ ರೀತಿ ಕೇಳುತ್ತಿತ್ತಂತೆ , ಆದರೆ ಒಂದು ದಿನ ಒಂದು ಕೇರೆ ಹಾವು ಅವಳು ಸಾಕಿದ ಕಪ್ಪೆಯನ್ನ ಹಿಡಿದು ಬಿಟ್ಟಿತಂತೆ. ಆ ಹಾವು ಆ ಕಪ್ಪಯನ್ನ ತಿನ್ನೋದನ್ನ ನೋಡಿ ಅತ್ತು ಅತ್ತು ಹಲವು ದಿನ ಊಟ ಕೂಡ ಮಾಡಿರಲಿಲ್ಲವಂತೆ , ನಿಮಗೆ ಗೊತ್ತ ಅವತ್ತಿನಿಂದ ಇವಳು ಕೇರೆ ಹಾವು ಕಂಡರೆ ಕಲ್ಲು ಹೊಡೆದು ಸಾಯಿಸ್ತಾಳೆ, ಮತ್ತೆ ಅದಾದಮೇಲೆ ಕಪ್ಪೆಗಳನ್ನ ಸಾಕಿಲ್ಲ. ಆದರೂ, ಈಗಲೂ ಅವಳಿಗೆ ಕಪ್ಪೆಗಳನ್ನ ಕಂಡರೆ ಬಹಳ ಪ್ರೀತಿ, ಎಷ್ಟೋ ಬಾರಿ ಕಪ್ಪೆಗಳೊಡನೆ ಮಾತಾಡುತ್ತಿರುತ್ತಾಳೆ ಕೂಡ. ಅವಳ ಆ ಕಪ್ಪೆ ಪ್ರೀತಿಗೆ ಅವಳಿಗೆ ಕಪ್ಪೆ ಅಂತ ಕರೆಯೋದು"
"ಚೆನ್ನಾಗಿದೆ ಸಾರ್"


ಕಲ್ಲಲಿ ಕಂಡ ಚೈತನ್ಯ


ಮೊದಲಿಗೆ ನಾನು ಫೋಟೋಗ್ರಾಫಿಯನ್ನ ಇಷ್ಟ ಪಟ್ಟವನೇ ಅಲ್ಲ. ಅದಕ್ಕೆ ಕಾರಣವೂ ಇತ್ತು. ಕಣ್ಣೆದುರಿಗೆ ಕಾಣುತ್ತಿರುವುದನ್ನ ನೇರವಾಗಿ ಕಾಣಬೇಕು ಹಾಗು ಅನುಭವಿಸಬೇಕು ಎಂದೇ ಭಾವಿಸಿದ್ದೆ. ಆದ್ದರಿಂದ ಕ್ಯಾಮರ ಎಂಬೋದು ಎದುರುಗಿನ ವಾಸ್ತವವನ್ನ, ಸೌಂದರ್ಯವನ್ನ ಕಾಣಲು ಅಡ್ಡಿ ಎಂದು ನಂಬಿದ್ದೆ. ನಂತರ ಸಾಹಿತ್ಯ ಹಾಗು ನಾಟಕ, ಒಟ್ಟಾಗಿ ಕಲೆಯ ತಾತ್ವಿಕತೆಯಲ್ಲಿ, ಒಟ್ಟೂ ಕಲೆಯ ಪ್ರಸ್ಥುತತೆ, ಕಲೆಯು ನಮಗೇಕೆ ಎಂಬೋ ಪ್ರಶ್ನೆಯಲ್ಲಿದ್ದಾಗ ನನಗೆ ಒಂದು ಸಂದೇಹ ಶುರುವಾಯಿತು. ಎಲ್ಲಾ ಕಲೆಗಳು ನಮ್ಮದುರಿಗೆ ನಡೆದದ್ದನ್ನು, ಅಥವ ನಡೆದು ಹೋದದ್ದನ್ನು, ಮತ್ತೆ ನಮ್ಮೆದುರಿಗೆ ಇಡಲು ಕಾರಣವೇನು ಎಂಬೋದು.  ಸಾಹಿತ್ಯ, ಮುಖ್ಯವಾಗಿ ಕಾದಂಬರಿ ಅದು ಆಗಲೇ ನಡೆದು ಹೋದ ಅಥವ ನಮ್ಮೆದುರಿಗೆ ನಡೆಯುತ್ತಿರುವುದನ್ನ ಮತ್ತೆ ನಮ್ಮ ಮುಂದೆ ಇಡುತ್ತದೆ. ಇದೇ ರೀತಿ ನಾಟಕ ಕೂಡ ಅಲ್ಲವೆ ಅಂದೆನಿಸಿತು. ಅಂದರೆ ನನ್ನ ಗ್ರಹಿಕೆಗೆ ಕಲೆ ಸಾಹಿತ್ಯ ಎರೆಡೂ ನಡೆದದ್ದನ್ನ, ನಡೆಯುತ್ತಿರುವುದನ್ನ ಮತ್ತೆ ನಮ್ಮ ಎದುರಿಗೆ ಇಡುತ್ತವೆ . ಹೀಗಾಗಿ ಕಲೆ ಹಾಗು ಸಾಹಿತ್ಯ ಎರೆಡೂ ನಮಗೆ ನೀಡೋದು ಬದುಕಿನ ಫೋಟೋವನ್ನಲ್ಲವೆ ಎಂದೆನಿಸಿತು. ಆಗ ನೇರವಾಗಿ  ಕ್ಯಾಮರಾದಲ್ಲಿ ಯಾಕೆ ಕಾಣಬಾರದು, ಹಾಗೆ ಕ್ಯಾಮರಾ ಕಣ್ಣಿಂದ ಜಗತ್ತನ್ನ ಕಾಣೋದು ಕಲೆಯ, ಸಾಹಿತ್ಯದ ಬಗೆಗಿನ ಒಟ್ಟಾಗಿ, ಬದುಕಿನ ಬಗೆಗಿನ ಒಳನೋಟವನ್ನ ನೀಡಬಹುದಲ್ಲವೆ ಎಂದು ಕ್ಯಾಮರ ತೆಗೆದುಕೊಂಡು ಹೊರಟೆ.

ನಿತ್ಯವೂ ,ನಿರಂತರವೂ ಬದಲಾಗುತ್ತಿರುವ ಪ್ರಕೃತಿಯನ್ನ ಅದೇಕೋ ಕ್ಯಾಮರಾದಲ್ಲಿ ನನಗೆ ಸೆರೆಹಿಡಿಯಲಾಗಲಿಲ್ಲ. ಪ್ರಕೃತಿಯ ಮುಂದೆ ನಿಂತಾಗ ನನಗೆ ಫೋಟೋ ತೆಗೆಯಲು ಅಷ್ಟಾಗಿ ಆಗುತ್ತಿರಲಿಲ್ಲ. ನೇರ ಕಣ್ಗಳಿಂದಲೆ ನಾನು ಕಾಣಲು ಬಯಸುತ್ತಿದ್ದೆ. ಹಾಗಾದಾಗ ಐತಿಹಾಸಿಕ ಸ್ಮಾರಕಗಳು ನನ್ನನ್ನು ಆಕರ್ಷಿಸಿದವು, ಎಂದೋ ನಡೆದುಹೋದ ಎನ್ನಲಾದ, ಬಿದ್ದು ಹೋಗಿರುವ ಕೇವಲ ಕಲ್ಲುಗಳಲ್ಲಿ ಜೀವಂತ ನಾದ ಹೊಮ್ಮುತ್ತಿತ್ತು. ಆದ್ದರಿಂದ ಕ್ಯಾಮರ ತೆಗೆದುಕೊಂಡು ಹಂಪಿ, ಕಮಲಾಪುರಕ್ಕೆ ಹೊರಟೆ ಅಲ್ಲಿ ನಾಲ್ಕು ದಿನಗಳ ಕಾಲ ಕಳೆದು, ದೂರದ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಲೇಪಾಕ್ಷಿ ಎಂಬೋ ಊರಿನಲ್ಲಿ ಪೂರ್ಣವಾಗದ ಪುರಾತನ ದೇವಾಲಯವಿದೆಯೆಂದು ತಿಳಿದು ಅಲ್ಲಿಗೆ ಹೋಗಿ ಕೆಲವು ಫೋಟೋಗಳನ್ನ ತೆಗೆದಿದ್ದೇನೆ.

ಫೋಟೋ ತೆಗೆವಾಗ, ಹಾಗು ತೆಗೆದ ನಂತರದ ಅನುಭೂತಿ ಅನನ್ಯ. ತೆಗೆದವನಿಗೆ ಮಾತ್ರ ಗೊತ್ತು. ನನಗೆ ಗೊತ್ತಾಯಿತು. ಅದರಿಂದ ಒಂದು ಸಾಹಿತ್ಯ ಕೃತಿ ಎಂದರೇನು, ನಾಟಕ ಕಲೆ ಎಂದರೇನು ಹಾಗು ನಾಮಗೇಕೆ ನಮ್ಮ ಬಿಂಬವನ್ನ ಕಾಣಲು ಇಚ್ಚಿಸುತ್ತೇವೆ, ಎಂಬ ಎಷ್ಟೋ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿದವು.
ಇನ್ನೂ ಬರೆಯುತ್ತಾ ಹೋದರೆ ಪದಗಳೇ ಆಗುತ್ತದೆ, ಆದ್ದರಿಂದ ಕೆಳಗೆ ಹಲವು ಫೋಟೋಗಳಾನ್ನ ನೀಡಿದ್ದೇನೆ. ಇದು ಫೋಟೋಗ್ರಫಿಯಲ್ಲಿ ನನ್ನ ಮೊದಲ ಪ್ರಯತ್ನ.
[ಇವು ಐತಿಹಾಸಿಕ ಛಾಯಾಚಿತ್ರಗಳಾಗಿರುವುದರಿಂದ ಹಾಗು ಹಂಪಿಯ ವಿಜವನಗರ ಸಾಮ್ರಾಜ್ಯದ ಛಾಯಾಚಿತ್ರಗಳಾಗಿರುವುದರಿಂದ, ಇತಿಹಾಸದಲ್ಲಿ ಆಸಕ್ತಿ ಇರುವವರು ಸಂಪರ್ಕಿಸಿದರೆ ಹಲವು ಛಾಯಾಚಿತ್ರಗಳನ್ನ ತಾವು ಪಡೆಯಬೊಹುದು. ಅವುಗಳು ಫೋಟೋಗ್ರಫಿ ಕಲೆಯೊಳಗೆ ಬರುವುದಿಲ್ಲವೆಂದು ಇಲ್ಲಿ ನೀಡಿಲ್ಲ. ಶಿಲ್ಪಕಲೆ, ಗೋಪುರಗಳು, ನೀರಾವರೀ ವ್ಯವಸ್ತೆ, ಹೀಗೆ ಇತಿಹಾಸ ಹಾಗು ವಾಸ್ಥುಶಿಲ್ಪಕ್ಕೆ ಸಂಬಂದಪಟ್ಟವುಗಳಾಗಿರುತ್ತವೆ, ಆಸಕ್ತಿ ಇದ್ದಲ್ಲಿ ನನ್ನನ್ನ ಸಂಪರ್ಕಿಸಿ]






























ಶಿಕ್ಷಣ:: ಒಂದು ಸಂವಾದ


ವ್ಯವಸ್ಥಿತ ಚಿಂತನಾ ಕ್ರಮದಲ್ಲಿ ನಾವು ಚಿಂತಿಸಬೇಕಾದಾಗ, ವರ್ಥಮಾನವು ಭೂತ ಹಾಗು ಭವಿಷ್ಯತ್ತಿನೊಂದಿಗೆ ಸಮೀಕರಿಸಿಕೊಂಡೇ ಇರುತ್ತದೆ. ಹೀಗೆಂದು ಭಾರತೀಯ ಚಿಂತನಾ ಕ್ರಮದ ಬದಲಾವಣೆಯ ಪ್ರಮುಖ ಕಾಲಘಟ್ಟಗಳನ್ನೂ, ಆ ಕಾಲಘಟ್ಟದ ವ್ಯಕ್ತಿಗಳನ್ನೂ ಅಭ್ಯಯಿಸುತ್ತಿದ್ದೆ. ಹೀಗೆ ನನಗೆ ಪ್ರಮುಖರೆಂದೆನಿಸಿದವರು ರಾಜ ರಾಮ್ ಮೋಹನ್ ರಾಯ್ ರವರು. ಯಾವುದನ್ನ ನಾವು ಆಧುನಿಕ ಭಾರತ ಎಂದು ಕರೆಯುತ್ತೇವೆಯೋ ಅದರ ಆರಂಭವನ್ನ ೧೯ ನೇ ಶತಮಾನದ ಆದಿಗೆ ಸೇರಿಸಬೊಹುದು, ಹಾಗು ಆ ಕಾಲದ ಪ್ರಮುಖ ವ್ಯಕ್ತಿಯನ್ನಾಗಿ ರಾಮಮೋಹನರಾಯರನ್ನು ಗುರುತಿಸುತ್ತ ಆದುನಿಕ ಭಾರತದ ಪಿತಾಮಹ ಎಂದು ಇವರನ್ನ ಕರೆದಿದ್ದಾರೆ.
ರಾಮಚಂದ್ರ ಗುಹ ಬರೆದಿರುವ makers of modern india ಎಂಬ ಪುಸ್ತಕದಲ್ಲಿ ನೀಡಿದ್ದ, ರಾಮಮೋಹನ ರಾಯರು ಬ್ರಿಟೀಶರಿಗೆ ಬರೆದಿದ್ದ ಪತ್ರ ನನ್ನನ್ನು ಆಕರ್ಷಿಸಿತು. ೧೮೨೩ರಲ್ಲಿ ಬರೆದಿದ್ದ ಪತ್ರವದು. ಬ್ರಿಟೀಶ್ ಸರ್ಕಾರ ಭಾರತೀಯರ ವಿದ್ಯಾಬ್ಯಾಸಕ್ಕಾಗಿ ಸ್ವಲ್ಪ ಹಣವನ್ನು ಮೀಸಲಿಟ್ಟಿತ್ತು, ಆಗ ಬ್ರಿಟೀಶ್ ಸರ್ಕಾರ ಒಂದು ಸಂಸ್ಕೃತ ಶಾಲೆಯನ್ನು ಆರಂಬಿಸುವ ಉದ್ದೇಶ ಹೊಂದಿದ್ದರು. ಅದನ್ನು ವಿರೋದಿಸಿ ನಮಗೆ ಸಂಸ್ಕೃತ ಶಾಲೆಗಿಂತ ಆಧುನಿಕ  english ಶಿಕ್ಷಣವನ್ನ ಒತ್ತಿಹೇಳಿದ್ದರು.

"We were filled with sanguine hopes that this sum would be laid out in employing europian gentlemen of talents and education to instruct the natives of india in mathematics, Natural philosophy, chemistry, anatomy and other usefull Sciences"

"The Sanskrit System of Education Would be Best Calculated to keep this country in darkness"

ಹೀಗೆ ವಾದಿಸಿ ನಮಗೆ ಆದುನಿಕ ಶಿಕ್ಷಣವನ್ನ ನೀಡಲು ಪ್ರಯತ್ನಿಸಿದರು.

ನಂತರ ನಮ್ಮ ಶಿಕ್ಷಣ ಪದ್ದತಿ  ಹಲವು ಪ್ರಮುಖ ಘಟ್ಟಗಳನ್ನೂ, ಶಿಕ್ಷಣ ಪದ್ದತಿಗಳನ್ನೂ, ಹೊತ್ತು ಈಗಲೂ ಸಾಗುತ್ತಿದೆ. ಸದ್ಯ ನಾನು ಶಿಕ್ಷಣ ಕ್ಷೇತ್ರವನ್ನ ನನ್ನ ಕಾರ್ಯ ಕ್ಷೇತ್ರವನ್ನಾಗಿಸಿಕೊಂಡಿರುವುದರಿಂದ, ನನಗೆ ಹಲವು ಪ್ರಶ್ನೆಗಳು ಕಾಡುತ್ತಿವೆ.

ಎಲ್ಲರಲ್ಲೂ, ಸಾಮಾನ್ಯರಿರಬೊಹುದು, ಚಿಂತಕರಿರಬೊಹುದು, ಸಾಹಿತಿಗಳಿರಬೊಹುದು, ಶಿಕ್ಷಣ ಕ್ಷೇತ್ರದಲ್ಲಿರುವವರಿರಬೊಹುದು, ವಿದ್ಯಾರ್ಥಿಗಳಿರಬೊಹುದು, ಅತಿ ಮುಖ್ಯವಾಗಿ ಜವಾಬ್ದಾರಿಯುತ ನಾಗರೀಕರಿರಬೊಹುದು, ಎಲ್ಲರಿಗೂ ನನ್ನದೊಂದು ಪ್ರಾಮಾಣಿಕ ವಿನಂತಿ, ನನಗೆ ಈ ಸಂದರ್ಭದಲ್ಲಿ ಕಾಡಿದಂತಹ ಕೆಲವು ಪ್ರಶ್ನೆಗಳನ್ನು ತಮ್ಮ ಮುಂದಿಡುತ್ತಿದ್ದೇನೆ. ಅದಕ್ಕೆ ಉತ್ತರಗಳನ್ನ ತಿಳಿಸಬೇಕಾದವರು ತಾವುಗಳು. ತಾವೂ ಪ್ರಶ್ನೆಯನ್ನ ಸೇರಿಸಬೊಹುದು. ಈ ರೀತಿಯ ಆರೋಗ್ಯಕರವಾದ ಸಂವಾದದಿಂದ ಒಂದು ಉತ್ತಮ ಸಮಾಜವನ್ನ, ಶಿಕ್ಷಣವನ್ನ ನೀಡಬಹುದು ಎಂಬ ಚಿಕ್ಕ ಕಳಕಳಿ. ತಾವೆಲ್ಲರೂ ಸ್ಪಂದಿಸುತ್ತೀರೆಂದು ಆಶಿಸುತ್ತೇನೆ. ಪ್ರತಿಯೊಬ್ಬರ ವೈಯುಕ್ತಿಕ ಚಿಂತನೆಗಳೂ ಇಲ್ಲಿ ಮುಖ್ಯ. ತಮಗೆ ಗೊತ್ತಿದ್ದಂತಹ ಅಮೂಲ್ಯ ಮಾಹಿತಿಗಳಿದ್ದಲ್ಲಿ ಅದನ್ನೂ ಸೇರಿಸಿ. ಒಟ್ಟಿನಲ್ಲಿ ನಮ್ಮ ಶಿಕ್ಷಣವನ್ನ ಉತ್ತಮಪಡಿಸಿದರೆ ಅಷ್ಟೇ ಸಾಕು.
.
೧. ಯಾವುದನ್ನು ನೀವು ಶಿಕ್ಷಣ ಎನ್ನುತ್ತೀರಿ? ಅಂತಹ ಶಿಕ್ಷಣವನ್ನ ನೀಡುವ ಬಗೆ ಹೇಗೆ? ಹಾಗು ಅಂತಹ ಶಿಕ್ಷಣ ಇಂದಿಗೆ ಪ್ರಸ್ಥುತವೆ.?

೨. ಇಂದಿನ ಹಲವು ಸಮಸ್ಯೆಗಳಿಗೆ ಶಿಕ್ಷಣವನ್ನ ಪರಿಹಾರವನ್ನಾಗಿಸಬಯಸಿದರೆ, ಆ ರೀತಿಯ ಶಿಕ್ಷಣವನ್ನ ನೀಡುವ ಬಗೆ ಎಂತಹುದು?

೩. ಇಂದಿನ ಶಿಕ್ಷಣ, ಬದುಕಿನ ಬಗೆಗಿನ ಒಳನೋಟವನ್ನೂ, ಜೀವನ ಪ್ರೀತಿಯನ್ನೂ ನೀಡುತ್ತಿದೆಯೆ? ಇಲ್ಲವಾದರೆ ಬದುಕನ್ನ ಪ್ರೀತಿಸುವಂತಹ ಶಿಕ್ಷಣವನ್ನ ನೀಡುವ ಬಗೆ ಹೇಗೆ?

೪. ೧೭೮ ವರ್ಷಗಳ ಹಿಂದೆ ರಾಮಮೋಹನ ರಾಯರು ಯಾವ ಚಿಂತನಾ ಕ್ರಮಗಳಿಂದ ಮನುಷ್ಯ ಜೀವಿತ  ಪ್ರಜ್ಞೆ   ವಿಸ್ತಾರವನ್ನು ಹೊಂದಿ ಜೀವನ ಪ್ರೀತಿಯನ್ನ ಗಳಿಸಬೇಕೆಂಬ ಆಶಯದಿಂದ ವಿದ್ಯಾಬ್ಯಾಸ ಪದ್ದತಿಯನ್ನ ಬದಲಿಸಿದರೋ, ಆ ಚಿಂತನಾ ಕ್ರಮಗಳು ನಮಗೆ ದಕ್ಕಿದೆಯೆ?

೫.ಜೀವ ವಿರೋದವನ್ನ (ಒಬ್ಬ ಮನುಷ್ಯನನ್ನು ಹೀನವಾಗಿ ಕಾಣುವುದು) ಕಾನೂನಿನ ಮೂಲಕ ವಿರೊದಿಸುತ್ತಿದ್ದೇವೆಯೆ ವಿನಃ ಶಿಕ್ಷಣದಿಂದಲ್ಲ, ಹಾಗಾದರೆ ತಪ್ಪಿರುವುದೆಲ್ಲಿ?

೬. ಶಿಕ್ಷಣದ ಬೆಗೆಗಿನ ತಮ್ಮ ತಾತ್ವಿಕ ಚಿಂತನೆಯೇನು?

೭. ಶಿಕ್ಷಣದ ಬಗ್ಗೆ ಚಿಂತಿಸಿದಾಗ ತಮ್ಮ ಅನುಭವದಿಂದ ಮೂಡುವ ಪ್ರಶ್ನೆಗಳಾವುವು.?

ಮನುಷ್ಯ ಮನುಷ್ಯನನ್ನ ಪ್ರೀತಿಸುವಂತಹ ಜೀವನ ಪ್ರೀತಿಯುಳ್ಳ ಶಿಕ್ಷಣವನ್ನ ರೂಪಿಸಬೇಕೆಂಬುದು, ಅಂತಹ ಶಿಕ್ಷಣವನ್ನ ನೀಡಬೇಕು ಹಾಗು ತಿಳಿಸಬೇಕೆಂಬುದು ನನ್ನ ಆಶಯ. ಅದಕ್ಕೆ ತಮ್ಮೆಲ್ಲರ ಸಹಕಾರದ ಅವಶ್ಯಕತೆಯಿದೆ. ಇವಕ್ಕೆ ಸ್ಪಂದಿಸುತ್ತೀರೆಂದು ಆಶಿಸುತ್ತೇನೆ.


ಮೃಣನ್ಮಯಿ ನಚೀಕೇತರ ಪ್ರೇಮ ಸಲ್ಲಾಪ - ಕವ್ನ ಎಂಬೋ ಹುಟ್ಟು


ಒಂಟಿ,
ಸೂಜಿ ಮೊನೆ ಮೇಲೆ ನಿಂತಿದ್ದೆ.
ರಕ್ತ ಹರೀದೆ ಅನ್ಬವಿಸೋ ಯಾತನೆ.
ನೋವು, ಹತಾಷೆ, ಸೋಲು, ದಿಗ್ಭ್ರಾಂತದಲ್ಲಿ ತಲ್ಲಣಗೊಂಡಿದ್ದೆ.
ನಾ ನಿಂತಿರೋದು
ಗೊತ್ತಿದ್ದೂ
ನಿಂತಿದ್ದೆ.(ಅದು ನನ್ನ ಕರ್ಮ ಅಂತ ಅನ್ಬೇಡಿ)
ಹಕ್ಕೀನ ಸ್ವಾತಂತ್ರ್ಯದ ಪ್ರತಿಮೆಯಾಗಿಸಿ
"ಮತ್ತೆ ಹಕ್ಕಿ ಹಾರಿತು ನೋಡ"
ಎಂಬ
ಕವ್ನ ಬರ್ದ
ನನ್ನ ಹೀನ ಸ್ಥಿತಿಯಲ್ಲಿ
ಮೃಣನ್ಮಯಿಯನ್ನ ಅಪ್ಪಿಕೊಂಡೆ.
ಇಬ್ರೂ ಹಾದಿ ಬದೀಲ್ ಬಿದ್ದ ಆಕಾಶ ಮಲ್ಲಿಗೇನ
ಕಂಡು
ಅದ್ನ ಹೆಕ್ಕೋಕ್ಕೋಗಿ
ಸಲ್ಲಾಪಕ್ಕಿಳಿದ್ವು
ಅದೇ ನಚೀಕೇತ ಮೃಣನ್ಮಯಿಯರ ಪ್ರೇಮ ಸಲ್ಲಾಪ - ಕವ್ನ ಎಂಬೋ ಹುಟ್ಟು.



"ಹುಡ್ಗೀ,
ನಿನ್ನ ಹೊಕ್ಕುಳ ಕಂಡರೆ ನಂಗಿಷ್ಟ
ಮತ್ತೆ
ಹುಟ್ಟಬೇಕೆನಿಸುತ್ತೆ"

"ಆಹಾ....
ಹೊಕ್ಕುಳಿಗೊಂದು ಬಂಧವುಂಟೋ ಹುಡ್ಗ
ಆ ಬಂಧದ ಸ್ವಚ್ಛಂದವು
ನೀನಾದಾಗ
ಮತ್ತೇ
ಹುಟ್ಟುತ್ತೀ"


"ಹುಡ್ಗೀ
ನನ್ನ ಹುಚ್ಚಿನ ಪೂರಕ ಕಣೇ ನೀನು
ಹುಚ್ಚಂಗೆ ಕವ್ನ ಬರ್ಯೋ ಹಕ್ಕಿಲ್ಲ
ನಾ ಕವ್ನ ಬರ್ಯೋಲ್ಲ"

"ಹುಡ್ಗ
ನೀನ್ಯಾಕೋ ಕವ್ನ ಬರೀತಿ
ಪದ್ಗಳ ಹಂಗು
ಹೊಕ್ಕುಳಿಗಂಟಿದ ಭಾವವಿರಬೇಕಾದರೆ"


ಮೃಣನ್ಮಯಿ
ನೀನು ಪೂರ್ಣ ಬೆರಗು
ತಿಳಿವ ಹುಚ್ಚು ಹಠಕ್ಕೆ ಅಚ್ಚರಿ
ಕ್ಷಣದ ಅವಗಾಹನೆಗೆ ಆವಾಹನೆ
ದೀರ್ಘಾವಲಂಬಿತ ಪ್ರಕ್ರಿಯೆಯ ಪ್ರತಿಕ್ರಿಯೆ

ನಚೀ
ಬೆರಗಾಗೋ ನಿನ್ನ ಬೆರಗೇ ಪೂರ್ಣ
ನಿನ್ನ ಅಚ್ಚರಿಯಲ್ಲಿನ ಸಹಜ - ಹುಚ್ಚು ಹಟ
ಹೊಕ್ಕುಳ ಗುಣಿಯಲ್ಲಿಟ್ಟಿದ್ದೀನಿ ಕ್ಷಣವನ್ನ
ಅವಲಂಬನವಲ್ಲಾ ನಾನೂ ನೀನು



ಶಬ್ದ ಕೇಳ್ತೀಯ? ಶಬ್ದ ಆಡ್ತೀಯ?

ಮಾತು ಬರೋದಿಲ್ಲ, ಮಾತು ಕೇಳೋದಿಲ್ಲ

.
.
ಮ್
.
.
ಉಹೂ ಆಗುತ್ತಿಲ್ಲ.
ನನ್ನಲ್ಲಿ ಶಬ್ದಗಳು ಹುಟ್ಟತ್ತಿಲ್ಲ.


ನಮ್ಮ ಸವಾರಿ ನಾಟಕಕ್ಕೆ ಹೋದದ್ದು.........


ನಾಟಕ ಎಂಬೋದನ್ನ ಮನುಷ್ಯ ಯಾಕೆ ಮಾಡ್ತಾನೆ? ನಾಟಕ ಯಾಕೆ ಬೇಕು? ತನ್ನದೇ ಪರಿಸರದಿಂದ ಎತ್ತಿಕೊಂಡ ಕೆಲವು ಸನ್ನಿವೇಷಗಳನ್ನ ಆತ ಯಾಕೆ ಮತ್ತೇ ನೋಡಬೇಕು ಅಂತ ಅಂದುಕೊಳ್ಳುತ್ತಾನೆ? ಯಾಕೆ ಪ್ರಾಚೀನ ಕಥಾನಕಗಳನ್ನ ನೊಡಲು ಬಯಸುತ್ತಾನೆ? ಪಾತ್ರಗಳನ್ನ ಎದುರಿಗೆ ರಂಗದಲ್ಲಿ ಕಾಣಲು ಇಚ್ಚಿಸುತ್ತಾನೆ? ಇವೆಲ್ಲವೂ ಪ್ರಶ್ನೆಗಳಾಗಿ ಕೊರೆಯುತ್ತಾ ಇದ್ದ ವೇಳೆಯಲ್ಲಿಯೇ ಶ್ರೀ ಅಶೋಕ ವರ್ಧನರು ಉಡುಪಿಯಲ್ಲಿ ನೀನಾಸಂ ರವರ ನಾಟಕ ಇದೆಯೆಂದು ಹೇಳಿದರು. ಅದಕ್ಕೆ ಸರಿಯಾಗಿ ಸುಂದರ ರಾಯರು ಸೇರಿತ್ತಾರಾದ್ದರಿಂದ ಹೊರಡುವ ಎಂದು ತಯಾರಾದೆ. ಅಶೋಕರು, ಸುಂದರರಾಯರು, ನರೇಂದ್ರ ಪೈಗಳು ಎಲ್ಲಾ ಒಟ್ಟಿಗೆ ಪಯಣ ಶುರುವಾಯಿತು. ಅಶೋಕರ ಸಂಗಡ ಪಯಣ ಅಷ್ಟು ಉಲ್ಲಸಿತವಾಗಿರುತ್ತದೆ ಎಂದು  ಅಂದು ತಿಳಿಯಿತು. ಅವರೂ ಅವರ ಗೆಳಯರೂ ಆದ ಸುಂದರರಾಯರು "ಕಳೆದುಹೋದ" ಚಹರೆಗಳನ್ನ ನೆನೆಯುತ್ತಿರಬೇಕಾದರೆ, ಹೀಗೆ ನೆನೆಯುವುದು ತಪ್ಪ ಇನ್ನೇನು ಮಾಡೀರ ಎಂದು ರೇಗಿಸಿಕೊಳ್ಳುತ್ತಿದ್ದೆ. ದಾರಿಯುದ್ದಕ್ಕೂ ನಮಗೆಲ್ಲಾ ಹನುಮಂತ ಲಂಕೆಗೇಕೆ ಹೋದ, ಅಲ್ಲಿ ಏಕೆ ಆ ರೀತಿ "ಕೋತಿ" ಚೇಷ್ಟೇಗಳನ್ನೆಲ್ಲಾ ಮಾಡಿದ ಅಂತೆಲ್ಲಾ ಬಹಳ ಸುಂದರವಾಗಿ ಹೇಳುತ್ತಾ ಸಾಗಿದರು.  ಒಟ್ಟಿನಲ್ಲಿ ಉಡುಪಿ ಸೇರಿ ಅಲ್ಲಿ ಚಾ ಅನ್ನು ಬೇಗೆ ಕುಡೀಲಿಕ್ಕೆ ಆಗದೆ, ಈ ವಯಸ್ಸಾದವರೆಲ್ಲ ಬೇಗ ಕುಡಿದು ಮುಗಿಸಿಬಿಟ್ಟಾಗ ನಾನೂ ಬೇಗ ಕುಡಿಯಲು ಏನೇನೋ ಸರ್ಕಸ್ ಮಾಡಿ ಸ್ವಲ್ಪ ಚಾ ಅನ್ನು ನೆಲಕ್ಕೆ ಅರ್ಪಿಸಿ ದೈರ್ಯವಾಗಿ ಅಲ್ಲಿಗೆ ತಲುಪಿದೆವು.  ಮೂತ್ರಕ್ಕೆ ಅವಸರವಾಗಿತ್ತು, ಎಲ್ಲಿ ನಾಟಕ ಆರಂಭವಾಗಿಹೋಗುತ್ತೋ ಎಂಬೋ ಅವಸರ, ಜೊತೆಗೆ ಅಲ್ಲೆಲ್ಲೂ ಮೂತ್ರಾಲಯಗಳೇ ಇಲ್ಲ, ದಾರಿಕಾಣದಾಗಿದೆ ಬಗವಂತನೆ ಅನ್ನೋ ವೇಳೆಗೆ ಸರಿಯಾಗಿ ಎಲ್ಲಿಂದಲೊ ಪ್ರತ್ಯಕ್ಷರಾದ ವ್ಯಕ್ತಿಯೊಬ್ಬರು ಮೂತ್ರಾಲಯಕ್ಕೆ ದಾರಿತೋರಿ ದಾರಿಯುದ್ದಕ್ಕು "ಎಂತ ನಾಟಕವೊ ಏನೋ, ಮಾತಿಲ್ಲ ಕತೆಯಿಲ್ಲವಂತೆ" ಎಂದು ದೀರ್ಘವಾಗಿ ಉಸಿರೆಳೆದುಕೊಂಡು ನಮಗೆ ಮೂತ್ರಾಲಯಕ್ಕೆ ದಾರಿ ತೋರಿದರು. ಒಟ್ಟಿನಲ್ಲಿ ಎಲ್ಲಾ ಸುಗಮವಾಗಿ ಬಂದ ನಂತರ ನಾಟಕ ಆರಂಭವಾಗಿ, ಮುಗಿದಾಗಲೆ ನನಗೆ ನಾಟಕ ಮುಗಿದದ್ದು ತಿಳಿದದ್ದು. ಎರಡು ತಾಸು  ನನ್ನನ್ನಂತು ನಾಟಕ ಹಿಡಿದಿಟ್ಟದ್ದು ನಿಜ.

ಇನ್ನು ನಮ್ಮ ಸವಾರಿ ವಾಹನದಲ್ಲಿ ನಾಟಕದ ಬಗ್ಗೆ ವಿಮರ್ಶೆ, ಚರ್ಚೆ ಎಲ್ಲವು ಆರಂಭವಾಯಿತು. ಹೆಚ್ಚು ನಾಟಕಗಳನ್ನು ನೋಡಿಲ್ಲದ ನಾನು, ನಾಟಕದ ಯಾವುದೇ ವಿಭಾಗದಲ್ಲೂ ಕಾರ್ಯ ನಿರ್ವಹಿಸದ ನಾನು, ಈ ಚರ್ಚೆಯಲ್ಲಿ ಎಲ್ಲಿ ಬಾಗವಹಿಸುವುದೋ ತಿಳಿಯದಿದ್ದರೂ "ಹುಡುಗು ಬುದ್ದಿ" ಇಂದ ಆಗಾಗ ಏನೊ ಒಂದು ಚೂರು ಮಾತನ್ನ ಹೇಳುತ್ತಿದ್ದೆ. ನನ್ನ ಜೊತೆಗಿದ್ದ ಅಶೋಕರಿಗೆ, ಸುಂದರ ರಾಯರಿಗೆ ಹಾಗು ನರೇಂದ್ರ ಪೈ ರವರಿಗೆ ಸಾಹಿತ್ಯ, ನಾಟಕ ಹಾಗು ಕಲೆಯಲ್ಲಿ ಆಳವಾದ ಅನುಭವ ಹಾಗು ಗ್ರಹಿಸುವ ಶಕ್ತಿಯಿರುವುದರಿಂದ ಅವರು ಹೇಳಿದ್ದನ್ನೂ ಕೇಳಿ ಟಿಪ್ಪಣಿ ಮಾಡಿಕೊಂಡೆ.
ಅಶೋಕರು----" ಇಲ್ಲಿನ ಪಾತ್ರಗಳೆಲ್ಲಾ ಕಾಲ ಘಟ್ಟಗಳಾಗಿ ಕಾಣುತ್ತವೆ"
ನರೇಂದ್ರ ಪೈಗಳು-----" ಹಲವು ಅರ್ಥಸಾದ್ಯತೆಗಳನ್ನ ತೆರೆಯುತ್ತದೆ"
ಹೀಗೆ ಅಂದಾಗ ಸಾಹಿತ್ಯದ ಹಾಗು ಸೌಂದರ್ಯ ಮಿಮಾಂಸೆಯ ಕೆಲವು ತತ್ವಗಳನ್ನ ಮೆಲುಕು ಹಾಕುತ್ತಿರಬೇಕಾದರೆ,(ನಾನು ಬೌತಶಾಸ್ತ್ರದ ವಿದ್ಯಾರ್ಥಿ ನನಗೆ ಸಾಹಿತ್ಯ ತತ್ವದ ಬಗ್ಗೆ ಹೆಚ್ಚಿಗೆ ತಿಳಿದಿಲ್ಲ) ಇದ್ದಕ್ಕಿದ್ದಂತೆ ಸುಂದರ ರಾಯರೆಂದರು "ಇಡೀ ನಾಟಕ ಒಂದು ಬೌದ್ದಿಕ ವಿಕಾರ" ಎಂದಾಗ ನನ್ನ ಆಲೋಚನ ಕ್ರಮ ಬೇರೆಯೇ ದಿಕ್ಕಿಗೆ ಚಲಿಸಿತು.
ಬೆಳೆಗ್ಗೆ ಎದ್ದಾಗ ಅಶೋಕರದೊಂದು e mail ಬಂದಿತ್ತು. ಅದು ಈ ರೀತಿ ಇದೆ.

"ಪ್ರಿಯರೇ
ಅವಧಿಯಲ್ಲಿ ಪ್ರಕಟವಾದ ಹರೀಶಕೇರರ ಲೇಖನಕ್ಕೆ ಪೂರಕವಾಗಿ ಕಳಿಸಿದ ಟಿಪ್ಪಣಿಯ ಯಥಾ ಪ್ರತಿ:

ನಿನ್ನೆ ಸಂಜೆ ಉಡುಪಿಯಲ್ಲಿ (ಸುಂದರರಾಯರೂ ಸೇರಿದಂತೆ)ಕಣ್ಣೆವೆ ಬಡಿಯದೆ ಎರಡು ಗಂಟೆಯುದ್ದಕ್ಕೆ ನಾಟಕ ನೋಡಿದೆ. ನನ್ನ ಮನೋಭೂಮಿಕೆಯಲ್ಲಿ ಸುಬ್ರಹ್ಮಣ್ಯದ ಅಡ್ಡಹೊಳೆಯ ಚೊಳಚೊಳ ಒಂದೇ ಸದ್ದು. ಬೆತ್ತ ಕೀಸುತ್ತ, ಬೇಟೆಯಾಡಿ ದಣಿದು, ತೀರ್ಥಯಾತ್ರೆಗಿಳಿದು, ದಾರಿಹೋಕರ ಹೊಡೆದು, ಜಾನುವಾರು ನಡೆಸಿ, ಜಲಕ್ರೀಡೆಗಾಗಿ, ವನವಿಹಾರಕ್ಕಾಗಿ, ಅಸ್ಥಿ ಸಂಚಯನಕ್ಕೆ, ಪಿಂಡಪ್ರದಾನಕ್ಕೆ, ಪ್ರಾಣ ನೀಗುವುದಕ್ಕೆ, ಕ್ಷಣಿಕ ರತಿಗೆ, ಮೀನಿಗೆ, ತೇಲು ದಿಮ್ಮಿಗೆ ಹೀಗೇ ಕಾಲದ ಅಖಂಡ ಪ್ರವಾಹದಲ್ಲಿ ಮುಗಿಯದ ಮನುಷ್ಯ ಯಾತ್ರೆ ನಿಧಾಆಆಆಅನಕ್ಕೆ ಸಾಗಿಯೇ ಇತ್ತು. ಮುಗಿಯದ ಮಾತು, ನಿಲ್ಲದ ಅಳು, ಹೊಡೆದ ಬೊಬ್ಬೆ, ಉಕ್ಕಿದ ಕೇಕೆ, ಸ್ಫುರಿಸಿದ ಹಾಡು ಹೀಗೇ ಎಲ್ಲವೂ ಹಿಂಜಿ ಹಿಂಜಿ ಮೌನವಾದವೇ? ಇಲ್ಲ, ಅಡ್ಡಹೊಳೆಯ ಚೊಳಚೊಳ ಒಂದೇ ನಿರಂತರ. ದಾರಿ ಕಡಿಯುವ, ಸೇತುಬಲಿಯುವ, ಅಣೆಕಟ್ಟುವ, ವಿದ್ಯುತ್ ಬಸಿಯುವ, ಬಾಟಲಿ ತುಂಬುವ, ಮೂಲಕ್ಕೇ ಬಾಯಿಯಿಕ್ಕುವ, ಮೇಲಿನಿಂದ ಲೆಕ್ಕಿಸುವವ, ತಳದಲ್ಲಿ ನುಸುಳುವ, ಕಸಕುಪ್ಪೆ ಬೆಳೆಸುವ ಎಲ್ಲವೂ ಪಿಸಿಪಿಸಿದು ಗುಡ್ಡೆಬಿದ್ದರೂ ಅಡ್ಡಹೊಳೆಯ ಚೊಳಚೊಳ ನಿರಂತರ?

ಈ ವಲಯಕ್ಕೆ ನಾಟಕದ ಒಂದೇ ಪ್ರದರ್ಶನ ಲಭ್ಯ ಎನ್ನುವ ಒತ್ತಡದಲ್ಲಿ ನನ್ನ ಸಂಪರ್ಕಕ್ಕೆ ಬಂದವರನ್ನೆಲ್ಲಾ ಒತ್ತಾಯಿಸಿ, ಕಾರು ತುಂಬಿಕೊಂಡು ಧಾವಿಸಿದ್ದೆ. ಕೊನೆಯಲ್ಲಿ ಜೊತೆಗೊಟ್ಟಿದ್ದ, ನೇತ್ರಾವತಿ ತಿರುಗಿಸುವ ಹುನ್ನಾರದವರ ವಿರುದ್ಧ ಮಾಹಿತಿ ಹಕ್ಕಿನ ಬ್ರಹ್ಮಾಸ್ತ್ರ ಹಿಡಿದು ಹೋರುವ, ಸುಂದರರಾಯರಿಗೆ ಇದು ಕೇವಲ ನಿಮ್ಹಾನ್ಸ್ ಗಿರಾಕಿಗಳ ಪ್ರಯೋಗವಾಗಿ ಕಂಡದ್ದು ನನಗೆ ಪರಮಾಶ್ಚರ್ಯ.

ಚಕ್ರದ ಮರುಶೋಧವಾದರೂ ಸರಿ, ವರ್ತಮಾನಕ್ಕಷ್ಟೇ ತೀವ್ರವಾಗಿ ಸ್ಪಂದಿಸುವ, ಕುತೂಹಲದ ಕುದುರೆಯ ನಿರಂತರ ಕಾಸ್ತಾರ/ಸವಾರ ವೆಂಕಟ್ರಮಣ ಉಪಾಧ್ಯ "ಮುಂದೆ ಯಾರು ಒತ್ತಾಯಿಸಿದರೂ ನಾಟಕ ನೋಡಬಾರದು ಎಂದು ನಿರ್ಧರಿಸಿದ್ದೇನೆ" ಎಂದದ್ದು ನನಗೆ ವಿಪರೀತವಾಗಿ ಕಾಣಿಸಲಿಲ್ಲ.

ಅಂತರ್ಜಾಲದ ಸಿಕ್ಕು ಬಿಡಿಸಿ ಜಪಾನೀ ಟಿಪ್ಪಣಿಗಳನ್ನೆಲ್ಲಾ ಸಂಗ್ರಹಿಸಿ ತಂದ ಯುವ ಅಧ್ಯಾಪಕ ಅರವಿಂದ ನಮ್ಮ ಕಾರುಯಾನದ ಉದ್ದಕ್ಕೆ (ಮಂಗಳೂರಿನಿಂದ ಉಡುಪಿಗೆ)ಸರೇಂದ್ರ ಪೈಯವರಿಗೆ ಓದಿಸಿ ಮತ್ತಷ್ಟು ಜಟಿಲ ಬಂಧಕ್ಕೆ ಬಿದ್ದಿರುವುದು ಇನ್ಯಾವ ರೂಪದಲ್ಲಿ ಪ್ರಕಟವಾಗುತ್ತದೋ ಗೊತ್ತಿಲ್ಲ."
ಅಶೋಕವರ್ಧನ

ಹೀಗೆ ಆದಾಗ ಇಡೀ ನಾಟಕ ನನ್ನಲ್ಲಿ ಮತ್ತೇ ರೂಪಗೊಳ್ಳಲು ಆರಂಭವಾಯಿತು. ಪ್ರಕಟಗೊಂಡ ಕೃತಿಯೊಂದು ಮರು ಪ್ರಕಟಗೊಳ್ಳಲು ಆರಂಬಿಸಿ ನನಗೆ ಪ್ರಸವ ವೇದನೆಯನ್ನ ನೀಡಲು ಆರಂಭವಾದಾಗ ನಾನು ಬರೆಯಲೇ ಬೇಕಾಯಿತು.
ಆರಂಭದಲ್ಲಿ ಅಂತ್ಯ ಎಂತಲೋ, ಅಂತ್ಯದಲ್ಲಿ ಆರಂಭ ಎಂತಲೋ ಒಟ್ಟಿನಲ್ಲಿ ಸ್ಥಾವರವಾಗದ, ನಿರಂತರ ಚಲನೆಯಲ್ಲಿ ಮನುಷ್ಯ ಜೀವನ, ನಾಗರೀಕತೆ, ಜಗತ್ತು, ಪ್ರಕೃತಿ ಎಲ್ಲವೂ ಒಳಗೊಡಿದೆ ಎಂಬೋ ಭೂಮಿಕೆಯಲ್ಲಿ ಈ ನಾಟಕ ನನ್ನಲ್ಲಿ ರೂಪ ಪಡೆಯಿತು. ಇಡೀ ನಾಟಕವನ್ನ ತುಂಡರಿಸಿ ಈ ಪಾತ್ರ ಏನನ್ನ ಹೇಳುತ್ತಿದೆ ಎಂತಲೋ, ಇದ್ಯಾಕೆ ಹೀಗೆ ಮಾಡಿದೆ ಎಂತಲೋ ನಾಟಕವನ್ನ "ಕಾಣುವ" ಬಗೆಗಿಂತ ಒಟ್ಟೂ ಕೃತಿ, ನಾಟಕದಿಂದ ಹೊರಬಂದಾಗ ಕಂಡಿದ್ದೇನು ಎಂಬೋದು ನನಗೆ ಮುಖ್ಯವಾಗುತ್ತೆ. ಹರಿವನ್ನ(ನಲ್ಲಿಯಲ್ಲಿನ ನೀರು), ಆ ಜೀವನ ದ್ರವ್ಯವನ್ನ, ನಿರಂತರವೂ ಹರಿಯುವುದನ್ನ, ಮನುಷ್ಯ ಅಥವ ಕಾಲಘಟ್ಟಗಳು ಅವುಗಳದೇ ಪರಿಮಿತಿಯಲ್ಲಿ, ಅವುಗಳದೇ ಆಲೋಚನೆಯಲ್ಲಿ, ಪಡೆದುಕೊಂಡ ಬಗೆಯಲ್ಲಿ ಅದು ಮುಖ್ಯವಾಗುತ್ತ ಸಾಗಿತು. ನಾಟಕ ನೋಡಿ ಹೊರಬಂದಾಗ ಕಾಡಿದ ಭಾವವೇನು ಎಂದರೆ "ಮನುಷ್ಯ , ಆತನ ಅಸ್ಥಿತ್ವ , ಹಾಗು ಸಾವು ಎರಡನ್ನೂ ಒಳಗೊಂಡು, ಅವೆರಡರ ನಡುವಿನ ಜಾಗದಲ್ಲಿ ನಿಂತು ಎರಡನ್ನೂ ಏಕ ಕಾಲಕ್ಕೆ ಅನುಭವಿಸುವ ವಿಕ್ಷಿಪ್ತ ದ್ವಂದ್ವಕ್ಕೆ ಸಿಲುಕಿದ್ದಾನೆ" ಎಂದು. ಅದು ಹೇಗೆ ಹೇಳುತ್ತೀರಿ? ವಿವರಿಸಿ ಎಂದರೆ, ನನ್ನ ಕೈಲಿ ಆಗೋದಿಲ್ಲ. ನಾನು ಈ ಪ್ರದರ್ಶನವನ್ನ ನೋಡಿ ಬಂದಾಗ ನನಗೆ ಅನಿಸಿದ ಭಾವವದು. ಅಷ್ಟೆ. ಹೂವನ್ನ ನೋಡಿದಾಗ ನನಗೆ ಒಂದು ಭಾವ ಮೂಡಿದಾಗ, ಆ ಭಾವ ಹೇಗೆ ಮುಡಿತು ಎಂತಲೋ ಅದೇ ಯಾಕೆ ಮೂಡಿತು ಎಂತಲೋ ಕೇಳುವುದು ಅಷ್ಟೇನೂ ಸರಿಯಲ್ಲದ್ದು. ಇರಲಿ.  

ನಾಟಕದ ಮುಖ್ಯಾಂಶವೆಂದರೆ ಇದು ಜಪಾನಿನ ಓಟೋ ಶೋಗೋ ರವರು ಬರೆದ water station ಎಂಬೋ ನಾಟಕ. ಅಭಿನಯಿಸಿದವರು ನೀನಾಸಂ ತಂಡ. ಇದರ ಪ್ರಾಮುಖ್ಯತೆ ಎಂದರೆ ಇದು, ಮೂಖ ನಾಟಕವಾಗಿದ್ದು, ಕೇವಲ ಸಂಗೀತವಿರುತ್ತದೆ, ಹಾಗು "ಅತಿ ವಿಳಂಬಿತವಾಗಿ" ನಡೆಯುವ ನಾಟಕ. ಇಲ್ಲಿ ನಾಟಕದಲ್ಲಿ, ೧೮ ಮಂದಿ ಭಾರವಾದ ಸರಕುಗಳನ್ನ ಹೊತ್ತು ಅತಿವಿಳಂಬಿತ ನಡಿಗೆಯಲ್ಲಿ ನಡೆದು ಹೊರ ಹೋಗುತ್ತಾರೆ. 

ಪ್ರತೀ ಕಲಾಕೃತಿಯನ್ನು ನೋಡುವಾಗ ಆ ಕಲಾಕೃತಿಯ ಕತೃವಿನ ಹಿನ್ನಲೆ, ಕಾಲಘಟ್ಟ ಎಲ್ಲವೂ ಸ್ವಲ್ಪ ಮಟ್ಟಿಗಾದರು ಅವಷ್ಯಕ. ಅದೂ ಮುಖ್ಯವಾಗಿ ಭಾರತದಿಂದ ಹೊರಗಿನವರನ್ನ ಕಾಣುವಾಗ ಅವರ ಬಗ್ಗೆ, ಅವರ ತಾತ್ವೀಕತೆಯ ಬಗ್ಗೆ ಸ್ವಲ್ಪ ಮಟ್ಟಿಗಿನ ನೋಟ ಒಳ್ಳೆಯದೋ ಏನೊ.  ಓಟೋವಿನ ನಾಟಕಗಳನ್ನ ನೊಡುವಾಗ, ಮುಖ್ಯವಾಗಿ ನೀರಿನ ನಿಲುತಾಣವನ್ನ ವೀಕ್ಷಿಸುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಜನಗಳು ಹೊತ್ತು ತರುತ್ತಿರುವ ಬೃಹತ್ ಸಾಮಾನುಗಳು. ಹಾಗೂ ಪಕ್ಕದಲ್ಲೇ ಇರುವ ಸಾಮಾನುಗಳ ದೊಡ್ಡ ಗುಡ್ಡ. ಓಟೋ ಆರು ವರ್ಷದವನಿದ್ದಾಗ ಚೈನಾದಿಂದ ಜಪಾನಿಗೆ ಒಲಸೆ ಕೈಗೊಳ್ಳುತ್ತಾನೆ. ಆ ಎರಡು ತಿಂಗಳುಗಳ ಆ ಯಾನದಲ್ಲಿ ಟೆಂಟುಗಳಲ್ಲಿ ತಂಗುವುದು, ರೈಲು, ಹಡಗು ಪ್ರಯಾಣ ಸಾಗಿರುತ್ತದೆ. ಆ ಸಾಗಾಟದಲ್ಲಿ ಅನವಶ್ಯಕವಾದದ್ದನ್ನ ಬಿಸಾಕುವುದು, ಅವಶ್ಯವಾದದ್ದನ್ನ ಮಾತ್ರಾ ಕೊಂಡೆಯ್ಯುವುದೂ ಸಾಗಿರುತ್ತದೆ. ಅದನ್ನೇ ಈತ ಈ ನಾಟಕದಲ್ಲಿ ಬಳಸಿಕೊಂಡನ ಅಂತನಿಸುತ್ತೆ. ನಮ್ಮ ಅಶೋಕರಿಗೆ ಈ ಬೃಹತ್ ಮುಟೆಗಳು ನಮ್ಮ ನೆನಪುಗಳಾಗಿಯೋ, ಜವಾಬ್ದಾರಿಗಳಾಗಿಯೋ ಕಂಡಿತು. ನನಗೆ ಆ ಬೃಹತ್ ಮೂಟೆಗಳು, ಆ ಹೊತ್ತು ಹೋಗಬೇಕಾದ ನಮ್ಮ ಸ್ಥಿತಿಗಳು, ಪ್ರಯಾಣ ಮಾಡ ಬಯಸುವವನಿಗೆ ಅನಿವಾರ್ಯವಾಗಿ ಹೋದಂತೆ ಕಂಡಿತು. ಆ ಒಂದು ಕಡೆಯಿಂದ ಮತ್ತೊಂದು ಕಡೆಗೆ, ತನ್ನದಲ್ಲದ್ದಕ್ಕೆ ಪಯಣ ಬೆಳೆಸಿರುವುದು, ಅದು ಅವಶ್ಯಕತೆಯೋ, ಸಂದರ್ಭ ಎಂತಹುದೋ ಒಟ್ಟಿನಲ್ಲಿ ಎಲ್ಲೋ ಒತ್ತಡದ ಪಯಣದಂತೆ ಕಂಡದ್ದು ಮಾತ್ರ ಸತ್ಯ. ಮನುಷ್ಯ ಚಲನೆಗೆ ತೆರೆದುಕೊಂಡಾಗ ಹೊರೆ ಅನಿವಾರ್ಯವಾಗಿರುತ್ತದೆ. ಅದೇ ರೀತಿ ಆ ಹೊರೆಗಳ "ಅನಾವಶ್ಯಕ" ರಾಶಿಯೂ ಅನಿವಾರ್ಯ.  ಇಲ್ಲಿ ಎರಡನ್ನೂ ನೋಡಬೇಕಾದ ದ್ವಂದ್ವದ ಸ್ಥಿತಿ. "ಅನಾವಶ್ಯಕವಾದದ್ದನ್ನ" ಎಸೆಯದೆ "ಅವಶ್ಯಕವಾದದ್ದನ್ನ" ಮಾತ್ರ ಹೊತ್ತು ನಡೆಯಲಿಕ್ಕೆ ಆಗದು. ಹೀಗೆ ನಮ್ಮ ಚಲನೆ "ಅವಶ್ಯಕ" ಹಾಗು "ಅನಾವಶ್ಯಕ" ಎಂಬೋ ಎರಡು ವಿಬಾಗಗಳನ್ನ ಮಾಡಿ ಬಿಡುತ್ತದೆ. ಈ ವಿಭಾಗಗಳ ಒಳ ನೋಟ ಕೇವಲ ವ್ಯಕ್ತಿಕೇಂದ್ರಿತವಾಗಿ ಮಾತ್ರ ಇರದೆ, ಸುತ್ತಲಿನ ಸಮಾಜಕ್ಕೂ ಸಂಭಂದಿಸಿ ಬಿಟ್ಟಿರುತ್ತದೆ. ಹಾಗಾಗಿಯೆ ಇಲ್ಲಿ "ವರ್ಗ"ಗಳು ಸೃಷ್ಠಿಯಾಗುತ್ತೆ. ಹೀಗೆ ಚಲನೆ ಸ್ವಂಪೂರ್ಣವಾಗಿ "ವರ್ಗ"ಗಳನ್ನ, ವಿಭಾಗಗಳನ್ನ ಹುಟ್ಟುಹಾಕಿ ಬಿಡುತ್ತದೆ. ಒಂದನ್ನ ಎಚ್ಚರಿಕೆಯಿಂದ ಗಮನಿಸಬೇಕು, ಅಲ್ಲಿ ಒಂದು ಪಾತ್ರ ಎಚ್ಚರಿಕೆಯಿಂದಲೋ, ಕುತೂಹಲಕ್ಕಾಗಿಯೋ ಎಲ್ಲವನ್ನಾ ನೋಡುತ್ತಾ ಕೂತಿದೆ. ಆ ಕೂತಿರುವ ಪಾತ್ರ ಮಾತ್ರ ನಲ್ಲಿಯ ಬಳಿಗೆ ಬರುವುದಿಲ್ಲ. ಮತ್ತೊಂದು ಪಾತ್ರ ಮುದುಕಿಯದು, ಅವಳನ್ನ ಆ ಬುಟ್ಟಿಯ ಸಮೇತ ತೆಗೆದುಕೊಂಡು ಹೋಗಿ ಆ ರಾಶಿಗೆ ಹಾಕುತ್ತಾರೆ. ಗಮನಿಸಿ, ಆ ಮುದುಕಿಗೆ ಸಾವಿನ ನಂತರ ಆ "ಅನವಶ್ಯ" ವಸ್ತುಗಳ ರಾಶಿಯಲ್ಲಿ ತೆಗೆದು ಹಾಕಿ ಬಿಡುತ್ತಾರೆ. ಯಾವ ರೀತಿ ಆ ಸತ್ತುಹೋದ ಮುದುಕಿಯನ್ನ ರಾಶಿಗೆ ಹಾಕಿ ಹೊರಟು ಹೋಗುತ್ತಾರೋ ಅದೇ ರೀತಿ ಈ ಚಲನೆಯಲ್ಲಿ ಮನುಷ್ಯ ಕೂಡ ಆ ರಾಶಿಗೆ ಸೇರಿಹೋಗುತ್ತಾನೆ ಎಂಬೋ ಭೀಕರತೆಯನ್ನ ಸೂಚಿಸುತ್ತೆ. ಹೀಗೆ ನಮ್ಮ ಚಲನೆ ಎರಡು ವರ್ಗಗಳನ್ನ ಸೃಷ್ಠಿಸಿಯೇ ಸಾಗುತ್ತದೆ. ಅದು ಕಟುವಾಸ್ಥವ. ಆದ್ದರಿಂದ ಇಡೀ ನಾಟಕದ ಚಲನೆಯನ್ನ ಕಾಲದ ಚಲನೆಯಾಗಿ ವೀಕ್ಷಿಸಿದಾಗ ಕಾಲ ಮನುಷ್ಯನನ್ನ ಈ ವಿಭಾಗೀಕರಣಕ್ಕೆ ನುಕಿಯೇ ಮುಂದೇ ಸಾಗುತ್ತಾನೆಂದೆನಿಸುತ್ತಿದೆ. ಹೀಗೆ ಮನುಷ್ಯನ ಚಲನೆ ಅನಿವಾರ್ಯವಾಗಿ ಅಸ್ಥಿತ್ವದ ಪ್ರಶ್ನೆಯನ್ನ ಹೊತ್ತುಬಿಡುತ್ತದೆ.

ಮನುಷ್ಯ ಅಸ್ಥಿತ್ವವನ್ನ ಚಲನೆಯಲ್ಲಿ ಕಾಣಾಬೊಹುದ? ಇಡೀ ನಾಟಕ ಕಂಡಾಗ ಈ ಪ್ರಶ್ನೆ ಕಾಡಿದರೂ, ವಿರುದ್ದ ಪದ್ದತಿಯ ಮುಖಾಂತರ ಎರಡನ್ನೂ ತೋರಲು ಪ್ರಯತ್ನಿಸಿತ ಅಂತ ಅನ್ನಿಸುತ್ತೆ. ಏನದು ವಿರುದ್ದ ಪದ್ದತಿ ಎಂದರೆ ಕತ್ತಲ್ಲನ್ನ ತೋರಿಸಿ ಬೆಳಕನ್ನ ಅರಿಯೋದು ಎಂಬೋರೀತಿ. ಅಸ್ಥಿತ್ವ ಹಾಗು ಚಲನೆ ಎರಡು ವಿರುದ್ದ ಪದಗಳ ರೀತಿ ಕಾಣುತ್ತೆ. ಅದು ಎಷ್ಟು ಸರಿಯೋ ತಿಳ್ದಿಲ್ಲ. ಚಲಿಸುವವನು ಅಸ್ಥಿತ್ವವನ್ನ ಸ್ಥಾಪಿಸಲು ಸಾದ್ಯಾನ...? ಚಲನೇನೇ ಅಸ್ಥಿತ್ವವಾದಾಗ ಬೇರೆಯದೇ ಆದ ಅರ್ಥ ಸಾದ್ಯತೆಗಳು ತೆರೆದುಕೊಳ್ಳುತ್ತೆ. ಜಂಗಮ ಎಂಬೋದು ಒಂದು, ಸ್ಥಾವರ ಎಂಬೋದು ಮತ್ತೊಂದು, ಎರೆಡೂ ಒಂದೇ ಆಗುವುದಕ್ಕೆ ಸಾದ್ಯವಿಲ್ಲ. ಹೀಗೆ ಇಡೀ ನಾಟಕ ಎರೆಡು ವಿರುದ್ದ ದೃವಗಳನ್ನ ಸಂದಿಸುವಂತೆ ನಮ್ಮನ್ನ ಮಾಡುತ್ತಾ ಎಂಬೋ ಗುಮಾನಿ ಹುಟ್ಟುತ್ತೆ. ಹಾಗಾದಾಗ ನಾವು ಸ್ವಲ್ಪ ಬುದ್ದಿ ಖರ್ಚು ಮಾಡಬೇಕಾದದ್ದು ಅವಶ್ಯಕವೇ ಸರಿ. 

ಈ ನಾಟಕವನ್ನ ವಿಶ್ಲೇಷಿಸುವುದಕ್ಕಾಗಿ "Mari Boyd" ಎಂಬುವವರ "Aesthetics of Quietude" ಎಂಬ ಪುಸ್ತಕದಿಂದ ಕೆಲವು ಲೇಖನಗಳನ್ನ ನೋಡಬೇಕಾಗಿ ಬಂತು. ಅದರಲ್ಲಿ ಕೆಲವು ಸಾಲುಗಳನ್ನ ನೀಡಿ ಅದರಿಂದ ಏನಾದರೂ ಪಡೆಯಬಹುದ ಎಂತಲೂ ಪರಿಶೀಲಿಸಿದ್ದೀನಿ.

"...........found the power of passivity in the ensuing silence. When passivity is operative, the audience is able to experience the perspective of death, a hypothetical viewpoint outside human life..........."
".......Ōta notes that metaphoric death experiences such as illness, anaesthesia, or space travel can often elicit an overwhelming affirmation of life. In his theatre he wants his audience to have such near-death experiences so that they are assailed by feelings of strangeness and dislocation when stepping out of the theatre building and back into the ordinary world. Then they will be able to see their man-made environment with new eyes, with sadness and hope.
The three components of Ōta's code of divestiture-silence, stillness, and empty space-work together to create the metaphoric distance necessary for the defamiliarizing effect of the perspective of death........"
 ಸಾವನ್ನ  ನಾವು ಹೀಗೆ ಜಡವಾಗಿ ಕಾಣುವುದು ಹೇಗೆ ಎಂಬೋದು ನನಗೆ ಈ ನಾಟಕದಲ್ಲಿ ದಕ್ಕಲಿಲ್ಲ. ಸಾವು ಎಂಬೋ ವಸ್ತು ನನಗೆ ಈ ನಾಟಕದಲ್ಲಿ ಹೆಚ್ಚಿಗೆ ದಕ್ಕಲಿಲ್ಲ. ಬಹುಶಃ ಅದು ನನ್ನ ಮಿತಿಯೇ ಇರಬೇಕು. ಸಾವು ಎಂಬೋದು Hypothetcal ದೃಷ್ಟಿಕೋನವಾಗಿ ಉಳಿಯುತ್ತದ? ಸಾವಿನ ಬಗ್ಗೆ ಯಾವುದೇ ರೀತಿಯ ಅನುಭವ ನನಗೆ ಆಗದ್ದರಿಂದ ಅಥವ ಅದು ನನಗೆ ಹೆಚ್ಚು ಪ್ರಶ್ನೆಯೂ ಆಗದ್ದರಿಂದ, ಸಾವು ಕೂಡ ಅಲ್ಲಿ ಕೇವಲ ಒಂದು ಸನ್ನಿವೇಷ ಅಥವ ಬಂದವಾಗಿ ಮಾತ್ರ ಕಂಡಿತು. ಅದಕ್ಕಿಂತ ಹೆಚ್ಚಿನದಾಗಿ ಏನೂ ಕಾಣಲಿಲ್ಲ. ಇಡೀ ನಾಟಕದಲ್ಲಿ, ಅಲ್ಲಿನ ಪಾತ್ರಗಳ ಮುಖಗಳಲ್ಲಿ ಏನೋ ಒಂದು ರೀತಿಯ ಭಾವ(ನಿರ್ಭಾವ) ಇದ್ದದ್ದಂತೂ ನಿಜ. ಆದರೂ ಆ ನಾಟಕದಲ್ಲಿ ಪ್ರೀತಿಯಿತ್ತು, ಕಾಮವಿತ್ತು, ಹರೆಯ ಇತ್ತು, ದಾಂಪತ್ಯ ಇತ್ತು, ಜಗಳವಿತ್ತು, ದುಃಖವಿತ್ತು, ಹಾಗು ಅಲ್ಲೊಂದು ಸಾವೂ ಇತ್ತು. ಇವುಗಳನ್ನ ಹೇಳಲಿಕ್ಕೇಕೆ ಅತಿವಿಲಂಬಿತ, ಮೌನದ ಬಗೆಯನ್ನ ಸ್ವೀಕರಿಸಿದ ಎಂಬೋದು ಪ್ರಶ್ನೆ. ಕೇವಲ ಬೌದ್ದಿಕ ಕಸರತ್ತಿಗಾಗಿ ಆದದ್ದಿದು ಅಂತ ನನಗನ್ನಿಸ್ಸೋಲ್ಲ. ಭಾಷೆಯ ಅವಶ್ಯಕತೆ ಯಾಕೆ? ಎಂಬೋ ಪ್ರಶ್ನೆಯೊಂದಿಗೇನೆ, ಭಾಷೆಯನ್ನ ತೊರೆದು ನಿರೂಪಿಸಿದ್ದಾನೆ. ಅಮೂರ್ಥವಾದದ್ದನ್ನ ನಿರೂಪಿಸುವಾಗ ಭಾಷೇ ಕೂಡ ತೊಡಕಾಗಿ ಕಂಡರೆ ತಪ್ಪಿಲ್ಲ. ಆ ಭಾಷೆಯನ್ನೇ ಬಿಟ್ಟು ಅದನ್ನ ತಲುಪಿಸಬೊಹುದಾದ ಅನುಕೂಲತೆ ನಮಗೆ ರಂಗದಲ್ಲಿ ಇದೆ ಎಂಬೋದೇ ಮುಖ್ಯವಾಗುತ್ತೆ.   ಹಾಗಾದರೆ ಮಾಮೂಲಿ ಚಲನೆಯಿಂದ ನಾವು ಅದನ್ನ ಪಡೆಯಬೊಹುದಲ್ಲವ, ಆ ಪ್ರಶ್ನೆಯೇ ಅಪ್ರಸ್ಥುತವಾಗುತ್ತೆ. ಇಲ್ಲಿ ಒಟ್ಟೂ ಅಮೂರ್ಥ ಚಿಂತನೆಯನ್ನ ತಲುಪಿಸಿದ್ದೇ ಈ ಅತಿವಿಲಂಬಿತ, ಮೌನ ನಾಟಕ. ಅದ್ಯಾಕೆ ಅನ್ನೋದೇ ಸರಿಯಾದ ಪ್ರಶ್ನೆಯಲ್ಲ.
ಇನ್ನು ಈ ನಾಟಕದ ಮಟ್ಟಿಗೆ ನಾವು ಅರ್ಥ ಹುಡುಕುವ ಪರಿ, ಇದರ ಅರ್ಥ ಏನು ಎಂಬೋ ರೀತಿಯಿಂದಾನೆ ನಾವು ಶೋದಿಸ ಹೊರಡುತ್ತೇವೆ. ಇಲ್ಲಿ ಕಥೆಯೇ ಇಲ್ಲವಲ್ಲ, ಒಂದು ಸ್ಪಷ್ಟ ಬಂದವೂ ಇಲ್ಲವಲ್ಲ, ಎಂತಲ್ಲ ಹುಡುಕಲಿಕ್ಕೆ ಆರಂಬಿಸುತ್ತೇವೆ. ನಮ್ಮ "ಭಾರತೀಯ" ಎಂಬೋ ಮನಸ್ಸೊಂದಿದೆ ಹಾಗು ಅದು ಕಥಾನಕಗಳಿಗೆ ಒಗ್ಗಿ ಹೋಗಿದೆ. ಅಂದರೆ ಭಾರತೀಯ ತತ್ವಶಾಸ್ತ್ರವಿರಲಿ, ಸೌಂದರ್ಯ ಮೀಮಾಂಸೆಯಿರಲಿ, ಸಾಹಿತ್ಯ ಮೀಮಾಂಸೆಯಿರಲಿ, ಎಲ್ಲವೂ ಮೂಲ ತತ್ವವಾದ ಸೃಷ್ಠಿ, ಸ್ಥಿತಿ, ಲಯ ಎಂಬುವುದನ್ನ ಬಿಟ್ಟು ಬರಲಾರದು. ಇದು ತಪ್ಪು ಎಂತಲೋ, ಸರಿ ಎಂತಲೋ, ಅದನ್ನ ನಾನು ಪ್ರಶ್ನಿಸುತ್ತಿಲ್ಲ. ಆದರೆ ಭಾರತೀಯ ಮನಸ್ಸು ಶತಮಾನಗಳಿಂದ ಈ ತತ್ವಕ್ಕೆ ಒಗ್ಗಿ ಹೋದದ್ದು, ತಕ್ಷಣಕ್ಕೆ ಅರ್ಥ ಹಾಗು ಕಥೆ ಹುಡುಕುವುದಕ್ಕೆ ತೊಡಗುತ್ತದೆ. ಅದು ನಮ್ಮ ಬಾರತೀಯತೆ. ಅದು ನಮ್ಮ ಮೂಲ ಧರ್ಮ. ಆದರೆ ಅದರ ಮುಖಾಂತರವಾಗಿಯೇ ಎಲ್ಲವನ್ನಾ ನೋಡುವ ಕ್ರಮವಾಗಲೀ, ಆ ಮಾರ್ಗವನ್ನ ತೊರೆದದ್ದು ಸರಿಯಲ್ಲ ಎಂಬೋದಾಗಲಿ ಸರಿಯಲ್ಲ. ಬದುಕನ್ನ ಒಂದೇ ದೃಷ್ಟಿಯಲ್ಲಿ ಕಾಣುತ್ತೇನೆ ಎಂಬೋದು ಮೂಲಭೂತವಾದಿಯ ನಿಲುವಾಗುತ್ತೆ. ಎಲ್ಲದ್ದರಿಂದಲೂ ಸ್ವೀಕರಿಸೋ ಗುಣ ನಮಗೆ ಬೇಕಾಗುತ್ತೆ. ಭಾರತೀಯ ಸಾಹಿತ್ಯ ಮೀಮಾಂಸೆ ಸಾಹಿತ್ಯವನ್ನ "ರಸ" , ರಸದ ನಂತರ "ಆನಂದ", ಆನಂದದ ನಂತರ "ಬ್ರಹ್ಮ". ಇದು ನಮ್ಮ ಮೀಮಾಂಸೆ, ಹೀಗಾದಾಗ ಆತ್ಮ ಕೇಂದ್ರಿತವಾದ, ಅಂದರೆ ಸ್ಥಿರವಾದ ಆತ್ಮ ಎಂಬೋದೊಂದಿದೆ ಎಂತಲೂ, ಬ್ರಹ್ಮ ಎಂಬೋದೂ ಒಂದಿದೇ ಎಂತಲೂ ಪರಿಗಣಿಸಿಯೇ ಕಾಣುವುದು. "Rasa, which is universal bliss of self or atman coloured by the emotional tone of Drama". ಈಗ ಈ ನಮ್ಮ water Station ನಾಟಕ ಜಪಾನಿನ ನಾಟಕ. ಜಪಾನೀಯರ ನಂಬಿಕೆಗಳೇನೂ, ಅವರ ತತ್ವಗಳೇನೂ ಎಂಬೋದು ತಿಳಿಯುವ ಅವಶ್ಯಕತೆ ಇದೆ. ಒಂದು ಕಲಾಕೃತಿಯನ್ನ, ಒಂದು ನಾಟಕವನ್ನ ದಕ್ಕಿಸಿಕೊಳ್ಳಲಿಕ್ಕೆ ಇಷ್ಟೆಲ್ಲ ಕಸರತ್ತುಗಳು ಬೇಕ ಎಂದರೆ, ಹೌದು ಬೇಕು. ಎಲ್ಲಿಯದೋ ಜಪಾನಿನ ನಾಟಕವನ್ನ ನಮ್ಮ ನಾಟಕದಂತೆ ನಾವು ಕಾಣಬಾರದು. ಹಾಗು ಅದು ಹಾಗೆ ಇರಬೇಕು ಎಂತಲೂ ಬೇಕಿಲ್ಲ, ಆ ಮುಖಾಂತರ ನಾವು ಬಿನ್ನವಾದ ಮತ್ತೊಂದು ಸಂಸ್ಕೃತಿಗೆ, ಜೀವನ ವಿದಾನಕ್ಕೆ ಮುಖಾಮುಖಿಯಾಗಿ ಅವರಿಂದ ಬದುಕನ್ನ ಕಾಣುವ ಬಗೆಯಾಗಿದೆ. ಜಪಾನೀಯರ ಮೇಲೆ ಬೌದ್ದ ದರ್ಮ ಪ್ರಭಾವಿಸಿದೆ. ಹಾಗಾದರೆ ಅವರ ಮೀಮಾಂಸೆ ಎಂತಹದಿರಬೊಹುದು? ಬುದ್ದ ದರ್ಮ ಆತ್ಮವನ್ನ ನಿರಾಕರಿಸುತ್ತೆ, ಆದಿ ಅಂತ್ಯ ಎಂಬೋ ಕಾರಣ ಮೀಮಾಂಸೆಯನ್ನ ತೊರೆದು ಸದಾ ಚಲನೆಯಲ್ಲಿ ಇರುವ ಮದ್ಯಮ ಮೀಮಾಂಸೆಯನ್ನ ಸ್ವೀಕರಿಸುತ್ತೆ. ಹೀಗೆ ಮದ್ಯಮ ಮಾರ್ಗದಲ್ಲಿ ಸದಾ ಚಲನೆಯಲ್ಲಿ ಇರುತ್ತದೆ ಹಾಗು ಯಾವುದಕ್ಕೂ ಸ್ವಾತಂತ್ರ್ಯ ಅಸ್ಥಿತ್ವವಿರುವುದಿಲ್ಲ. ಆದ್ದರಿಂದ ಅರ್ಥ ಎಂಬೋದನ್ನ ಒಟ್ಟೂ ಬಂದದಲ್ಲಿ ಪರಿಶೀಲಿಸಬೇಕಾಗಬೊಹುದು. ಬೌದ್ದ ಮೀಮಾಂಸೆಯನ್ನ ಪ್ರಚುರಪಡಿಸಿದ ನಾಗಾರ್ಜುನನಬಗ್ಗೆ ಬರೆಯುತ್ತ DouglasBerger (Email: dberger@siu.edu  Southern Illinois University) ಎಂಬೋ ವಿದ್ವಾಂಸರು ಈ ರೀತಿ ಹೇಳುತ್ತಾರೆ.  ಈ ಸಾಲುಗಳಿಂದ ಬೌದ್ದ ಮೀಮಾಂಸೆಯನ್ನ ಸ್ವಲ್ಪ ಮಟ್ಟಿಗಾದರೂ ಗುರುತಿಸಬೊಹುದೆಂದು ಭಾವಿಸಿದ್ದೇನೆ. Nagarjuna’s central concept of the “emptiness (sunyata) of all things (dharmas),” which pointed to the incessantly changing and so never fixed nature of all phenomena, served as much as the terminological prop of subsequent Buddhist philosophical thinking as the vexation of opposed Vedic systems. The concept had fundamental implications for Indian philosophical models of causation, substance ontology, epistemology, conceptualizations of language, ethics and theories of world-liberating salvation, and proved seminal even for Buddhist philosophies in India, Tibet, China and Japan very different from Nagarjuna’s own. Indeed it would not be an overstatement to say that Nagarjuna’s innovative concept of emptiness, though it was hermeneutically appropriated in many different ways by subsequent philosophers in both South and East Asia, was to profoundly influence the character of Buddhist thought.
ಇದು ನನಗೆ ನಾಟಕ ತೆರೆದುಕೊಡ ಬಗೆ. ನಾಟಕದ ಬಗೆಗೆ ಹೆಚ್ಚು ತಿಳುವಳಿಕೆ ನನಗೆ ಇಲ್ಲ. ಆದ್ದರಿಂದ ತಪ್ಪುಗಳಾಗಿದ್ದಲ್ಲಿ ತಿಳಿಸಿ. ಒಟ್ಟಿನಲ್ಲಿ ನಾಟಕದ ಮೊದಲು ನಂಗೆ "ನಾಟಕ ಯಾಕೆ" ಎಂಬೋ ಪ್ರಶ್ನೆ ಕಾಡಿತು. ನಾಟಕ ನೋಡಿದ ನಂತರವೂ ಆ ಪ್ರಶ್ನೆ ಹಾಗೆ ಉಳಿಯಿತು ಕೂಡ. ನಾಟಕ ನೋಡಿ ಕೂಡ ನನಗೆ ನಾಟಕ ಯಾಕೆ ಎಂಬೋದು ತಿಳೀಲಿಲ್ಲ. ಕವನ ಬರೆದ ನಂತರವೂ ಕವನ ಯಾಕೆ ಬರೆದೆ ಎಂಬೋದು ಹಾಗೆ ಉಳಿದಿದೆ. ಇದೂ ಕೂಡ ಅಷ್ಟೆ ಅನ್ನಿಸುತ್ತೆ. "ದೇವರು ಹುಟ್ಟಿದ್ದೂ ಹಾಗು ನಾಟಕ ಹುಟ್ಟಿದ್ದು ಎರಡೂ ಕೂಡ ಆದಿಮನ ಸತ್ಯ ಶೊದನೆಯ ಅಗತ್ಯದಿಂದಾಗಿಯೆ" ಎಂದು ಪ್ರಸನ್ನರು ತಮ್ಮ ನಟನೆಯ ಪಾಟಗಳಲ್ಲಿ ತಿಳಿಸಿದ್ದಾರೆ. ನಂಗೆ ದೇವರೂ ಎಂಬೋದೂ ಗೊತ್ತಿಲ್ಲ, ಹುಟ್ಟು ಎಂಬೋದೂ ಗೊತ್ತಿಲ್ಲ, ಸತ್ಯ ಎಂಬೋದೂ ಗೊತ್ತಿಲ್ಲ. ಆದ್ದರಿಂದ ನಾಟಕ ಯಾಕೆ ಎಂಬೋದೂ.........
(ತಮ್ಮ ಜೊತೆಯಲ್ಲಿ ನನ್ನನ್ನು ಕರೆದುಕೊಂಡು ಹೋದ ಆಶೋಕರಿಗೆ, ಸುಂದರ ರಾಯರಿಗೆ, ಅತ್ಯುತ್ತಮ ಗ್ರಹಿಕೆಯನ್ನ ನೀಡಿದ ಶ್ರೀ ನರೇಂದ್ರ ಪೈ ಗಳಿಗೆ ವಂದನೆಗಳನ್ನ ತಿಳಿಸುತ್ತೇನೆ. ಹಾಗು ನಾಟಕವನ್ನ ಆಯೋಜಿಸಿದ ಉಡುಪಿಯ ರಥಬೀದಿಗೆಳೆಯರಿಗೆ, ಉತ್ತಮವಾಗಿ ಪ್ರದರ್ಶಿಸಿದ ನೀನಾಸಂ ತಂಡಕ್ಕೆ ವಂದನೆಗಳು)